ಧರ್ಮ ಒಡೆಯಲು ಪ್ರಯತ್ನಿಸಿ ಅಧಿಕಾರ ಕಳೆಕೊಂಡರು: ವಿಶ್ವನಾಥ್
Team Udayavani, Aug 19, 2019, 3:00 AM IST
ಕೆ.ಆರ್.ನಗರ: ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಪರಾಭವಗೊಂಡು, ಬಸವಣ್ಣನ ತತ್ವ ಪಾಲಿಸದ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಟೀಕಿಸಿದರು.
ಪಟ್ಟಣದ ಪುರಸಭಾ ಬಯಲು ರಂಗ ಮಂದಿರದಲ್ಲಿ ನಡೆದ ಬಸವ ಜಯಂತಿಯಲ್ಲಿ ವೀರಶೈವ ಲಿಂಗಾಯತ ಹಿಂದೂ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಧರ್ಮ ಒಡೆಯುವವರು ಮತ್ತು ವಚನ ಪಾಲಿಸದವರು ಪತನದ ಹಾದಿ ಹಿಡಿಯುತ್ತಾರೆ ಎಂಬುದಕ್ಕೆ ಈ ಎರಡು ಘಟನೆಗಳು ಜ್ವಲಂತ ಸಾಕ್ಷಿ ಎಂದರು.
ಶಾಸಕರ ಮನಸ್ಸಿಗೆ ಘಾಸಿ: ಮಾತಿನುದ್ದಕ್ಕೂ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಮಾಜಿ ಸಚಿವರು, ಶಾಸಕರ ಮನಸ್ಸಿಗಾದ ಘಾಸಿಯಿಂದಲೇ ಸಮ್ಮಿಶ್ರ ಸರ್ಕಾರ ಪತನಗೊಂಡಿತು ಎಂದು ತಿಳಿಸಿದರು.
ದೇವರಿಗೆ ಬಿಟ್ಟಿದ್ದೇನೆ: ತಾನು ಸದಾ ಸತ್ಯವನ್ನೇ ಮಾತನಾಡುತ್ತೇನೆ. ಇದರಿಂದ ಕೆಲವರು ತನ್ನನ್ನು ವಿವಾದಾತ್ಮಕ ವ್ಯಕ್ತಿ ಎಂದು ಕರೆಯುತ್ತಾರೆ. ಆದರೆ, ಬಸವಣ್ಣನ ನೆಲದಲ್ಲಿ ಹುಟ್ಟಿರುವ ನಾವು ಅಂಜಿಕೆಗಳಿಗೆ ಹೆದರದೆ ಸತ್ಯ ಹೇಳಿ ಮುಂದಿನದನ್ನು ದೇವರಿಗೆ ಬಿಡಬೇಕೆಂದರು.
ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಹಾಗಾಗಿ ಸ್ವರ್ಗದ ಮಾತನಾಡದ ಎಚ್.ಡಿ.ಕುಮಾರಸ್ವಾಮಿ ನರಕ ಸೃಷ್ಟಿಯ ವರ್ತನೆ ತೋರಿಸಿ ತಮ್ಮ ಅಧಿಕಾರ ಕಳೆದುಕೊಂಡರು ಎಂದು ಛೇಡಿಸಿದ ಎಚ್.ವಿಶ್ವನಾಥ್, ಧರ್ಮದ ವಿಚಾರದಲ್ಲಿ ಮೂಗು ತೂರಿಸುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ