ಮಕ್ಕಳ ಕಳ್ಳರೆಂದು ಇಬ್ಬರಿಗೆ ಥಳಿತ; ಆರು ಜನರ ಬಂಧನ
Team Udayavani, Sep 16, 2019, 3:00 AM IST
ಚಿತ್ತಾಪುರ: ಮಕ್ಕಳನ್ನು ಕಳ್ಳತನ ಮಾಡಿ ಅಂಗಾಂಗ ಮಾರುತ್ತಾರೆಂಬ ವದಂತಿ ತಾಲೂಕಿನಾದ್ಯಂತ ಹರಡಿದ್ದು, ಸ್ಟೇಷನ್ ತಾಂಡಾಕ್ಕೆ ಬಂದಿದ್ದ ಇಬ್ಬರನ್ನು ಮಕ್ಕಳ ಕಳ್ಳರೆಂದು ತಿಳಿದು ಥಳಿಸಿದ ಘಟನೆ ನಡೆದಿದೆ. ಕಲಬುರಗಿ ತಾಲೂಕು ಮುತ್ಯಾನ ಬಬಲಾದ ಗ್ರಾಮದ ಶಂಕರ ಗಂಗಾರಾಮ ಜೋಶಿ, ಸಂತೋಷ ಶಂಕರ ಜೋಶಿ ಎಂಬುವರನ್ನು ಥಳಿಸಲಾಗಿದ್ದು,
ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ ರಾಠೊಡ, ಗುರುನಾಥ ರಾಠೊಡ, ಅಂಬಾದಾಸ ಚವ್ಹಾಣ, ಅಂಬರೀಶ ಚವ್ಹಾಣ, ಬಸಪ್ಪ ಕಡೆಸೂರ್ ಹಾಗೂ ಥಳಿತದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ವೆಂಕಟೇಶ ಜಾಧವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಅಲ್ಲದೇ ಎಲ್ಲಿಯೂ ಮಕ್ಕಳ ಕಳ್ಳತನ ನಡೆದಿಲ್ಲ. ಮಕ್ಕಳ ಕಳ್ಳರು ಎಂಬುದು ಶುದ್ಧ ಸುಳ್ಳು. ಇಂತಹ ಸುದ್ದಿಗಳಿಗೆ ಯಾರೂ ಕಿವಿಗೊಡಬಾರದೆಂದು ಅವರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ