ಐಎನ್ಎಕ್ಸ್ ಪ್ರಕರಣ: ಇಂದು ಚಿದಂಬರಂ ತೀರ್ಪು ಪ್ರಕಟ
Team Udayavani, Sep 13, 2019, 12:15 AM IST
ನವದೆಹಲಿ: ಐಎನ್ಎಕ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಶರಣಾಗುವ ವಿಚಾರಕ್ಕೆ ಸಂಬಂಧಿಸಿದ ತೀರ್ಪನ್ನು ನವದೆಹಲಿಯ ವಿಶೇಷ ಕೋರ್ಟ್ ಶುಕ್ರವಾರ ಪ್ರಕಟಿಸಲಿದೆ. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಇ.ಡಿ. ಪರವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವರ ಬಂಧನ ಅಗತ್ಯವಾಗಿದೆ ಎಂದು ಅರಿಕೆ ಮಾಡಿದರು. ಸದ್ಯ ಅವರು ಸಿಬಿಐ ದಾಖಲಿಸಿದ ಕೇಸಿನಲ್ಲಿ ನ್ಯಾಯಾಂಗ ವಶದಲ್ಲಿದ್ದಾರೆ. ಹೀಗಾಗಿ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲವೆಂದರು.
ಚಿದು ಪರ ವಾದಿಸಿದ ಕಪಿಲ್ ಸಿಬಲ್ “ನನ್ನ ಕಕ್ಷಿದಾರ ನರಳುವಂತೆ ಮಾಡಬೇಕು ಎನ್ನುವುದೇ ಜಾರಿ ನಿರ್ದೇಶನಾಲಯದ ದುರುದ್ದೇಶ’ ಎಂದು ದೂರಿದ್ದಾರೆ.
ಮನೆ ಊಟಕ್ಕೆ ನಕಾರ:
ಇದೇ ವೇಳೆ, ಸಿಬಲ್ ಜೈಲಿನಲ್ಲಿ ಚಿದುಗೆ ಮನೆಯೂಟ ಒದಗಿಸಲು ಅನುಮತಿ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ “ಜೈಲಿನಲ್ಲಿ ಎಲ್ಲರಿಗೆ ನೀಡುವ ಆಹಾರವನ್ನೇ ನಿಮಗೂ ನೀಡಲಾಗುತ್ತದೆ’ ಎಂದರು. ಅದಕ್ಕೆ ವಕೀಲ ಕಪಿಲ್ ಸಿಬಲ್ “ಅವರಿಗೆ 74 ವರ್ಷ ವಯಸ್ಸಾಗಿದೆ’ ಎಂದರು. ಅದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ “ಐಎನ್ಎಲ್ಡಿ ನಾಯಕ ಓಂ ಪ್ರಕಾಶ್ ಚೌಟಾಲಾಗೆ ಕೂಡ ವಯಸ್ಸಾಗಿದೆ. ಅವರೂ ಕೈದಿಯೇ. ಯಾರಿಗೂ ತಾರತಮ್ಯ ಮಾಡಲಾಗದು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ