507 ಮನೆಗಳ ಪರಿಹಾರ ವಿತರಣೆ ಕಾರ್ಯ ಪೂರ್ಣ

ಬಂಟ್ವಾಳ ತಾಲೂಕು ನೆರೆ ಪ್ರಕರಣ

Team Udayavani, Sep 10, 2019, 5:42 AM IST

y-28

ಸಾಂದರ್ಭಿಕ ಚಿತ್ರ

ಬಂಟ್ವಾಳ: ತಾಲೂಕಿನಲ್ಲಿ ಕಳೆದ ತಿಂಗಳಿನ ಪ್ರವಾಹದಿಂದ ತೊಂದರೆಗೊಳಗಾದ ಒಟ್ಟು 507 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ 133 ಮನೆಗಳಿಗೆ ಹಾನಿಯಾದ ಪ್ರಕರಣಗಳನ್ನು ಗುರುತಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರವಾಹ ಪ್ರದೇಶಗಳ ಅಧ್ಯಯನಕ್ಕಾಗಿ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಸಂದರ್ಭ, ಪ್ರವಾಹದ ನೀರು ಮನೆಗೆ ನುಗ್ಗಿ ತೊಂದರೆಯಾದವರಿಗೆ ತತ್‌ಕ್ಷಣ 10 ಸಾವಿರ ರೂ.ಗಳ ಪರಿಹಾರ ವಿತರಿಸುವಂತೆ ಆದೇಶಿಸಿದ್ದರು. ಅದರಂತೆ ಬಂಟ್ವಾಳದ 14 ಗ್ರಾಮಗಳ ಒಟ್ಟು 507 ಮನೆಗಳ 2,339 ಮಂದಿ ತೊಂದರೆ ಅನುಭವಿಸಿದ್ದು, ಅಂತಹ ಕುಟುಂಬಗಳಿಗೆ ತತ್‌ಕ್ಷಣ ಪರಿಹಾರ ತಲುಪಿದೆ.

ನೀರು ಬಂದು ತೊಂದರೆ
ಬಂಟ್ವಾಳ ತಾಲೂಕು ಆಡಳಿತ ಹೇಳುವ ಪ್ರಕಾರ, ತತ್‌ಕ್ಷಣದ ಪರಿಹಾರ ಪಡೆ ದಿರುವ ಬಹುತೇಕ ಮನೆ ಗಳಿಗೆ ನೀರು ಬಂದು ತೊಂದರೆಯಾಗಿರುವುದು ಬಿಟ್ಟರೆ ಯಾವುದೇ ರೀತಿಯ ಹಾನಿಯಾಗಿಲ್ಲ. ಹೀಗಾಗಿ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ಮನೆ ಗಳಿಗೆ ಪರಿಹಾರ ಬಾಕಿ ಇದೆ. ತಾಲೂಕಿನಲ್ಲಿ ಜೂನ್‌ ಅಂತ್ಯ ದವರೆಗೆ ಒಟ್ಟು 91 ಸಣ್ಣಪುಟ್ಟ ಪ್ರಕರಣ ಗಳಿಗೆ 5.06 ಲ.ರೂ. ಪರಿಹಾರ ವಿತರಿಸಲಾಗಿದೆ. ಆದರೆ ಜುಲೈ ತಿಂಗಳ ಕೊನೆಯ ವಾರ ಹಾಗೂ ಆಗಸ್ಟ್‌ ತಿಂಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.

ಹಾನಿಯಾದ ಮನೆಗಳ ವಿವರ
ಸರಕಾರವು ಪ್ರವಾಹ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಗಳಿಗೆ ಅದರ ಹಾನಿಯ ಪ್ರಮಾಣದ ಶೇಕಡಾವಾರು ಲೆಕ್ಕಾಚಾರದಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸಿದ್ದು, ಶೇ. 15ರಿಂದ ಶೇ. 25 ಮನೆ ಹಾನಿಯಾದವರಿಗೆ 25 ಸಾವಿರ ರೂ., ಶೇ. 75 ವರೆಗೆ ಹಾನಿಯಾದವರಿಗೆ 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಾನಿಯಾದವರಿಗೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ತಾಲೂಕಿನಲ್ಲಿ ಪ್ರಸ್ತುತ ಶೇ. 15 ರಿಂದ ಶೇ. 25 ಹಾನಿಯಾದ 66 ಮನೆಗಳು, ಶೇ. 26ರಿಂದ ಶೇ. 75ರ ವರೆಗೆ ಹಾನಿಯಾದ 46 ಮನೆಗಳು ಹಾಗೂ ಶೇ. 75ರಿಂದ ಶೇ. 100 ಹಾನಿಯಾದ ಒಟ್ಟು 21 ಮನೆಗಳನ್ನು ಗುರುತಿಸಿದ್ದು, ಒಟ್ಟು 133 ಮನೆಗಳಿಗೆ ಹಾನಿಯಾಗಿದೆ ಎಂದು ತಾಲೂಕು ಆಡಳಿತ ವಿವರ ನೀಡುತ್ತದೆ.

ತತ್‌ಕ್ಷಣ ಪರಿಹಾರ ವಿವರ
ಪ್ರವಾಹದಿಂದ ನೀರು ನುಗ್ಗಿ ತೊಂದರೆಗೊಳಗಾದ ಕುಟುಂಬಗಳಿಗೆ ತತ್‌ಕ್ಷಣದ ಪರಿಹಾರ ವಿತರಿಸಲಾಗಿದ್ದು, ಪಾಣೆಮಂಗಳೂರು ಗ್ರಾಮದಲ್ಲಿ 138 ಮನೆಗಳು, ಬಂಟ್ವಾಳ ಕಸ್ಬಾದಲ್ಲಿ 105, ಕಡೇಶ್ವಾಲ್ಯದಲ್ಲಿ 9, ಬರಿಮಾರಿನಲ್ಲಿ 3, ಅಮಾಡಿಯಲ್ಲಿ 17, ಬಂಟ್ವಾಳ ಮೂಡದಲ್ಲಿ 101, ಪುದುವಿನಲ್ಲಿ 15, ಸಜಿಪನಡುವಿನಲ್ಲಿ 27, ಸಜಿಪಮುನ್ನೂರಿನಲ್ಲಿ 8, ಪೆರ್ನೆ/ಬಿಳಿಯೂರಿನಲ್ಲಿ 10, ಮಣಿನಾಲ್ಕೂರಿನಲ್ಲಿ 3, ನಾವೂರಿನಲ್ಲಿ 56, ತುಂಬೆಯಲ್ಲಿ 13 ಹಾಗೂ ಸಜಿಪಮೂಡದಲ್ಲಿ 2 ಮನೆಗಳು ಸಹಿತ ಒಟ್ಟು 507 ಮನೆಗಳಿಗೆ ತಲಾ 10 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗಿದೆ.

 ಹಾನಿ ವಿವರ ದಾಖಲೀಕರಣ
ತಾಲೂಕಿನಲ್ಲಿ ಪ್ರವಾಹ ಬಂದು ತೊಂದರೆಯಾದ 507 ಕುಟುಂಬಗಳಿಗೆ ಪರಿಹಾರ ಮೊತ್ತ ಹಾಗೂ ಕಿಟ್‌ ವಿತರಣೆ ನಡೆದಿದೆ. ಉಳಿದಂತೆ ತಾಲೂಕಿನಲ್ಲಿ ಹಾನಿಯಾದ ಮನೆಗಳ ವಿವರವನ್ನು
ಪೋರ್ಟಲ್‌ಗೆ ದಾಖಲೀಕರಣ ಮಾಡಲಾಗಿದ್ದು, ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ.
 -ರಶ್ಮಿ ಎಸ್‌.ಆರ್‌., ತಹಶೀಲ್ದಾರ್‌, ಬಂಟ್ವಾಳ

  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.