ಪ್ರೊ ಕಬ್ಬಡಿ: 5ನೇ ಗೆಲುವು ಸಾಧಿಸಿದ ಬುಲ್ಸ್‌


Team Udayavani, Aug 17, 2019, 11:05 PM IST

kabbaddi

ಚೆನ್ನೆ: ಪ್ರೊ ಕಬಡ್ಡಿ ಏಳನೇ ಆವೃತ್ತಿಯ ಚೆನ್ನೈ ಚರಣದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಆತಿಥೇಯ ತಮಿಳ್‌ ತಲೈವಾಸ್‌ಗೆ ಆಘಾತವಿಕ್ಕಿ 5ನೇ ಗೆಲುವು ಒಲಿಸಿಕೊಂಡಿದೆ.

ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 32-21 ಅಂಕಗಳ ಅಂತರದಿಂದ ತಲೈವಾಸ್‌ ತಂಡವನ್ನು ಪರಾಭವಗೊಳಿಸಿತು. ತೀವ್ರ ಪೈಪೋಟಿಯಿಂದ ಕೂಡಿದ ಬೆಂಗಾಲ್‌ ವಾರಿಯರ್-ದಬಾಂಗ್‌ ಡೆಲ್ಲಿ ನಡುವಿನ ದ್ವಿತೀಯ ಮುಖಾಮುಖೀ 30-30ರಿಂದ ಟೈ ಆಯಿತು.

ಮತ್ತೆ ಮಿಂಚಿದ ಪವನ್‌
ಪವನ್‌ ಸೆಹ್ರಾವತ್‌ (11 ಅಂಕ) ಎಂದಿನಂತೆ ಭರ್ಜರಿ ರೈಡಿಂಗ್‌ ಪ್ರದರ್ಶಿಸಿ ಬೆಂಗಳೂರನ್ನು ಗೆಲ್ಲಿಸಿದರು. ಅವರು 20 ಸಲ ತಲೈವಾಸ್‌ ಕೋಟೆಗೆ ಲಗ್ಗೆ ಇಟ್ಟರು. 11 ಸಲ ಯಶಸ್ವಿಯಾಗಿ ಅಂಕಗಳೊಂದಿಗೆ ಮರಳಿದರೆ, 3 ಸಲ ಎದುರಾಳಿ ಕೈಗೆ ಸಿಕ್ಕಿ ಔಟಾದರು. 2 ಬೋನಸ್‌ ಅಂಕವನ್ನು ಪಡೆದದ್ದು ಪವನ್‌ ಸೆಹ್ರಾವತ್‌ ಮಿಂಚಿನ ಆಟಕ್ಕೆ ಸಾಕ್ಷಿಯಾಗಿತ್ತು. ಸೌರಭ್‌ ನಡಾಲ್‌ (5 ಅಂಕ) ಅತ್ಯುತ್ತಮ ಟ್ಯಾಕಲ್‌ ನಡೆಸಿದರು. ಆದರೆ ತಂಡದ ನಾಯಕ ರೋಹಿತ್‌ ಕುಮಾರ್‌ ರೈಡಿಂಗ್‌ನಲ್ಲಿ ವಿಫ‌ಲರಾದರು. 13 ರೈಡಿಂಗ್‌ನಿಂದ 2 ಅಂಕ ಮಾತ್ರ ತರಲು ಅವರಿಗೆ ಸಾಧ್ಯವಾಯಿತು.

ಬೆಂಗಳೂರು ತನ್ನ ಹಿಂದಿನ ಪಂದ್ಯದಲ್ಲಿ 35-33ರಿಂದ ಯುಪಿ ಯೋಧಾ ವಿರುದ್ಧ ಸೋಲುಂಡಿತ್ತು. ಈಗ ಮತ್ತೆ ಗೆಲುವಿನ ಟ್ರ್ಯಾಕ್‌ ಏರಿದೆ.

ತವರಲ್ಲಿ ಮುಖಭಂಗ
ತಾರಾ ಆಟಗಾರರ ವೈಫ‌ಲ್ಯ ತಮಿಳ್‌ ತಲೈವಾಸ್‌ಗೆ ಮುಳುವಾಯಿತು. ರೈಡರ್‌ ಅಜಯ್‌ ಕುಮಾರ್‌ (4 ಅಂಕ), ರಾಹುಲ್‌ ಚೌಧರಿ (2 ಅಂಕ) ರೈಡಿಂಗ್‌ನಲ್ಲಿ ಜಾದೂ ಮಾಡಲಿಲ್ಲ. ಆಲ್‌ರೌಂಡರ್‌ ಮಂಜಿತ್‌ ಚಿಲ್ಲಾರ್‌ (1 ಅಂಕ) ಪವಾಡ ಸೃಷ್ಟಿಸಲಿಲ್ಲ. ರೈಡರ್‌ ಶಬ್ಬೀರ್‌ ಬಾಪು ಕೇವಲ 3 ಅಂಕಕ್ಕೆ ಸೀಮಿತರಾದರು. ಇದರಿಂದ ತಂಡ ತವರಲ್ಲೇ ಮುಖಭಂಗ ಅನುಭವಿಸಿತು.

ಪ್ರೊ ಕಬ್ಬಡಿ: ಬೆಂಗಾಲ್‌-ಡೆಲ್ಲಿ ಪಂದ್ಯ ಟೈ
ಚೆನ್ನೈ ಚರಣದ ದಿನದ ಎರಡನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ -ದಬಾಂಗ್‌ ಡೆಲ್ಲಿ ನಡುವಿನ ಪಂದ್ಯ 30-30 ಅಂಕಗಳ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಬೆಂಗಾಲ್‌ ಪರ ರೈಡರ್‌ ಕೆ.ಪ್ರಪಂಜನ್‌ (10 ಅಂಕ) ಹಾಗೂ ಜೀವಾ ಕುಮಾರ್‌ (4 ಅಂಕ) ಅದ್ಭುತ ಟ್ಯಾಕಲ್‌ ನಡೆಸಿದರು. ದಬಾಂಗ್‌ ಡೆಲ್ಲಿ ಪರ ನವೀನ್‌ ಕುಮಾರ್‌ (11 ಅಂಕ), ಚಂದ್ರನ್‌ ರಂಜಿತ್‌ (6 ಅಂಕ), ಜೋಗೀಂದರ್‌ ನರ್ವಲ್‌ (4 ಅಂಕ)ಗಳಿಸಿದರು.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.