ನೆಹರು ಬಗ್ಗೆ ಸಂತೋಷ್ ಹೇಳಿಕೆ ಸರಿಯಲ್ಲ: ಉಗ್ರಪ್ಪ
Team Udayavani, Aug 27, 2019, 3:00 AM IST
ಬೆಂಗಳೂರು: ನೆಹರು ಅವರ ಬಗ್ಗೆ ಬಿಜೆಪಿಯ ಬಿ.ಎಲ್.ಸಂತೋಷ್ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ದೇಶಕ್ಕೆ ನೆಹರು ಅವರ ಕೊಡುಗೆ ಬಗ್ಗೆ ಸಂತೋಷ್ ಅವರಿಗೆ ಮಾಹಿತಿಯಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜವಾಹರ್ ಲಾಲ್ ನೆಹರು ಅವರ ಕೊಡುಗೆ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವವರಿಗೆ ಅದು ಎಲ್ಲಿ ಗೊತ್ತಾಗುತ್ತದೆ ಎಂದು ಹರಿಹಾಯ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ನ 17 ಶಾಸಕರನ್ನು ಅತಂತ್ರ ಸ್ಥಿತಿಯಲ್ಲಿ ನಿಲ್ಲಿಸಿದ್ದೀರಿ. ಅವರನ್ನು ಮುಗಿಸಲಿಕ್ಕೆ ಶಕುನಿ ಮಾಮಾಗಳು ಸೃಷ್ಠಿಯಾಗಿದ್ದಾರೆ.
ಅಮಿತ್ ಶಾ, ಬಿ.ಎಲ್.ಸಂತೋಷ್, ಯಡಿಯೂರಪ್ಪ ಸೇರಿ ಬಹಳ ಶಕುನಿ ಮಾಮಾಗಳಿದ್ದಾರೆಂದು ಹೇಳಿದರು. ಮುಖ್ಯಮಂತ್ರಿಯಾಗಲು ಎಷ್ಟು ದಿನ ತೆಗೆದುಕೊಂಡಿರಿ, ಮಂತ್ರಿ ಮಂಡಲ ರಚನೆಗೆ ಎಷ್ಟು ದಿನ ಆಯ್ತು, ಸಚಿವರಿಗೆ ಖಾತೆ ಹಂಚಿಕೆಗೆ ಇನ್ನೆಷ್ಟು ದಿನ ಬೇಕು? ನಾಲ್ಕು-ಐದು ಡಿಸಿಎಂ ಮಾಡಲು ಹೊರಟಿದ್ದೀರಿ, ಆಪರೇಷನ್ ಕಮಲದಲ್ಲಿ ನಿಮ್ಮ ಕೈವಾಡವಿಲ್ಲ ಅಂದಿದ್ದರೆ ರಾಜೀನಾಮೆ ಕೊಟ್ಟವರಿಗೆ ಸಚಿವ ಸ್ಥಾನ ಖಾಲಿ ಇಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!