ಪೈಪ್ಲೈನ್ ವಾಲ್ವ್ ಒಡೆದು ಅಪಾರ ಹಾನಿ
Team Udayavani, Sep 6, 2019, 12:17 PM IST
ಕುಷ್ಟಗಿ: ಗುರಪ್ಪ ಕೋತ್ನಿ ಅವರ ಜಮೀನಿನಲ್ಲಿ ಜಿಂದಾಲ್ ಕೊಳವೆ ಮಾರ್ಗದ ವಾಲ್ವ್ ಒಡೆದು ಆಳೆತ್ತರಕ್ಕೆ ಚಿಮ್ಮಿದ ನೀರು.
ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿ ನೀರು ಜಿಂದಾಲ್ ಕೈಗಾರಿಕೆ ಸಮೂಹಕ್ಕೆ ಸರಬರಾಜಾಗಿರುವ ಬೃಹತ್ ಕೊಳವೆ ಮಾರ್ಗದ ವಾಲ್ವ್ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಜಮೀನಿನ ಫಲವತ್ತಾದ ಮಣ್ಣು ಹಳ್ಳ ಸೇರಿದೆ.
ಜಿಂದಾಲ್ ಕೊಳವೆ ಮಾರ್ಗದ ವಾಲ್ವ್ ಒಡೆಯುವಿಕೆ ತಿಂಗಳಲ್ಲಿ ಇದು ಎರಡನೇ ಬಾರಿ. ಜುಲೈ 9ರಂದು ಇದೇ ಮಾರ್ಗದ ಮುಂದಿನ ಭಾಗದ ರೇಣಮ್ಮ ಕಂದಗಲ್ ಅವರ ಜಮೀನಿನಲ್ಲಿದ್ದ ವಾಲ್ವ್ ಒಡೆದು, ಅಪಾರ ಪ್ರಮಾಣದಲ್ಲಿ ನೀರು ಹಳ್ಳಕ್ಕೆ ಹರಿದಿತ್ತು. ಆ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ 12ಕ್ಕೆ ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯ ಗುರಪ್ಪ ಕೋತ್ನಿ ಅವರ ಜಮೀನಿನಲ್ಲಿ ವಾಲ್ವ್ ಒಡೆದಿದ್ದು, ಸುಮಾರು 10 ಅಡಿವರೆಗೂ ನೀರು ಚಿಮ್ಮಿ, ಅಪಾರ ಪ್ರಮಾಣ ನೀರು ಪೋಲಾಗಿದೆ. ರೈತರಿಗೆ ವಾಲ್ವ್ ಒಡೆದಿರುವ ಕುರಿತು ಜಿಂದಾಲ್ ಪೈಪ್ಲೈನ್ ಉಸ್ತುವಾರಿ ಸಿಬ್ಬಂದಿ ಗಮನಕ್ಕೆ ತಂದರು.
ವಾಲ್ವ್ ಬಂದ್ಗೆ ತಡೆದು ಆಕ್ರೋಶ: ಕುಷ್ಟಗಿ ಸೀಮಾದ ಗುರಪ್ಪ ಕೋತ್ನಿ ಅವರ ಜಮೀನಿಗೆ ದೌಡಾಯಿಸಿದ ಜಿಂದಾಲ್ ಪೈಪ್ಲೈನ್ ಮೇಲುಸ್ತುವಾರಿ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಂದಾಲ್ ಪೈಪ್ಲೈನ್ ನಿರ್ವಹಣೆ ಸಿಬ್ಬಂದಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಬೇಡಿಕೆಗೆ ಅನುಗುಣವಾಗಿ ಪರಿಹಾರ, ಜೊತೆಗೆ ಕೊಚ್ಚಿ ಹೋದ ಮಣ್ಣು ತಂದು ಹಾಕುವ ಹಾಗೂ ಜಮೀನು ದಾರಿ, ಬೆಳೆ ಪರಿಹಾರದ ಭರವಸೆ ನಂತರ ವಾಲ್ವ್ ಬಂದ್ ಮಾಡಲು ಅವಕಾಶ ಕಲ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ