ರವಿಚಂದ್ರನ್‌ ಪುತ್ರನ “ಲಿಪ್‌ಲಾಕ್‌’ ಪುರಾಣ

ಪ್ರಾರಂಭ ಟೀಸರ್‌ನಲ್ಲಿ ಮನೋರಂಜನ್‌ ಕಿಸ್ಸಿಂಗ್‌

Team Udayavani, Aug 26, 2019, 3:03 AM IST

Prarambha

ಇದುವರೆಗೆ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ಗಷ್ಟೇ ಸೀಮಿತ ಎನಿಸಿಕೊಂಡಿದ್ದ ಲಿಪ್‌ಲಾಕ್‌ ಮತ್ತು ಕಿಸ್ಸಿಂಗ್‌ ದೃಶ್ಯಗಳು ಕನ್ನಡಕ್ಕೇನೂ ಹೊಸದಲ್ಲ. ಆದರೆ, ಈಗ ಅದು ಹೆಚ್ಚುತ್ತಿದೆ ಎಂಬುದೇ ಈ ಹೊತ್ತಿನ ಸುದ್ದಿ. ಈ ಬಾರಿ ಇಂಥದ್ದೊಂದು ಲಿಪ್‌ಲಾಕ್‌ ಸುದ್ದಿಗೆ ಕಾರಣ ಆಗಿರೋದು ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌. ಹೌದು, ಮನೋರಂಜನ್‌ “ಪ್ರಾರಂಭ’ ಚಿತ್ರದ ದೃಶ್ಯವೊಂದರಲ್ಲಿ ಲಿಪ್‌ಲಾಕ್‌ ಮಾಡಿದ್ದಾರೆ.

ಆ ಸೀನ್‌ ಇರುವ ಟೀಸರ್‌ವೊಂದು ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆ ಆ ಸುದ್ದಿಯದ್ದೇ ಮಾತು. ಹೊಸ ನಟಿ ಕೀರ್ತಿ ಕಲ್ಕೇರಿ ನಡುವಿನ ಸೀನ್‌ನಲ್ಲಿ ಮನೋರಂಜನ್‌ ಲಿಪ್‌ಲಾಕ್‌ ಮಾಡಿದ್ದಾರೆ. ರವಿಚಂದ್ರನ್‌ ಅಂದಾಕ್ಷಣ, ರೊಮ್ಯಾಂಟಿಕ್‌ ಸೀನ್‌ ನೆನಪಾಗದೇ ಇರದು. ಈ ಹಿಂದೆಯೇ ಅವರು ರೊಮ್ಯಾಂಟಿಕ್‌ ಹಾಡುಗಳಲ್ಲಿ ಹಾಟ್‌ ಸೀನ್‌ ತೋರಿಸುವ ಮೂಲಕ ಪಡ್ಡೆಗಳ ಫೆವರೇಟ್‌ ಎನಿಸಿಕೊಂಡವರು. ಈಗ ಪುತ್ರ ಮನೋರಂಜನ್‌ ಸರದಿ.

ಹಾಗಂತ, ಮನೋರಂಜನ್‌ ಹಿಂದೆ ಮುಂದೆ ನೋಡದೆ, ಆ ಕಿಸ್ಸಿಂಗ್‌ ಸೀನ್‌ಗೆ ಗ್ರೀನ್‌ಸಿಗ್ನಲ್‌ ಕೊಟ್ಟಿಲ್ಲ. ಅವರೇ ಹೇಳುವಂತೆ, “ಕಥೆ ಕೇಳಿದಾಗ ಇಷ್ಟವಾಯ್ತು. ಆಮೇಲೆ, ಇಲ್ಲೊಂದು ಕಿಸ್ಸಿಂಗ್‌ ಸೀನ್‌ ಕೂಡ ಇದೆ ಅಂದಾಗ, ನಾನು ಮೊದಲು ಮಾಡಲ್ಲ ಅಂದೆ. ಅದಕ್ಕೆ ನಿರ್ದೇಶಕರು, “ಸರ್‌ ರವಿ ಸರ್‌ ಅವರ ಫ್ಯಾನ್‌ ಇಷ್ಟಪಡ್ತಾರೆ. ಕಥೆಗೆ ಪೂರಕವಾಗಿಯೇ ಆ ಸೀನ್‌ ಇದೆ ಸರ್‌’ ಅಂದ್ರು. ನನಗೂ ಆ ಕಥೆಯ ದೃಶ್ಯಕ್ಕೂ ಬೇಕು ಎನಿಸಿತು. ಸೋ, ಒಪ್ಪಿಕೊಂಡು ಕಿಸ್‌ ಮಾಡಿದೆ’ ಎಂದು ವಿವರ ಕೊಡುತ್ತಾರೆ ಮನೋರಂಜನ್‌.

ಹಾಗಾದರೆ, ರವಿಚಂದ್ರನ್‌ ಅವರು ಈ ಲಿಪ್‌ಲಾಕ್‌ ಸೀನ್‌ ನೋಡಿ ಏನಂದ್ರು? ಇದಕ್ಕೆ ಉತ್ತರಿಸುವ ಮನೋರಂಜನ್‌, “ಅಪ್ಪ ಕುಶಾಲನಗರದಲ್ಲಿ ಶೂಟಿಂಗ್‌ ಮಾಡುತ್ತಿದ್ದಾರೆ. ಟೀಸರ್‌ ಲಿಂಕ್‌ ಕಳಿಸಿದ್ದೇನೆ. ಕಿಸ್ಸಿಂಗ್‌ ಸೀನ್‌ ನೋಡಿ ಏನಂತಾರೋ ಗೊತ್ತಿಲ್ಲ. ನನಗಂತೂ ಏನೂ ಹೇಳಲ್ಲ. ಮಮ್ಮಿಗೆ ಅಥವಾ ತಮ್ಮನಿಗೋ ಹೇಳಬಹುದು,ನೋಡಿದ್ಯಾ ಕಿಸ್‌ ಮಾಡಿದ್ದಾನೆ ಅಂತ’ ಎನ್ನುತಾರೆ ಮನೋರಂಜನ್‌. “ಪ್ರಾರಂಭ’ ಬಗ್ಗೆ ಹೇಳುವುದಾದರೆ, ಟೀಸರ್‌ಗೆ ದರ್ಶನ್‌ ಅವರು ವಾಯ್ಸ್ ಕೊಟ್ಟಿದ್ದಾರೆ. ಅವರಿಗೆ ಕಾಲ್‌ ಮಾಡಿ ನಿಮ್ಮದ್ದೊಂದು ವಾಯ್ಸ್ ಬೇಕು ಅಂದಾಗ, “ಏನ್‌ ಬೇಕು ಚಿನ್ನ, ಯಾವಾಗ ಹೇಳು ಮಾಡಿಕೊಡ್ತೀನಿ’ ಅಂದ್ರು.

ಟೀಸರ್‌ನಲ್ಲಿ ಮಾತ್ರ ಅಲ್ಲ, ಆರಂಭ ಮತ್ತು ಕ್ಲೈಮ್ಯಾಕ್ಸ್‌ನಲ್ಲೂ ಅವರ ವಾಯ್ಸ್ ಬರುತ್ತೆ. ಇನ್ನು, ಟೀಸರ್‌ ನೋಡಿದವರು “ಅರ್ಜುನ್‌ ರೆಡ್ಡಿ’ ಬಗ್ಗೆ ಮಾತಾಡ್ತಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಒಂದೇ ಒಂದು ಸಣ್ಣ ಲೈನ್‌ ಕೂಡ ಇಲ್ಲ. ಇದು ಹೊಸ ಕಥೆ. ಎರಡು ಶೇಡ್‌ ಇಲ್ಲಿದೆ. ಒಂದು ಲವ್‌ಟ್ರಾಕ್‌ನಲ್ಲಿ ಲವ್ವರ್‌ ಬಾಯ್‌, ಇನ್ನೊಂದು ದಾಡಿ ಬಿಟ್ಟು ರಗಡ್‌ ಆಗಿರುವ ಪಾತ್ರ. ಸೆಕೆಂಡ್‌ ಹಾಫ್ನಲ್ಲಿ ಹೊಸ ಪಾಯಿಂಟ್‌ ಇದೆ. ಈಗಲೇ ಹೇಳಿದರೆ ಮಜಾ ಇರಲ್ಲ ಎಂಬುದು ಮನೋರಂಜನ್‌ ಮಾತು.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.