ಸಾವಿರಾರು ಜಾನುವಾರು ಬೀದಿಪಾಲು

ಜಮಖಂಡಿ ನಿರಾಶ್ರಿತರಿಗೆ ಮಕ್ಕಳ ವಿದ್ಯಾಭ್ಯಾಸ, ಜಾನುವಾರು ರಕ್ಷಣೆಯೇ ಸವಾಲು

Team Udayavani, Aug 24, 2019, 1:36 PM IST

24-April-26

ಜಮಖಂಡಿ: ನಗರದ ಎಪಿಎಂಸಿ ಆವರಣದಲ್ಲಿ ಆಶ್ರಯ ಪಡೆದಿರುವ ಜಾನುವಾರುಗಳು.

ಜಮಖಂಡಿ: ಮಹಾರಾಷ್ಟ್ರದಲ್ಲಿ ಜು.27ರಿಂದ ಆ.18ರ ವರೆಗೆ ಸತತವಾಗಿ ಧಾರಾಕಾರ ಸುರಿದ ಮಳೆಯಿಂದ ತಾಲೂಕಿನ ಕೃಷ್ಣಾನದಿ ನಿರೀಕ್ಷೆಗೂ ಮೀರಿ ಹರಿದ ಪರಿಣಾಮ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗ ಸಾವಿರಾರು ಜಾನುವಾರುಗಳಿಗೆ ಮೇವು ಕೊರತೆ ಕಂಡು ಬಂದಿದೆ.

ಕೃಷ್ಣಾನದಿ ಪ್ರವಾಹದಿಂದ ತಾಲೂಕಿನ ಕಂಕಣವಾಡಿ, ಮುತ್ತೂರ, ಮೈಗೂರ ಸಹಿತ 27 ಗ್ರಾಮಗಳ ರೈತರು ಮನೆ ಕಳೆದುಕೊಂಡಿದ್ದು, ಜಾನುವಾರುಗಳನ್ನು ರಸ್ತೆ ಬದಿಯಲ್ಲಿ ಸಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಪ್ರವಾಹ ಇಳಿಮುಖವಾಗಿದ್ದರೂ ವಾಸಿಸಲು ಯೋಗ್ಯ ಸ್ಥಳ ಲಭಿಸದ ಕಾರಣ ಆಶ್ರಯ ಕೇಂದ್ರ, ರಸ್ತೆ ಬದಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಿರಾಶ್ರಿತರಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಜಾನುವಾರುಗಳ ರಕ್ಷಣೆ ದೊಡ್ಡ ಸವಾಲಾಗಿದೆ.

ತಾಲೂಕಿನ 42 ಕೇಂದ್ರಗಳಲ್ಲಿ 38,305 ಜಾನುವಾರಗಳಿದ್ದು, ಪ್ರತಿನಿತ್ಯ ಅಂದಾಜು 6 ಟನ್‌ ಮೇವು ಅವಶ್ಯಕತೆಯಿದೆ. ತಾಲೂಕಾಡಳಿತ ಶಕ್ತಿ ಮೀರಿ ನಿರಾಶ್ರಿತರ ರೈತರ ಜಾನುವಾರುಗಳಿಗೆ ಒಣ-ಹಸಿ ಮೇವು ವಿತರಿಸುತ್ತಿದೆ. ತಾಲೂಕಾಡಳಿತ ಆ.15ರವರೆಗೆ 23 ಲಕ್ಷ ರೂ.ಗಳಲ್ಲಿ ಜಾನುವಾರುಗಳಿಗೆ 6.02 ಟನ್‌ ಒಣಮೇವು ಮತ್ತು 16.67 ಟನ್‌ ಹಸಿಮೇವು ವಿತರಣೆ ಮಾಡಿದ್ದು, ಪರಿಹಾರ ಕೇಂದ್ರದಲ್ಲಿ 15 ಟನ್‌ ಹಸಿಮೇವು ಸಂಗ್ರಹವಿದೆ. ತಾಲೂಕಿನ ದಾನಿಗಳು ನಿರಾಶ್ರಿತರಿಗೆ ಜಾನುವಾರುಗಳಿಗೆ 5.7 ಒಣಮೇವು ಮತ್ತು 3.8 ಟನ್‌ ಹಸಿಮೇವನ್ನು ತಾಲೂಡಳಿತ ನಿರ್ಮಿಸಿರುವ ಪರಿಹಾರ ನಿಧಿ ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.

ತಾಲೂಕಿನಲ್ಲಿ ಕೃಷ್ಣಾನದಿ ಪ್ರವಾಹಕ್ಕೆ ಶಿರಗುಪ್ಪಿ ಗ್ರಾಮದ 3,750 ಜಾನುವಾರು, ಮೈಗೂರ-2,344, ಕಂಕಣವಾಡಿ-2,865, ಮುತ್ತೂರ-1,855, ಕಡಕೋಳ-2,901, ಸನಾಳ-738, ಆಲಗೂರ-2,154, ಶೂರಪಾಲಿ-3,000, ತುಬಚಿ-1,659, ಜಂಬಗಿ ಕೆ.ಡಿ.-755, ಜಂಬಗಿ ಬಿ.ಕೆ.-4,961, ಟಕ್ಕೋಡ-1,915, ಟಕ್ಕಳಕಿ-926, ಹಿರೇಪಡಸಲಗಿ-3,508, ನಾಗನೂರ-510, ಚಿಕ್ಕಪಡಸಲಗಿ 1,214, ಕವಟಗಿ-832, ಕುಂಚನೂರ-740, ಚಿನಗುಂಡಿ-140, ಬಿದರಿ-170, ಜನವಾಡ-250, ಕುಂಬಾರಹಳ್ಳ-535, ಅಡಿಹುಡಿ-38, ಜಮಖಂಡಿ ಗ್ರಾಮೀಣದಲ್ಲಿ 542 ಸಹಿತ 38,305 ಜಾನುವಾರುಗಳನ್ನು 42 ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿವೆ.

ತಾಲೂಕಾಡಳಿತ ಆಶ್ರಯ ಪಡೆದಿರುವ ಕೇಂದ್ರಗಳಲ್ಲಿ ಎಲ್ಲ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಒಣ ಮೇವು, ಹಸಿಮೇವು ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎಲ್ಲ ಕಡೆ ಪ್ರವಾಹ ಸ್ಥಿತಿ ತಲೆದೂರಿರುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಮೇವು ಲಭಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮೇವು ಕೊರತೆ ನೀಗಿಸಲಾಗುತ್ತಿದೆ. ನಿರಾಶ್ರಿತರ ವ್ಯವಸ್ಥೆಗಾಗಿ 1 ಕೋಟಿ ಅನುದಾನ ಬಂದಿದೆ. ಜನರಿಗೆ, ಜಾನುವಾರುಗಳಿಗೆ ತೊಂದರೆ ಆಗದ ರೀತಿಯಲ್ಲಿ ತಾಲೂಕಾಧಿಕಾರಿಗಳು ಎಚ್ಚರಿಕೆ ವಹಿಸಿ ಕೆಲಸ ಮಾಡುತ್ತಿದ್ದಾರೆ. ಒಂದು ಜಾನುವಾರಕ್ಕೆ ಪ್ರತಿನಿತ್ಯ 15ರಿಂದ 20 ಕೆಜಿ ಮೇವು ವಿತರಣೆ ಮಾಡಲಾಗುತ್ತಿದೆ.
ಪ್ರಶಾಂತ ಚನಗೊಂಡ,
ಜಮಖಂಡಿ ತಹಶೀಲ್ದಾರ್‌

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.