ಕರ್ತಾರ್ಪುರಕ್ಕೆ ವೀಸಾ ರಹಿತ ಪ್ರಯಾಣ
Team Udayavani, Sep 5, 2019, 5:59 AM IST
ಅಟ್ಟಾರಿ/ಹೊಸದಿಲ್ಲಿ: ಪಾಕಿಸ್ಥಾನದ ಕರ್ತಾರ್ಪುರಕ್ಕೆ ಸಿಕ್ಖ್ ಸಮುದಾಯದವರಿಗೆ ವೀಸಾ ರಹಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಬಗ್ಗೆ ಭಾರತ ಮತ್ತು ಪಾಕಿಸ್ಥಾನ ಬುಧವಾರ ಒಪ್ಪಿಕೊಂಡಿವೆ.
ಪ್ರತಿ ದಿನ 5 ಸಾವಿರ ಮಂದಿಯ ಪ್ರವಾಸಕ್ಕೆ ಅನುಮತಿ ನೀಡುವ ಬಗ್ಗೆ ಪಾಕ್ ಸರಕಾರ ಒಪ್ಪಿಕೊಂಡಿದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಹೆಚ್ಚಿಸುವ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಆದರೆ, ಇದೇ ವೇಳೆ ಸೇವಾ ಶುಲ್ಕ ನಿಗದಿ ಮಾಡುವ ಬಗ್ಗೆ ಎರಡೂ ರಾಷ್ಟ್ರಗಳ ನಿಯೋಗಗಳ ನಡುವೆ ಒಮ್ಮತ ವ್ಯಕ್ತವಾಗಿಲ್ಲ. ಪಾಕಿಸ್ಥಾನ ನಿಯೋಗ ಶುಲ್ಕ ವಿಧಿಸುವ ಬಗ್ಗೆ ಪಟ್ಟು ಹಿಡಿದಿದೆ. ಭಾರತದ ನಿಯೋಗದ ಮುಖ್ಯಸ್ಥ ಎಸ್.ಸಿ.ಎಲ್.ದಾಸ್ ನೆರೆಯ ರಾಷ್ಟ್ರ ತನ್ನ ನಿಲುವು ಬದಲಾಯಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.