ವಿಶ್ವ ರಿಲೇ ಕೂಟದಲ್ಲಿ ಹಿಮಾದಾಸ್ ಹೆಸರು ದಿಢೀರ್ ನಾಪತ್ತೆ!
ಭಾರತ ಅಥ್ಲೆಟಿಕ್ಸ್ ಸಂಸ್ಥೆ ಸಲ್ಲಿಸಿದ್ದ ಪಟ್ಟಿಯಲ್ಲಿ ಪ್ರಖ್ಯಾತ ಓಟಗಾರ್ತಿಯ ಹೆಸರಿಲ್ಲ
Team Udayavani, Sep 13, 2019, 8:50 PM IST
-ಬೆನ್ನುನೋವಿನ ಕಾರಣದಿಂದ ಕೂಟದಿಂದ ಹಿಂದೆ ಸರಿದ ಹಿಮಾ ?
ನವದೆಹಲಿ: ಅಚ್ಚರಿಯೆಂಬಂತೆ ಭಾರತದ ಪ್ರಖ್ಯಾತ ಓಟಗಾರ್ತಿ ಹಿಮಾದಾಸ್, ವಿಶ್ವ ರಿಲೇ ಚಾಂಪಿಯನ್ಶಿಪ್ ತಂಡದಿಂದ ಹೊರಬಿದ್ದಿದ್ದಾರೆ. ಎಎಫ್ಐ (ಭಾರತ ಅಥ್ಲೆಟಿಕ್ಸ್ ಒಕ್ಕೂಟ) ಸಲ್ಲಿಸಿದ ಮಿಶ್ರ ಮತ್ತು ಮಹಿಳಾ ವಿಭಾಗದ ರಿಲೇಯ ಎರಡೂ ತಂಡಗಳಲ್ಲೂ ಹಿಮಾ ಹೆಸರು ಕಾಣಿಸುತ್ತಿಲ್ಲ. ಆದರೆ ಸೆ.9ರಂದು ಎಎಫ್ಐ ಬಿಡುಗಡೆ ಮಾಡಿದ್ದ 7 ಮಹಿಳಾ ಅಥ್ಲೀಟ್ಗಳ ಪಟ್ಟಿಯಲ್ಲಿ ಹಿಮಾ ಹೆಸರಿತ್ತು. ಈಗ ದಿಢೀರನೆ ಅವರ ಹೆಸರ ನಾಪತ್ತೆಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಸೆ.16ರವರೆಗೆ ಹಿಮಾ ಹೆಸರು ಸೇರಿಸಲು ಎಎಫ್ಐಗೆ ಅವಕಾಶವಿದೆ.
ದೋಹಾದಲ್ಲಿ ಸೆ.27ರಿಂದ ಅ.6ರವರೆಗೆ ಕೂಟ ನಡೆಯಲಿದೆ. ಸದ್ಯ ಕರ್ನಾಟಕದ ಎಂ.ಆರ್.ಪೂವಮ್ಮ, ಜಿಸ್ನಾ ಮ್ಯಾಥ್ಯೂ, ರೇವತಿ ವೀರಮಣಿ, ಸುಭಾ ವೆಂಕಟೇಸನ್, ವಿ.ಕೆ.ವಿಸ್ಮಯಾ, ರಾಮರಾಜ್ ವಿಥ್ಯಾ ಹೆಸರು 4×400 ಮೀ. ಮಹಿಳಾ ರಿಲೇ ಪಟ್ಟಿಯಲ್ಲಿದೆ. ಮಿಶ್ರವಿಭಾಗದಲ್ಲಿ ಪೂವಮ್ಮ, ಜಿಸ್ನಾ, ವಿಸ್ಮಯಾ (ಮಹಿಳೆಯರು), ಜೇಕಬ್ ಅಮೊಜ್, ಮುಹಮ್ಮದ್ ಅನಾಸ್, ನೋ ಟಾಮ್ ನಿರ್ಮಲ್ (ಪುರುಷರು) ಸ್ಥಾನ ಪಡೆದಿದ್ದಾರೆ. ಈ ಎರಡೂ ತಂಡಗಳಲ್ಲಿ ಹಿಮಾ ಹೆಸರು ಕಾಣಿಸುತ್ತಿಲ್ಲ.
ಒಂದು ಅಂದಾಜಿನ ಪ್ರಕಾರ, ಹಿಮಾಗೆ ಬೆನ್ನು ನೋವಿದೆ. ಆದ್ದರಿಂದಲೇ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ ನಂತರ ಹಿಮಾ ತೀವ್ರ ಬೆನ್ನುನೋವಿನಿಂದ ಒದ್ದಾಡುತ್ತಿದ್ದರು. ಈ ವರ್ಷ ಏಪ್ರಿಲ್ನಲ್ಲಿ ದೋಹಾದಲ್ಲೇ ನಡೆದಿದ್ದ ವೈಯಕ್ತಿಕ 400 ಮೀ. ಓಟದ ಸ್ಪರ್ಧೆಯ ಅರ್ಧದಿಂದಲೇ ಹಿಮಾ ಹಿಂದೆ ಸರಿದಿದ್ದರು. ಸೊಂಟದ ಭಾಗದಲ್ಲಿರುವ ಎರಡು ಬೆನ್ನುಮೂಳೆಯ ನೋವಿನಿಂದ ಅವರು ಒದ್ದಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಹಿಮಾ ಹೆಸರು ಕಾಣಿಸದಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ