ಏಕತಾರಿಯಲ್ಲಿ ಅಡಗಿದೆ ಗ್ರಾಮೀಣ ಸೊಗಡು

ಸಾಹಿತಿ ಡಾ| ಚನ್ನಪ್ಪ ಕಟ್ಟಿ ಬಹುಮುಖ ಪ್ರತಿಭೆ: ಸಾರಂಗಮಠ ಶ್ರೀ

Team Udayavani, Sep 9, 2019, 5:36 PM IST

9-Sepctember-23

ಸಿಂದಗಿ: ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಾಳಾಸಾಹೇಬ ಲೋಕಾಪುರ ಬಿಡುಗಡೆ ಮಾಡಿದರು.

ಸಿಂದಗಿ: ಸಾಹಿತಿ ಕಟ್ಟಿ ಅವರ ಕಥೆಗಳಲ್ಲಿ ಗ್ರಾಮೀಣದ ಸೊಗಡು ಅಡಗಿದ್ದರೂ ಆಧುನಿಕತೆಯಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಾಳಾಸಾಹೇಬ ಲೋಕಾಪುರ ಹೇಳಿದರು.

ರವಿವಾರ ಪಟ್ಟಣದ ಮಾಂಗಲ್ಯ ಭವನದಲ್ಲಿ ಚನ್ನಪಟ್ಟಣದ ಪಲ್ಲವ ಪ್ರಕಾಶನ ಹಾಗೂ ಸ್ಥಳೀಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಡಾ| ಚನ್ನಪ್ಪ ಕಟ್ಟಿ ಅವರು ರಚಿಸಿದ ಕಥೆ-ಕವನಗಳಲ್ಲಿ ಜನ-ಜೀವನದ ಬದುಕು, ಗ್ರಾಮೀಣ-ನಗರದ ಸೊಗಡು, ಜೀವನದ ಮೌಲ್ಯ ಅಡಗಿವೆ. ಅವರ ನಿರಂತರ ಕನ್ನಡದ ಅಧ್ಯಯನದಿಂದ ವಾಸ್ತವದ ಅಂಶಗಳನ್ನು ಹಾಗೂ ಇಂಗ್ಲಿಷ್‌ ಅಧ್ಯಯನದಿಂದ ಜಾಗತಿಕ ಅಂಶಗಳನ್ನು ತಮ್ಮ ಕಥೆಗಳಲ್ಲಿ ಕಟ್ಟಿ ಹಾಕುತ್ತಾರೆ. ಅವರು ಒಬ್ಬ ಕಾದಂಬರಿಕಾರರಾಗಿ ಹೊರ ಹೊಮ್ಮಬೇಕಾಗಿದೆ ಎಂದು ಹೇಳಿದರು.

ಕಟ್ಟಿಯವರ ಆರಂಭಿಕ ಕಥೆಗಳಾದ ಚರಗ, ಪಾಳು, ಕಥೆಗಳಿಗಿಂದ ಏಕತಾರಿಯಲ್ಲಿನ ಕಥೆಗಳು ವೈಚವಾರಿಕ ನೆಲೆಯಲ್ಲಿವೆ. ಲೌಕಿಕ ಬದುಕನ್ನು ಅಲೌಕಿಕದೆಡೆಗೆ ಸಾಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ, ಜಾನಪದ ವಿದ್ವಾಂಸಕ ಡಾ| ಎಂ.ಎಂ. ಪಡಶೆಟ್ಟಿ ಮಾತನಾಡಿ, ಡಾ| ಚನ್ನಪ್ಪ ಕಟ್ಟಿ ಅವರು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಂಡವರು. ಅವರ ಬದುಕಿನಂತೆ ಅವರ ಬರಹವಿದೆ. ಅವರು ಒಬ್ಬ ಸಂಶೋಧಕನಾಗಿ, ಅನುವಾದಕರಾಗಿ, ಕವಿಯಾಗಿ, ಕಥೆಗಾರನಾಗಿ ಹೀಗೆ ಅವರು ಬಹುಮುಖ ಪ್ರಭುತ್ವ ಹೊಂದಿದ್ದಾರೆ. ಅವರ ಒಡನಾಟ ನಮ್ಮೇಲ್ಲರ ಭಾಗ್ಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಕಥೆಗಾರ ಡಾ| ಚನ್ನಪ್ಪ ಕಟ್ಟಿ ತಮ್ಮ ಸರಳ ಜೀವನ, ಸಂಯಮ, ಶಿಸ್ತು, ಶ್ರಮ, ಸತತ ಅಧ್ಯಯನದ ಫಲವಾಗಿ ಕನ್ನಡ ಸಾರಸತ್ವ ಲೋಕದ ಶಿಖೀರದವರೆಗೆ ಬೆಳೆದಿದ್ದಾರೆ. ಅವರ ಸಾಹಿತ್ಯ ಸೇವೆ ನಿರಂತರ ನಡೆಯಲಿ. ಕನ್ನಡ ಸಾಹಿತ್ಯ ಶ್ರೀಮಂತಿಕೆಯಲ್ಲಿ ಅವರ ಶ್ರಮ ಅಡಗಲಿ ಎಂದರು.

ಕರ್ನಾಟಕ ಕೇಂದ್ರಿಯ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಕ್ರಮ ವಿನಾಜಿ ಅವರು ಡಾ| ಚನ್ನಪ್ಪ ಕಟ್ಟಿ ಅವರ ಏಕತಾರಿ ಕಥಾ ಸಂಕಲನ ಪರಿಚಯಿಸುತ್ತ, ಕಟ್ಟಿ ಅವರು ಮಾಸ್ತಿ ಅವರ ನವೋದಯ ಶೈಲಿಯ ಗ್ರಾಮೀಣ ಸೊಗಡು ತುಂಬಿದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಏಕತಾರಿ ಕಥೆಗಳಲ್ಲಿ ಮಣ್ಣಿನ ವಾಸನೆ ನೆಲದ ಸೆಳೆತವಿದೆ. ಗ್ರಾಮದ ಮತ್ತು ನಗರದ ಬದುಕಿನ ನಡುವೆ ಚಲಿಸುವಿಕೆಯ ಹೋಯ್ದಾಟವಿದೆ. ಮಾಗಿದ ಪಕ್ವತೆಯ ಮನಸ್ಸಿನಿಂದ ಮೂಡಿದ ಕಥೆಗಳಲ್ಲಿ ನಿರಾಡಂಬರವಿದೆ. ಇಲ್ಲಿರುವ 9 ಕಥೆಗಳು ವಿಶೇಷವಾಗಿವೆ ಎಂದು ಹೇಳಿದರು.

ಅಕ್ಕ ಮಹಾದೇವಿ ಮಹಿಳಾ ವಿವಿ ಕಲಾ ನಿಕಾಯದ ಡೀನ್‌ ಡಾ| ನಾಮದೇವ ಗೌಡ ಮಾತನಾಡಿ, ಹಿಂದಿಯಲ್ಲಿ ಪ್ರೇಮಚಂದ್‌ ಹಾಗೂ ಫಣಿಶ್ವರ ರೇಣು ಅವರು ಚಿತ್ರಿಸಿದ ಗ್ರಾಮೀಣ ಬದುಕನ್ನು ಬೇರೆ ಯಾರಿಂದಲೂ ಕಟ್ಟಿಕೊಡಲು ಆಗಿಲ್ಲ. ಆದರೆ ಡಾ| ಚನ್ನಪ್ಪ ಕಟ್ಟಿ ಅವರು ತಮ್ಮ ಏಕತಾರಿ ಕಥಾ ಸಂಕಲನದಿಂದ ಸಾಧಿಸಿ ತೋರಿಸಿದ್ದಾರೆ. ಏಕತಾರಿ ಕಥಾ ಸಂಕಲನದ 9 ಕಥೆಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು.

ಲೇಖಕ ಡಾ| ಚನ್ನಪ್ಪ ಕಟ್ಟಿ, ಚನ್ನಪಟ್ಟಣದ ಪ್ರಕಾಶಕ ಪಲ್ಲವ ವೆಂಕಟೇಶ್‌ ಮಾತನಾಡಿದರು.

ಶಹಾಪುರದ ಚಂದ್ರಕಾಂತ ಕರದಳ್ಳಿ, ಧಾರವಾಡದ ಲಲಿತಾ ಪಾಟೀಲ, ಬಾದಾಮಿಯ ವಿ.ಟಿ. ಪೂಜಾರಿ, ಡಾ| ಜಿ.ಎಂ. ವಾರಿ, ಮಕ್ಕಳ ಸಾಹಿತಿ ಹ.ಮ. ಪೂಜಾರ, ವಿ.ಡಿ. ವಸ್ತ್ರದ, ಎಂ.ಎಸ್‌. ಹಯ್ನಾಳಕರ, ಡಾ| ಎಂ.ಎಸ್‌. ಮಧುಬಾವಿ, ಶರಣಪ್ಪ ವಾರದ, ಅಶೋಕ ವಾರದ, ಮಹಾಂತೇಶ ಪಟ್ಟಣಶೆಟ್ಟಿ, ಶಿವಣ್ಣ ಗೋಸಾನಿ, ಬಸವರಾಜ ಗೋಡಕಿಂಡಿಮಠ, ಡಾ| ರಮೇಶ ಕತ್ತಿ, ಗುರುನಾಥ ಅರಳಗುಂಡಗಿ ಇದ್ದರು.

ದೇವು ಮಾಕೊಂಡ ಸ್ವಾಗತಿಸಿದರು. ಮನು ಪತ್ತಾರ ನಿರೂಪಿಸಿದರು. ಚಂದ್ರಶೇಖರ ಚೌರ ವಂದಿಸಿದರು.

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.