ನಿವೃತ್ತಿ ತೊರೆದು ಬಂದ ರಾಯುಡು ಈಗ ಹೈದರಾಬಾದ್ ತಂಡದ ನಾಯಕ!
Team Udayavani, Sep 14, 2019, 9:00 PM IST
ಹೈದರಾಬಾದ್: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಸಿಟ್ಟು ಹಾಗೂ ಬೇಸರದಿಂದ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಮರಳಿ ಕ್ರಿಕೆಟ್ ಆಡುವ ನಿರ್ಧಾರ ತೆಗೆದುಕೊಂಡದ್ದು ಕೆಲವು ದಿನಗಳ ಹಿಂದಿನ ಸುದ್ದಿ.
ಶನಿವಾರದ ಬ್ರೇಕಿಂಗ್ ನ್ಯೂಸ್’ ಎಂದರೆ ರಾಯುಡು ವಿಜಯ್ ಹಜಾರೆ ಟ್ರೋಫಿ’ ಪಂದ್ಯಾವಳಿಗಾಗಿ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾದದ್ದು!
ಆಯ್ಕೆ ಸಮಿತಿ ಅಧ್ಯಕ್ಷ ನೋಯೆಲ್ ಡೇವಿಡ್, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಅಂಬಾಟಿ ರಾಯುಡು ನಿರ್ಧಾರ ಬದಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕ್ರಿಕೆಟಿಗೆ ಮರಳುವ ನಿರ್ಧಾರ ಪ್ರಕಟಿಸಿದ ಬಳಿಕ ರಾಯುಡು ಹೈದರಾಬಾದ್ ಕ್ರಿಕೆಟ್ ಮಂಡಳಿಯ ನಿರಂತರ ಸಂಪರ್ಕದಲ್ಲಿದ್ದರು. ಇದಕ್ಕೀಗ ಸೂಕ್ತ ಫಲ ಲಭಿಸಿದೆ. ಮುಂದೆ ಹೈದರಾಬಾದ್ ರಣಜಿ ತಂಡಕ್ಕೂ ರಾಯುಡು ಆಯ್ಕೆಯಾಗುವ ಸೂಚನೆ ಲಭಿಸಿದೆ.
ಭಾರತದ ಪರ ಆಡಿದ್ದ ಮತ್ತೂಬ್ಬ ಆಟಗಾರ ಮೊಹಮ್ಮದ್ ಸಿರಾಜ್ ಕೂಡ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬಿ. ಸಂದೀಪ್ ಉಪನಾಯಕನಾಗಿದ್ದಾರೆ.
ಹೈದರಾಬಾದ್ ತನ್ನ ಮೊದಲ ಲೀಗ್ ಪಂದ್ಯವನ್ನು ಸೆ. 24ರಂದು ಕರ್ನಾಟಕ ವಿರುದ್ಧ ಆಡಲಿದೆ. ಬಳಿಕ ಗೋವಾ, ಆಂಧ್ರ ಪ್ರದೇಶ, ಜಾರ್ಖಂಡ್, ಚತ್ತೀಸ್ಗಢ, ಸೌರಾಷ್ಟ್ರ, ಮುಂಬೈ ಮತ್ತು ಕೇರಳವನ್ನು ಎದುರಿಸಲಿದೆ.