ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ: ಭಾರತ ತಂಡಗಳ ಗೆಲುವಿನ ಆರಂಭ


Team Udayavani, Aug 17, 2019, 11:02 PM IST

Hockey

ಟೋಕಿಯೊ: ಒಲಿಂಪಿಕ್‌ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಗಳೆರಡೂ ಗೆಲುವಿನ ಆರಂಭ ಪಡೆದಿವೆ. ಶನಿವಾರದ ಮುಖಾಮುಖೀಗಳಲ್ಲಿ ಮೊದಲು ವನಿತೆಯರು ಆತಿಥೇಯ ಜಪಾನ್‌ಗೆ 2-1ರಿಂದ ಆಘಾತವಿಕ್ಕಿದರೆ, ಬಳಿಕ ಪುರುಷರು ಮಲೇಶ್ಯ ಮೇಲೆ ಸವಾರಿ ಮಾಡಿ 6-0 ಅಂತರದ ಪ್ರಚಂಡ ಗೆಲುವು ಸಾಧಿಸಿದರು.

ಮಿಂಚಿದ ಗುರ್ಜೀತ್‌ ಕೌರ್‌
ಭಾರತದ ಪೆನಾಲ್ಟಿ ಕಾರ್ನರ್‌ ಸ್ಪೆಷಲಿಸ್ಟ್‌, 23ರ ಹರೆಯದ ಗುರ್ಜೀತ್‌ ಕೌರ್‌ ಎರಡೂ ಗೋಲು ಬಾರಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಭಾರತಕ್ಕೆ ಮೊದಲ 10 ನಿಮಿಷದಲ್ಲೇ ಗೋಲು ಗಳಿಕೆಯ ಕೆಲವು ಅವಕಾಶ ಲಭಿಸಿತ್ತು. 9ನೇ ನಿಮಿಷದಲ್ಲಿ ಗುರ್ಜೀತ್‌ ಕೌರ್‌ ಖಾತೆ ತೆರೆಯುವ ಮೂಲಕ ಮುನ್ನಡೆ ಒದಗಿಸಿದರು. ಈ ಗೋಲು ಪೆನಾಲ್ಟಿ ಕಾರ್ನರ್‌ ಮೂಲಕ ಬಂತು.

ಜಪಾನ್‌ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದ್ದರಿಂದ 16ನೇ ನಿಮಿಷದಲ್ಲೇ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಯಿತು. ಅಕಿ ಮಿತ್ಸುಹಶಿ ಫೀಲ್ಡ್‌ಗೋಲ್‌ ಮೂಲಕ ಭಾರತದ ಮೇಲೆರಗಿದರು.

ಮಧ್ಯಾಂತರದ ವೇಳೆ ಪಂದ್ಯ 1-1 ಸಮಬಲದಲ್ಲಿತ್ತು. 3ನೇ ಕ್ವಾರ್ಟರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸುತ್ತ ಹೋಯಿತು. ಪರಿಣಾಮ, 35ನೇ ನಿಮಿಷದಲ್ಲಿ ಗುರ್ಜೀತ್‌ ಬಾರಿಸಿದ ಗೋಲು. ಅವರು ಮತ್ತೂಂದು ಜಬರ್ದಸ್ತ್ ಪೆನಾಲ್ಟಿ ಕಾರ್ನರ್‌ ಹೊಡೆತದ ಮೂಲಕ ಭಾರತಕ್ಕೆ ಮುನ್ನಡೆ ತಂದಿತ್ತರು. ಈ ಮುನ್ನಡೆ ಕೊನೆಯ ತನಕ ಉಳಿದುಕೊಂಡಿತು.

16 ಆಟಗಾರ್ತಿಯರು
ಒಲಿಂಪಿಕ್‌ ಗೇಮ್‌ ನಿಯಮಾವಳಿಯಂತೆ ಎರಡೂ ತಂಡಗಳು 16 ಆಟಗಾರರನ್ನು ಕಣಕ್ಕಿಳಿಸಿದವು. ಬದಲಿ ಆಟಗಾರರಾಗಿ ಅವಕಾಶ ಪಡೆದರು. ಜಪಾನಿನ ಅಕಿ ಮಿತ್ಸುಹಶಿ ಬದಲಿ ಆಟಗಾರ್ತಿಯಾಗಿಯೇ ಬಂದು ಗೋಲು ಹೊಡೆದಿದ್ದರು.

ಇದೇ ಕೂಟದ ಪುರುಷರ ವಿಭಾಗದ ಪಂದ್ಯದಲ್ಲೂ ಭಾರತ ಗೆಲುವಿನ ಆರಂಭ ಮಾಡಿದೆ. ಮಲೇಶ್ಯವನ್ನು 6-0 ಗೋಲುಗಳಿಂದ ಮಣಿಸಿ ಮೆರೆದಾಡಿದೆ.

ಆರಂಭದ ನಿಮಿಷದಲ್ಲೇ ಮಲೇಶ್ಯ ಮೇಲೆ ಮುನ್ನುಗ್ಗಿ ಹೋದ ಭಾರತ, ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡಿದ್ದರೆ ಇನ್ನೂ ಏಳೆಂಟು ಗೋಲುಗಳನ್ನು ಬಾರಿಸಬಹುದಿತ್ತು.

ಭಾರತದ ಪರ ಗುರ್ಜಿಂದರ್‌ ಸಿಂಗ್‌ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಗುರುಸಾಹಿಬ್‌ಜೀತ್‌ ಸಿಂಗ್‌ (18ನೇ, 56ನೇ ನಿಮಿಷ) ಮತ್ತು ನಾಯಕ ಮನ್‌ದೀಪ್‌ ಸಿಂಗ್‌ (33ನೇ, 46ನೇ ನಿಮಿಷ) ತಲಾ 2 ಗೋಲು ಹೊಡೆದರು. ಕೊನೆಯ ಗೋಲನ್ನು ಎಸ್‌.ವಿ. ಸುನೀಲ್‌ ಸಿಡಿಸಿದರು (60ನೇ ನಿಮಿಷ).ಭಾರತ ರವಿವಾರ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.