ರುಕ್ಮಾಪುರದಲ್ಲಿ ನೀರವ ಮೌನ
•ದುಃಖದಲ್ಲಿ ಮೊಳಗಿದ ಕುಟುಂಬ•ಸರ್ಕಾರ ಕಾರ್ತಿಕ್ ಕುಟುಂಬಕ್ಕೆ ನೆರವಾಗಲಿ
Team Udayavani, Sep 9, 2019, 12:52 PM IST
ಸುರಪುರ: ಅಂಗಾಂಗ ದಾನ ಮಾಡಿದ ರುಕ್ಮಾಪುರ ಗ್ರಾಮದ ಕಾರ್ತಿಕ್ನ ಕುಟುಂಬದವರು ದುಃಖೀಸುತ್ತಿರುವುದು.
• ಸಿದ್ದಯ್ಯ ಪಾಟೀಲ
ಸುರಪುರ: ಕಾರ್ತಿಕ್ ಬಡಗಾ ಜನಿಸಿದ ರುಕ್ಮಾಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕಾರ್ತಿಕನ ತಂದೆ ಕೀರಪ್ಪ, ತಾಯಿ ಭಾರತಿ ಬಡಗಾ ದುಃಖ ಮಡುಗಟ್ಟಿತ್ತು. ಒತ್ತರಿಸಿ ಬರುತ್ತಿದ್ದ ಅಶ್ರುಧಾರೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಮಗನ ಅಂಗಾಂಗಗಳು ಆರು ಜೀವ ಉಳಿಸಿದವು ಎನ್ನುವ ಧನ್ಯತಾಭಾವ ಅವರ ಮೊಗದಲ್ಲಿತ್ತು.
ಪಾಲಕರನ್ನು ಸಮಾಧಾನ ಪಡಿಸಲು ಬಂಧು-ಬಳಗದವರು, ನೆರೆಹೊರೆಯವರು ಸಾಲುಗಟ್ಟಿ ಬರುತ್ತಿದ್ದರು. ಈ ವೇಳೆ ಇವರೆಲ್ಲ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಕಾರ್ತಿಕ್ನ ತಂದೆ-ತಾಯಿ ಪರಿತಪಿಸುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು.
ಚಿಕಿತ್ಸೆ ತಡವಾಗಿದ್ದೇ ಸಾವಿಗೆ ಕಾರಣ: ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರೆ ಕಾರ್ತಿಕ್ ಬದುಕುಳಿಯ ಬಹುದಾಗಿತ್ತು. ಕೊನೆ ಹಂತದಲ್ಲಿ ಬಂದಿದ್ದರಿಂದ ನಾವೆಷ್ಟೆ ಪ್ರಯತ್ನ ಮಾಡಿದ್ದರೂ ಚಿಕಿತ್ಸೆಗೆ ದೇಹ ಸ್ಪಂದಿಸಲಿಲ್ಲ. ಇದರಿಂದ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಸೊಲ್ಲಾಪುರ ಯೋಶಧರಾ ಆಸ್ಪತ್ರೆ ಡೀನ್ ಡಾ| ಬಸವರಾಜ ಕೊಳ್ಳೂರ ಮೊಬೈಲ್ ಮೂಲಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಾಗೃತಿ ಅಗತ್ಯ: ಕಾರ್ತಿಕ್ನನ್ನು ಆವರಿಸಿಕೊಂಡಿದ್ದ ‘ಸರೆಬ್ರಲ್ ವೇನೆಸಿಸ್ ಟ್ರೋಮೊrಸಿಸ್’ ಎನ್ನುವ ಈ ರೋಗ ಅತ್ಯಂತ ಅಪಾಯಕಾರಿಯಾಗಿತ್ತು. ಈ ರೋಗ ಮೆದುಳಿನ ರಕ್ತ ಪರಿಚಲನೆ ನಿಲ್ಲಿಸುತ್ತದೆ. ಈ ರೋಗದ ಬಗ್ಗೆ ಜನ ಜಾಗೃತಿ ಅವಶ್ಯ ಎಂದು ಸೊಲ್ಲಾಪುರ ಯಶೋಧರಾ ಆಸ್ಪತ್ರೆ ವೈದ್ಯ ಡಾ| ನೀಲರೋಹಿತ ಪಾಕೆ ತಿಳಿಸಿದ್ದಾರೆ.
ಕುಟುಂಬದ ಆರ್ಥಿಕ ಸ್ಥಿತಿ ಗಂಭೀರ: ಈಗಾಗಲೇ ಎರಡು ಮಕ್ಕಳನ್ನು ಕಳೆದುಕೊಂಡಿದ್ದ ಬಡಗಾ ಕುಟುಂಬಕ್ಕೆ ಇದು ಇನ್ನೊಂದು ಆಘಾತ. ಈ ಕುಟುಂಬ ತೀರಾ ಬಡತನದಲ್ಲಿದೆ. ಜೀವನಕ್ಕೆ ಆಧಾರ ಆಗಬೇಕಿದ್ದ ಕಾರ್ತಿಕ್ ಸಾವಿನಿಂದ ಕುಟುಂಬ ಕಂಗೆಟ್ಟಿದೆ. ಮಗನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಬಡಗಾ ಕುಟುಂಬಕ್ಕೆ ಸರ್ಕಾರ ಸರಕಾರಿ ನೌಕರಿ ಕೊಡಬೇಕು. ಕುಟುಂಬದ ಆರ್ಥಿಕ ಸ್ಥಿತಿಗೆ ನೆರವಾಗಬೇಕು ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
MUST WATCH
ಹೊಸ ಸೇರ್ಪಡೆ
Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ