ವಿಮೋಚನೆಗೆ ಬೀದರ ಕೊಡುಗೆ ಅಪಾರ

•ವಿವಿಧೆಡೆ ನಡೆಯುತ್ತಿದ್ದವು ಸ್ವಯಂ ರಕ್ಷಣಾ ತರಬೇತಿ•ಜಿಲ್ಲೆಯ ಹೋರಾಟಗಾರರ ಸ್ಮಾರಕ ನಿರ್ಮಾಣವಾಗಲಿ

Team Udayavani, Sep 17, 2019, 3:03 PM IST

Udayavani Kannada Newspaper

ಬೀದರ: ಹೈದ್ರಾಬಾದ-ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಜಿಲ್ಲೆಯ ಅದೇಷ್ಟೊ ಜನ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದಾರೆ. ಹೋರಾಟದಲ್ಲಿ ಧುಮುಕಿ ಹತ್ಯಾಕಾಂಡಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ಈ ಭಾಗದ ಜಲಿಯಾನ್‌ವಲಾಬಾಗ ಎಂದೇ ಅಲ್ಲಿನ ಗ್ರಾಮಸ್ಥರು ಇಂದಿಗೂ ನೆನೆಪಿಸುತ್ತಾರೆ. ನಾವು ದೇಶದ ಮಹಾನ್‌ ನಾಯಕರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುತ್ತೇವೆ. ಆದರೆ, ಹೈದ್ರಾಬಾದ ಕರ್ನಾಟಕ ಭಾಗದ ಹೋರಾಟ ಕುರಿತು ಈ ಭಾಗದ ಯುವಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾಹಿತಿಯ ಕೊರತೆ ಇಂದಿಗೂ ಇದೆ. ವಿಮೋಚನಾ ಚಳವಳಿ ಕುರಿತು ಯಾವುದೇ ಪಠ್ಯಪುಸ್ತಕದಲ್ಲಿ ಪೂರ್ಣ ಪ್ರಮಾಣದ ಇತಿಹಾಸ ಹೇಳುವ ಕೆಲಸ ಇಂದಿಗೂ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಅನೇಕ ಹೋರಾಟಗಾರರ ಇತಿಹಾಸ ಅವರ ಕುಟುಂಬಕ್ಕೆ ಮಾತ್ರ ಸಿಮಿತಗೊಂಡಿರುವುದು ವಿಪರ್ಯಾಸ.

ಹೋರಾಟದ ಸ್ವರೂಪ: ಹೈ.ಕ. ವಿಮೋಚನೆಗಾಗಿ ಜಿಲ್ಲೆಯ ಅನೇಕ ಮಠ, ಸಂಸ್ಥಾನ, ಶಿಕ್ಷಣ ಸಂಸ್ಥೆಗಳು ಕೂಡ ಶ್ರಮಿಸಿವೆ. ಹೋರಾಟದ ರೂಪುರೇಷೆ ಸಿದ್ಧಪಡಿಸುವುದು ಹಾಗೂ ಹೋರಾಟದಲ್ಲಿ ಧುಮುಕುವ ಯುವಕರಿಗಾಗಿ ವಿವಿಧೆಡೆ ತರಬೇತಿ ಕೇಂದ್ರಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದ ಆರ್ಯ ಸಮಾಜ, ಗೋರ್ಟಾ ಹಿರೇಮಠ, ಭಾಲ್ಕಿ ಹಿರೇಮಠ, ಮಾಣಿಕನಗರದ ಮಾಣಿಕಪ್ರಭುಗಳ ಸಂಸ್ಥಾನ, ಚಿಟಗುಪ್ಪ ಭವಾನಿ ಮಂದಿರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಗುಪ್ತವಾಗಿ ಸ್ವಯಂ ರಕ್ಷಣಾ ತರಬೇತಿಗಳು ನಡೆಯುತ್ತಿದವು.

ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡ ದಿ| ರಾಮಚಂದ್ರ ವೀರಪ್ಪ ಅವರು ಕೂಡ ಈ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಅವರ ನಿಧನದ ನಂತರ ಸರ್ಕಾರ ಅವರ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿದ್ದು, ಇಂದಿಗೂ ಆ ಕಾರ್ಯ ನಡೆದಿಲ್ಲ. ಈ ಭಾಗದಲ್ಲಿ ಆರ್ಯ ಸಮಾಜದ ಶಾಖೆಗಳನ್ನು ಸ್ಥಾಪಿಸಿದ ಭಾಯಿ ಬನಸ್ಸಿಲಾಲ್ ಹೋರಾಟಕ್ಕೆ ಹೊಸ ಸ್ವರೂಪ ನೀಡಿದರು. ವಕೀಲರಾದ ಇವರು ಸರದಾರ ವಲ್ಲಭಾಯಿ ಪಟೇಲ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಇಲ್ಲಿನ ಕ್ರೌರ್ಯ, ನಿಜಾಮನ ದಬ್ಟಾಳಿಕೆ ಕುರಿತು ವಿವರಿಸಿದರು. ಈ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದು, ಇವರ ಕಾರ್ಯಕ್ಕೆ ಭಾಯಿ ಶಾಮಲಾಲ್ ಸಾಥ್‌ ನೀಡಿದರು. ಅಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜನರು ಹೋರಾಟ ನಡೆಸಿದ್ದು, ಅವರ ಕಾರ್ಯಗಳನ್ನು ಗುರುತಿಸಿ, ಈ ಭಾಗದಲ್ಲಿ ವಿಶೇಷ ಸ್ಮಾರಕಗಳನ್ನು ನಿರ್ಮಿಸುವ ಕಾರ್ಯ ನಡೆಯಬೇಕಾಗಿದೆ ಎನ್ನುತ್ತಾರೆ ಹುತಾತ್ಮರ ಕುಟುಂಬದವರು.

ಆಪರೇಷನ್‌ ಪೋಲೊ: ಸ್ವತಂತ್ರ ಭಾರತದ ಒಕ್ಕೂಟ ಆಡಳಿತ ವ್ಯವಸ್ಥೆಗೆ ಸೇರದಿರಲು ನಿರ್ಧರಿಸಿದ ನಿಜಾಮನ ಸೈನ್ಯ ಈ ಭಾಗದಲ್ಲಿ ಹಿಂಸೆಗೆ ಮುಂದಾಗಿತ್ತು. ಇಲ್ಲಿನ ಕ್ರೌರ್ಯದ ಮಾಹಿತಿ ಪಡೆದುಕೊಂಡ ಅಂದಿನ ಗೃಹ ಮಂತ್ರಿ ಸರ್ದಾರ್‌ ವಲ್ಲಭಾಯಿ ಪಟೇಲರು 1948 ಸೆಪ್ಟೆಂಬರ್‌ 13ಕ್ಕೆ ‘ಆಪರೇಷನ್‌ ಪೋಲೊ’ ಎಂಬ ಹೆಸರಿನ ಕಾರ್ಯಾಚರಣೆ ಶುರು ಮಾಡಿದರು. ಸೊಲ್ಲಾಪೂರ, ಬೇಜವಾಡ ಮಾರ್ಗವಾಗಿ ಆರಂಭಗೊಂಡ ಕಾರ್ಯಚರಣೆ ಮೇಜರ್‌ ಜನರಲ್ ಜೆ.ಎನ್‌. ಚೌಧರಿ ಅವರ ನೇತೃತ್ವದಲ್ಲಿ ರಜಾಕಾರರ ಪಡೆಯ ವಿರುದ್ಧ ಹೋರಾಟ ನಡೆಯಿತು.

ಸತತ ಐದುದಿನಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಸೆಪ್ಟೆಂಬರ್‌ 17ರ ಸಂಜೆ 5 ಗಂಟೆ ಸುಮಾರು ಹೈದ್ರಾಬಾದ್‌ ಸಂಸ್ಥಾನದ ಸೇನೆಯ ಮುಖ್ಯಸ್ಥ ಎಲ್.ಉದ್ರುಜ್‌ ಭಾರತೀಯ ಸೇನೆಗೆ ಶರಣಾದರು. ನಿಜಾಮನು ಹೈದ್ರಾಬಾದ ಕರ್ನಾಟಕವನ್ನು ಅಧಿಕೃತವಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಸಿ ಅಂಗೀಕಾರ ಪತ್ರಕ್ಕೆ ಸಹಿ ಹಾಕಿದನು. ಆ ಮೂಲಕ ಹೈ.ಕ. ವಿಮೋಚನೆ ಹೊಂದಿ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಿರುವುದು ಇತಿಹಾಸ.

 

•ದುರ್ಯೋಧನ ಹೂಗಾರ

ಟಾಪ್ ನ್ಯೂಸ್

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

Bidar; ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

Bidar: ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

1-panaji

Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.