ಕರಾವಳಿಯಲ್ಲಿ ಮತ್ತೆ ಡೆಂಗ್ಯೂ ಉಲ್ಬಣ ಭೀತಿ
Team Udayavani, Aug 26, 2019, 5:54 AM IST
ಉಡುಪಿ/ ಮಂಗಳೂರು: ಕರಾವಳಿಯಲ್ಲಿ ಈಗ ಮಳೆ ಬಿಟ್ಟೂ ಬಿಟ್ಟು ಬರುತ್ತಿದ್ದು, ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಇದು ಸೊಳ್ಳೆ ಸಂತಾನಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ ಮತ್ತೆ ಡೆಂಗ್ಯೂ ಉಲ್ಬಣಿಸಲು ಕಾರಣವಾಗಬಹುದೇ ಎಂಬ ಭೀತಿ ಉಂಟಾಗಿದೆ.
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ 152 ಮತ್ತು ಮಲೇರಿಯಾ ಪ್ರಕರಣ 63ಕ್ಕೆ ಏರಿಕೆಯಾಗಿದೆ. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್ ತಿಳಿಸಿದ್ದಾರೆ.