ಎಫ್ ಡಿ ಯಲ್ಲಿ ಹಣ ಕೂಡಿಡುವುದಕ್ಕೇ ಜನರ ಆಸಕ್ತಿ!

ಲೋಕಲ್‌ ಸರ್ಕಲ್‌ ಗ್ರಾಹಕ ಸಮೀಕ್ಷೆಯಲ್ಲಿ ಜನರ ಮನಸ್ಥಿತಿ ಬಹಿರಂಗ

Team Udayavani, Sep 19, 2019, 5:33 AM IST

q-28

ಹೊಸದಿಲ್ಲಿ: ಗ್ರಾಹಕ ಸರಕುಗಳಿಗೆ ಕುಸಿಯುತ್ತಿರುವ ಬೇಡಿಕೆಯಿಂದ ಉತ್ಪಾದನ ವಲಯ ತನ್ನ ಉತ್ಪಾದನೆಯ ಪ್ರಮಾಣವನ್ನು ಕಡಿತಗೊಳಿಸಿವೆ. ಜನರು ಖರೀದಿ ನಡೆಸದೇ ಇರುವುದು ಇದಕ್ಕೆ ಮೂಲ ಕಾರಣ ಎನ್ನಲಾಗಿದೆ.

ಈ ಬಗ್ಗೆ ಖಚಿತಪಡಿಸಿಕೊಳ್ಳಲು ಲೋಕಲ್‌ ಸರ್ಕಲ್‌ ಹೆಸರಿನ ಸಂಸ್ಥೆ ಮೂಡ್‌ ಆಫ್ ಕನ್ಸೂಮರ್‌ ಸರ್ವೆ (ಗ್ರಾಹಕ ಸಮೀಕ್ಷೆ) ನಡೆಸಿದ್ದು ಜನರ ವ್ಯಾಪಾರ ಮನಸ್ಥಿತಿಯನ್ನು ತೆರೆದಿಟ್ಟಿದೆ.

ಸರ್ವೇ ಹೇಳಿದ್ದೇನು?
ಮುಂದಿನ 2 ತಿಂಗಳ ಖರ್ಚು ವೆಚ್ಚಗಳ ಕುರಿತು ವಿಶೇಷವಾಗಿ ಹಬ್ಬದ ವೇಳೆ ಖರೀದಿ ನಡೆಸಲಿದ್ದೀರಾ? ಏನು ಮಾಡುತ್ತಿರಿ ಎಂದು ಗ್ರಾಹಕರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಗ್ರಾಹಕರು ಅವರದ್ದೇ ಆದ ಬಜೆಟ್‌ ಬಗ್ಗೆ ತಮ್ಮ ಉತ್ತರವನ್ನು ನೀಡಿದ್ದಾರೆ.

ಜನರ ಮನಸ್ಥಿತಿ ಏನು?
ಮುಂದಿನ 2 ತಿಂಗಳು ಹಬ್ಬದ ಸೀಸನ್‌ ಆಗಿದ್ದು ಶೇ. 43ರಷ್ಟು ಜನ ನಾವು ಹಬ್ಬಕ್ಕಾಗಿ 10 ಸಾವಿರ ರೂ. ಖರ್ಚು ಮಾಡುತ್ತೇವೆ ಎಂದಿದ್ದಾರೆ. ಇನ್ನು 10 ಸಾವಿರದಿಂದ 50,000 ಸಾವಿರ ರೂ.ಗಳನ್ನು ನಿರ್ದಿಷ್ಟ ಕ್ಷೇತ್ರಕ್ಕೆ ವ್ಯಯಮಾಡುತ್ತೇವೆ ಎಂದು

ಶೇ.31ರಷ್ಟು ಗ್ರಾಹಕರು ಹೇಳಿದ್ದಾರೆ.
ಹಬ್ಬದ ವೇಳೆ 50 ಸಾವಿರಕ್ಕಿಂತ ಮೇಲ್ಪಟ್ಟು ಖರ್ಚು ಮಾಡುವವರು ಕೇವಲ 4 ಶೇ. ಜನ ಮಾತ್ರ ಎಂದು ಸರ್ವೇ ಹೇಳಿದೆ.

ಜನರ ಹಣ ಎಲ್ಲೆಲ್ಲಿದೆ?
ಸದ್ಯದ ಪರಿಸ್ಥಿತಿಯಲ್ಲಿ ಜನರ ಹಣದ ಶೇ. 44ರಷ್ಟು ಫಿಕ್ಸೆಡ್‌ ಡಿಪಾಸಿಟ್‌ (ಎಫ್ ಡಿ) ರೂಪದಲ್ಲಿದೆ. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಶೇ. 36ರಷ್ಟು ಮಂದಿ ಹಣ ಹೂಡಿದ್ದಾರೆ. ಉಳಿತಾಯ ಖಾತೆಯಲ್ಲಿ ಶೇ. 13ರಷ್ಟು ಹಣ ಇದ್ದರೆ, ರಿಯಲ್‌ಎಸ್ಟೇಟ್‌ನಲ್ಲಿ ಶೇ. 7 ಮಂದಿ ಹಣ ಹೂಡಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಿದವರ್ಯಾರೂ ಸಮೀಕ್ಷೆಗೆ ಸಿಗಲಿಲ್ಲ ಎಂದು ಸಂಸ್ಥೆ ಹೇಳಿದೆ. ಲಭಿಸಿಲ್ಲ.

ಹಣ ಚಲಾವಣೆ ಕುಸಿತ ಕಾರಣ?
ಪ್ರಸ್ತುತ ಮಾರುಕಟ್ಟೆಯಲ್ಲಿ ಹಣ ಓಡಾಡದೇ ಇರಲು ಹಲವು ಕಾರಣಗಳಿವೆ. ಈ ಅಧ್ಯಯನದ ಪ್ರಕಾರ ಶೇ. 11ರಷ್ಟು ಜನರು ಮಾತ್ರ ಹೆಚ್ಚು ವ್ಯವಹಾರದಲ್ಲಿ ತೊಡಗಿದ್ದಾರೆ. ಈ ಹಿಂದಿನ ನಮ್ಮ ವ್ಯವಹಾರಗಳಿಗೂ, ಈಗಿನ ವ್ಯವಹಾರಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಶೇ. 41 ಮಂದಿ ಹೇಳಿದ್ದಾರೆ. ಇಲ್ಲ ನಾವೀಗ ವ್ಯವಹಾರ ಕಡಿಮೆ ಮಾಡಿದ್ದೇವೆ ಎಂದು ಶೇ.32 ಮಂದಿ ಹೇಳಿದ್ದು, 14 ಮಂದಿ ನಾವು ಏನೂ ಖರ್ಚು ಮಾಡಿಲ್ಲ ಎಂದಿದ್ದಾರೆ. ಶೇ. 2ರಷ್ಟು ಮಂದಿ ಖರ್ಚಿನ ಬಗ್ಗೆ ಏನೊಂದೂ ಉತ್ತರವನ್ನು ಕೊಟ್ಟಿಲ್ಲ.

60 ದಿನಗಳ ಹೂಡಿಕೆ ಎಲ್ಲೆಲ್ಲಿ?
ಮುಂದಿನ 2 ತಿಂಗಳು ಜನ ಎಲ್ಲೆಲ್ಲಿ ಹೂಡಿಕೆ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಲಭಿದ್ದು, ಮನೆ ನವೀಕರಣಕ್ಕೆ ಶೇ. 29ರಷ್ಟು ಜನ ಆಸಕ್ತಿ ಹೊಂದಿದ್ದಾರೆ. ವಾಹನ ಖರೀದಿಗೆ ಶೇ. 12, ಒಡವೆ ಖರೀದಿಗೆ ಶೇ. 6, ಎಲೆಕ್ಟ್ರಾನಿಕ್‌ ಉಪಕರಣ ಖರೀದಿಗೆ ಶೇ. 20, ಪ್ರಾಪರ್ಟಿ ಖರೀದಿಗೆ ಶೇ. 3 ಮತ್ತು ಇತರ ಕ್ಷೇತ್ರದಲ್ಲಿ ಶೇ. 20 ಜನ ಹಣ ಹೂಡಲಿದ್ದಾರೆ.

ಇವರಲ್ಲಿ ಶೇ. 62ರಷ್ಟು ಜನ ರಿಟೇಲ್‌ ಶಾಪ್‌ ಮೂಲಕ ಎಲೆಕ್ಟ್ರಾನಿಕ್ಸ್‌ ಉಪಕರಣ ಖರೀದಿ ಮಾಡಲಿದ್ದು, ಶೇ. 27ರಷ್ಟು ಜನ ಇ-ಕಾಮರ್ಸ್‌ ಮೊರೆ ಹೋಗಲಿದ್ದಾರೆ.  ಶೇ.11ರಷ್ಟು ಮಂದಿ ಮಾತ್ರ ಇನ್ನೂ ಗೊಂದ ಲದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಪರಿಸ್ಥಿತಿ ಸುಧಾರಿಸಲ್ಲ?
ಮುಂದಿನ 6 ತಿಂಗಳಲ್ಲಿ ನಮ್ಮ ವಿತ್ತೀಯ ಪರಿಸ್ಥಿತಿ ಸುಧಾರಿಸಬಹುದೇ ಎಂಬ ಪ್ರಶ್ನೆಗೆ ಶೇ. 31 ಜನ ಪರಿಸ್ಥಿತಿ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಶೇ. 31ರಷ್ಟು ಜನ ಅಭಿಮತ ವ್ಯಕ್ತಪಡಿಸಿದರೆ, ಈಗಿನ ಪರಿಸ್ಥಿತಿಗಿಂತ ಕಳಪೆಯಾಗಲಿದೆ ಎಂದು ಶೇ. 31 ಜನ ಅಭಿಪ್ರಾಯಿಸಿದ್ದಾರೆ. ನಾವೇನೂ ಹೇಳಲು ಬರುವುದಿಲ್ಲ ಎಂದು ಶೇ. 7ರಷ್ಟು ಮಂದಿ ಹೇಳಿದ್ದಾರೆ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.