ಆಗಸ್ಟ್ 31 ರಿಂದ ಕಾಮಿಡಿ ಕಿಲಾಡಿಗಳು ಸೀಸನ್- 3
Team Udayavani, Aug 28, 2019, 3:00 AM IST
ಜೀ ಕನ್ನಡ ವಾಹಿನಿಯಲ್ಲಿ ಈಗ ಮತ್ತೂಂದು ಬಾರಿ ನಗಿಸಲು ಕಾಮಿಡಿ ಕಿಲಾಡಿಗಳ ಆಗಮನವಾಗುತ್ತಿದೆ. ಹೌದು, ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿ, “ಡ್ರಾಮಾ ಜೂನಿಯರ್’, “ಸರಿಗಮಪ’, “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, “ವೀಕೆಂಡ್ ವಿತ್ ರಮೇಶ್’ ಹೀಗೆ ಹಲವು ರಿಯಾಲಿಟಿ ಶೋಗಳ ಸಾರವನ್ನು ಉಣಬಡಿಸಿದೆ. ಇನ್ನು, ಕಳೆದ ಎರಡು ಸೀಸನ್ನಲ್ಲೂ ಅತೀ ಮನರಂಜನೆ ಕೊಟ್ಟು ಮೆಚ್ಚುಗೆ ಪಡೆದ “ಕಾಮಿಡಿ ಕಿಲಾಡಿಗಳು’ ಈಗ “ಸೀಸನ್ 3’ಗೆ ಸಜ್ಜಾಗಿದೆ.
ಹೌದು, ಅದೇ ತಂಡ ಮತ್ತೂಂದು ಸೀಜನ್ಗೆ ರೆಡಿಯಾಗಿದೆ. ಈ “ಕಾಮಿಡಿ ಕಿಲಾಡಿಗಳು ಸೀಜನ್-3′ ರಿಯಾಲಿಟಿ ಶೋಗೆ ರಾಜ್ಯಾದ್ಯಂತ 9 ಜಿಲ್ಲೆಗಳಲ್ಲಿ ನಡೆಸಿದ ಆಡಿಷನ್ನಲ್ಲಿ ಸಾವಿರಾರು ಉತ್ಸಾಹಿ ಪ್ರತಿಭಾವಂತರು ಭಾಗವಹಿಸಿದ್ದರು. ಆ ಪೈಕಿ ಪ್ರತಿಭಾನ್ವಿತ ಕಿಲಾಡಿಗಳನ್ನು ಆಯ್ಕೆ ಮಾಡಿ, ಮೆಗಾ ಆಡಿಷನ್ ಮೂಲಕ ಕರ್ನಾಟಕಕ್ಕೆ ಪರಿಚಯಿಸುವ ಪ್ರಯತ್ನಕ್ಕೆ ವಾಹಿನಿ ಮುಂದಾಗಿದೆ. ಎಂದಿನಂತೆಯೇ “ಕಾಮಿಡಿ ಕಿಲಾಡಿಗಳು ಸೀಜನ್-3′ ಕಾರ್ಯಕ್ರಮಕ್ಕೆ ಜಗ್ಗೇಶ್, ರಕ್ಷಿತಾ ಪ್ರೇಮ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಾಸ್ಟರ್ ಆನಂದ್ ಈ ಸಲವೂ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಭಾಗವಹಿಸಲಿರುವ ಸ್ಪರ್ಧಿಗಳಿಗೆ ರಂಗ ತರಬೇತಿ ಜೊತೆಗೆ ಹಾಸ್ಯದ ಹಲವು ಮಜಲುಗಳನ್ನು ಪರಿಚಯಿಸಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಹಾಸ್ಯ ಕಲಾವಿದರ ಸಾಲಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ “ಕಾಮಿಡಿ ಕಿಲಾಡಿಗಳು ಸೀಜನ್-3′ ಕಾರ್ಯಕ್ರಮ ಶುರುವಾಗಲಿದೆ. ಅಂದಹಾಗೆ, ಆಗಸ್ಟ್ 31ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ “ಕಾಮಿಡಿ ಕಿಲಾಡಿಗಳು ಸೀಜನ್-3′ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
MUST WATCH
ಹೊಸ ಸೇರ್ಪಡೆ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ