ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ
Team Udayavani, Sep 12, 2019, 3:00 AM IST
ಬೆಂಗಳೂರು: ರಾಜ್ಯ ಸರ್ಕಾರ ಐವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮುನೀಶ್ ಮೌದ್ಗಿಲ್-ನಿರ್ದೇಶಕರು, ಆಡಳಿತ ಸುಧಾರಣೆ ಹಾಗೂ ತರಬೇತಿ ಕೇಂದ್ರ ಮೈಸೂರು. ಡಾ.ರವಿಶಂಕರ್-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಎನ್. ಜಯ ರಾಮ್-ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಜಲ ಭಾಗ್ಯ ನಿಗಮ. ಎಂ.ಟಿ.ರೇಜು-ಆಯುಕ್ತರು, ಸರ್ವೇ, ಪುನರ್ವಸತಿ ಹಾಗೂ ಭೂ ದಾಖಲೆಗಳ ಇಲಾಖೆ. ವಿ.ಪಿ. ಇಕ್ಕೇರಿ-ಮುಖ್ಯಮಂತ್ರಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಜೊತೆಗೆ ಬಿಎಂಆರ್ಡಿಎ ಆಯುಕ್ತರ ಹುದ್ದೆಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.