ರಾಂಪುರ ಏತ ನೀರಾವರಿ ಮುಖ್ಯನಾಲೆ ಬಿರುಕು
Lingasaguru: Rampur's irrigation project
Team Udayavani, Sep 22, 2019, 3:37 PM IST
ಲಿಂಗಸುಗೂರು: ಕಳೆದ ತಿಂಗಳು ಕಾಲುವೆಗೆ ಹರಿಸಿದ ನೀರಿನ ಒತ್ತಡಕ್ಕೆ ಹಾಗೂ ಇತ್ತೀಚೆಗೆ ಎರಡ್ಮೂರು ದಿನ ಸುರಿದ ಮಳೆಗೆ ತಾಲೂಕಿನ ರಾಂಪುರ ಏತ ನೀರಾವರಿ ಯೋಜನೆ ಮುಖ್ಯ
ನಾಲೆಯಲ್ಲಿ ಬಿರುಕು ಬಿಟ್ಟಿದ್ದು, ನಾಲೆ ಒಡೆಯುವ ಭೀತಿ ಎದುರಾಗಿದೆ.
ರಾಂಪುರ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ 4ನೇ ಕಿ.ಮೀ. ನರಕಲದಿನ್ನಿ ಬಳಿಯ ನಾಲೆಯನ್ನು ಕೆಲ ತಿಂಗಳ ಹಿಂದಷ್ಟೇ ಸಂಪೂರ್ಣ ದುರಸ್ತಿ ಮಾಡಲಾಗಿತ್ತು. ನಾಲೆಯ ಎರಡು ಬದಿಯ ಲೈನಿಂಗ್ಗೆ ಸಿಮೆಂಟ್ ಕಾಂಕ್ರಿಟ್ ಹಾಕಲಾಗಿತ್ತು. ಆದರೆ ನಾಲೆಗಳ ದುರಸ್ತಿ ಕಾಮಗಾರಿ ಸಕಾಲಕ್ಕೆ ಮುಗಿದಿರಲಿಲ್ಲ. ಇದೇ ವೇಳೆ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದು ಬಸವಸಾಗರ ಜಲಾಶಯ ಭರ್ತಿ ಆಗಿದ್ದರಿಂದ ನಾಲೆಗೆ ನೀರು ಹರಿಸಲಾಗಿತ್ತು. ಈ ನೀರಿನ ಒತ್ತಡಕ್ಕೆ ಕಾಲುವೆಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಎರಡ್ಮೂರು ದಿನ ಸುರಿದ ಮಳೆಗೆ ಕಾಲುವೆ ಪಕ್ಕದ ರಸ್ತೆ ಮಣ್ಣು ಕುಸಿದು ಕಾಲುವೆ ಎರಡೂ ಬದಿಯ ಗೋಡೆಯ
ಸಿಮೆಂಟ್ ಕಿತ್ತು ಭಾರೀ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾಲುವೆ ಬಿರುಕು ಬಿಡಲು ಕಳಪೆ ಕಾಮಗಾರಿಯೇ ಕಾರಣ ಎಂದು ರೈತರು ದೂರಿದ್ದರೆ, ರಾಂಪುರ ಏತ ನೀರಾವರಿ ಯೋಜನೆ ಕಿರಿಯ ಅಭಿಯಂತರ ಮಂಜುನಾಥ, ಜಮೀನುಗಳಿಗೆ ನೀರು ಬರಲಿ ಎಂದು ಕಾಲುವೆ ವ್ಯಾಪ್ತಿಯ ರೈತರು ಅಲ್ಲಲ್ಲಿ ಕಾಲುವೆಗೆ ಬೋಂಗಾ ಹಾಕಿದ್ದರಿಂದ ಕಾಲುವೆ ಬಿರುಕು ಬಿಟ್ಟಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ