ಪ್ರೊ ಕಬಡ್ಡಿ: ಬೆಂಗಾಲ್ಗೆ ಶರಣಾದ ತಲೈವಾಸ್
Team Udayavani, Aug 29, 2019, 10:20 PM IST
ಹೊಸದಿಲ್ಲಿ: ಕೆ. ಪ್ರಪಂಜನ್ (10 ಅಂಕ), ಮಣಿಂದರ್ ಸಿಂಗ್ (9 ಅಂಕ) ಜೋಡಿಯ ಪ್ರಚಂಡ ರೈಡಿಂಗ್ ಹಾಗೂ ರಿಂಕು ನರ್ವಾಲ್ (5 ಅಂಕ) ಅವರ ಅಬ್ಬರದ ಟ್ಯಾಕ್ಲಿಂಗ್ ನೆರವಿನಿಂದ ಪ್ರೊ ಕಬಡ್ಡಿ 7ನೇ ಆವೃತ್ತಿ ಹೊಸದಿಲ್ಲಿ ಚರಣದ ಗುರುವಾರದ ಏಕೈಕ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ 35-26 ಅಂಕಗಳ ಗೆಲುವು ಸಾಧಿಸಿತು.
ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ಆಟಗಾರರು ಬಿರುಸಿನ ಆಟ ಪ್ರದರ್ಶಿಸಿದರು. ಮತ್ತೂಂದು ಕಡೆಗೆ ತಮಿಳ್ ತಲೈವಾಸ್ ಪ್ರಬಲ ಹೋರಾಟ ಪ್ರದರ್ಶಿಸಿತಾದರೂ ಕೊನೆಯಲ್ಲಿ ಎಡವಟ್ಟು ಮಾಡಿಕೊಂಡು ಮುಗ್ಗರಿಸಿತು.
ತಲೈವಾಸ್ ಪರ ಅಜಯ್ ಠಾಕೂರ್ (11 ಅಂಕ) ಏಕಾಂಗಿ ಹೋರಾಟ ನಡೆಸಿದರು. ಶಬ್ಬೀರ್ ಬಾಪು (4 ಅಂಕ) ಸ್ವಲ್ಪಮಟ್ಟಿಗೆ ಮಿಂಚಿದರೆ, ಖ್ಯಾತ ಆಟಗಾರರಾದ ಮಂಜಿತ್ ಚಿಲ್ಲಾರ್ (3 ಅಂಕ) ಹಾಗೂ ರಾಹುಲ್ ಚೌಧರಿ (1 ಅಂಕ) ಭಾರೀ ವೈಫಲ್ಯ ಅನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ
Bengaluru: ಫ್ಲೈಓವರ್ಗಳಲ್ಲೂ ಕಸ ಸುರಿಯುವ ವಾಹನ ಸವಾರರು
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ