ಮಾಸಾಶನಕ್ಕಾಗಿ ವರ್ಷದಿಂದ ಅಲೆಯುತ್ತಿರುವ ವೃದ್ಧ


Team Udayavani, Sep 11, 2019, 12:43 PM IST

tk-tdy-1

ಕೂಡಲೇ ಮಾಸಾಶನ ಆರಂಭಕ್ಕೆ ಚಿಕ್ಕತಿಮ್ಮಯ್ಯ ಮನವಿ ಮಾಡಲು ನಾಡಕಚೇರಿಗೆ ಬಂದಿರುವುದು.

ಹುಳಿಯಾರು: ಸ್ಥಗಿತಗೊಂಡಿರುವ ಮಾಸಾಶನವನ್ನು ಪುನರ್‌ ಆರಂಭಿಸು ವಂತೆ 1 ವರ್ಷದಿಂದ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಹುಳಿಯಾರು ಹೋಬಳಿಯ ಕಲ್ಲೇನ ಹಳ್ಳಿಯ 83ರ ಇಳಿ ವಯಸ್ಸಿನ ಚಿಕ್ಕ ತಿಮ್ಮಯ್ಯನ ಅಳಲಾಗಿದೆ.

ಕಾದುಕುಳಿತ ತಿಮ್ಮಯ್ಯ: ಚಿಕ್ಕತಿಮ್ಮಯ್ಯ ಅವರಿಗೆ 2-7-2007 ರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಮಂಜೂರಾಗಿತ್ತು. ಅಲ್ಲಿಂದ ಸೆಪ್ಟೆಂಬರ್‌ 2018 ರವರೆಗೆ ಪ್ರತಿ ತಿಂಗಳು ತಪ್ಪದೇ ಮಾಸಾಶನ ಬರುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಮಾಸಾಶನ ನಿಂತು ಹೋಗಿದೆ. ಈ ತಿಂಗಳ ಬರಬಹುದು, ಮುಂದಿನ ತಿಂಗಳು ಬರಬಹುದು ಎಂದು ವೃದ್ಧ ತಿಮ್ಮಯ್ಯ ಕಾದಿದ್ದಾರೆ.

ಬರೋಬ್ಬರಿ 6 ತಿಂಗಳಾದರೂ ಮಾಸಾ ಶನ ಬಾರದಿದ್ದಾಗ ಹುಳಿಯಾರು ನಾಡಕಚೇರಿಗೆ ಬಂದು ಮಾಸಾಶನ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟವ ರಿಂದ ಬರುತ್ತೆ ಹೆದರಬೇಡಿ ಎನ್ನುವ ಭರವಸೆ ದೊರೆಯಿತೇ ವಿನಹಃ ಹಣ ಮಾತ್ರ ಬಂದಿಲ್ಲ. ಪರಿಣಾಮ ಪ್ರತಿ ತಿಂಗಳು ತಮ್ಮೂರಿಗೆ ಬರುವ ಅಂಚೆ ಸಿಬ್ಬಂದಿಯನ್ನು ಕೇಳಿ ಸೋತು ಹೋಗಿದ್ದಾರೆ.

ಪ್ರಯತ್ನ ಪಟ್ಟಿಲ್ಲ: ಅಂಚೆ ಸಿಬ್ಬಂದಿ ತಮಗೆ ಮಾಸಾಶನ ಬಂದಿಲ್ಲ ಎಂದಾ ಗಲೆಲ್ಲಾ ನಡೆದಾಡಲು ಶಕ್ತಿಯಿಲ್ಲದಿದ್ದರೂ ಮತ್ತೂಬ್ಬರ ಸಹಾಯ ಪಡೆದು ಬಸ್‌ ಏರಿ ನಾಡಕಚೇರಿಗೆ ಬಂದು ವಿಚಾರಿ ಸುತ್ತಿದ್ದರು. ಪ್ರತಿ ಬಾರಿ ಬಂದಾಗಲೆಲ್ಲಾ ಸಿಬ್ಬಂದಿ ಒಂದೊಂದು ಸಬೂಬು ಹೇಳಿ ಸಾಗಹಾಕುವುದು ಬಿಟ್ಟರೆ ಮಾಸಾ ಶನ ಪುನರ್‌ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲ. ವಯೋಸಹಜ ಚಿಕ್ಕತಿಮ್ಮಯ್ಯಗೆ ಕಿವಿ ಅಸ್ಪಷ್ಟವಾಗಿ ಕೇಳಿಸುತ್ತದೆ. ಕಣ್ಣುಗಳು ಅಲ್ಪಸ್ವಲ್ಪ ಮಾತ್ರ ಕಾಣುತ್ತವೆ. ಓಡಾಡಲು ಮೊದಲಿನಷ್ಟು ಶಕ್ತಿ ಉಳಿದಿಲ್ಲ. ಜೊತೆಗೆ ವಯೋಸಹಜ ಕಾಯಿಲೆಗಳು ಕಾಡು ತ್ತಿವೆ. ಉದ್ಯೋಗ ನಿಮಿತ್ತ ಮಕ್ಕಳೆಲ್ಲರೂ ಮಂಗಳೂರಿಗೆ ಗುಳೆ ಹೋಗಿರುವು ದರಿಂದ ಊಟ, ತಿಂಡಿ, ಮಾತ್ರೆ ಹೀಗೆ ಪ್ರತಿಯೊಂದಕ್ಕೂ ಆಸರೆ ಯಾಗಿದ್ದ ಮಾಸಾಶನ ಈಗ ಸ್ಥಗಿತಗೊಂಡಿರುವು ದರಿಂದ ಜೀವನ ನಿರ್ವಹಣೆ ಕಷ್ಟ ವಾಗಿದೆ. ಇನ್ನಾ ದರೂ ಅಧಿಕಾರಿಗಳು ವೃದ್ಧನ ಕಷ್ಟಕ್ಕೆ ಸ್ಪಂದಿಸುವರೇ ಎಂದು ಕಾದು ನೋಡಬೇಕಿದೆ.

 

● ಎಚ್.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.