ದೇವತೆಯಾದ ರಾಧಿಕಾ…!
ದಮಯಂತಿಯಲ್ಲಿ ಕನಸಿನ ಪಾತ್ರ ಮಾಡಿದ ಖುಷಿ
Team Udayavani, Sep 23, 2019, 3:04 AM IST
“ಅಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ. ಇತ್ತು. ಅದೀಗ ನೆರವೇರಿದೆ…’ ಇದು ರಾಧಿಕಾ ಅವರ ಖುಷಿಯ ಮಾತು. ಹೌದು, ರಾಧಿಕಾ ಅವರಿಗೆ ತೆಲುಗಿನ “ಅರುಂಧತಿ’ ಚಿತ್ರದಲ್ಲಿ ನಟಿ ಅನುಷ್ಕಾ ನಿರ್ವಹಿಸಿದ್ದ ರೀತಿಯ ಪಾತ್ರ ಮಾಡಬೇಕು ಅಂತ ಬಹಳ ದಿನದಿಂದಲೂ ಅವರ ಆಸೆ ಮತ್ತು ಕನಸಾಗಿತ್ತು. ಅದೀಗ ನೆರವೇರಿದ ಖುಷಿ ಅವರದು. ಅವರು “ದಮಯಂತಿ’ ಸಿನಿಮಾದಲ್ಲಿ ವಿಶೇಷ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ.
ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಚಿತ್ರದ ಟೀಸರ್ ಕೂಡ ಹೊರಬಂದಿದೆ. ಸಿನಿಮಾದ ಟೀಸರ್ ನೋಡಿದವರು ಮೆಚ್ಚಿಕೊಂಡಿದ್ದಾರೆ. ಸ್ವತಃ ರಾಧಿಕಾ ಅವರಿಗೇ ಆ ಚಿತ್ರದ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲವೂ ಇದೆ. ಇಷ್ಟು ದಿನಗಳ ಕಾಲ ಹಲವು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ, “ದಮಯಂತಿ’ ಸಿನಿಮಾ ಮೂಲಕ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ, “ನಾನು ಒಂದೊಳ್ಳೆಯ ಕಥೆ ಇರುವ ಚಿತ್ರದಲ್ಲಿ ನೆನಪಲ್ಲುಳಿಯುವಂತಹ ಪಾತ್ರ ಮಾಡಬೇಕು ಎಂದು ಆಸೆ ಪಟ್ಟಿದ್ದೆ.
ಅದು “ದಮಯಂತಿ’ ಮೂಲಕ ಈಡೇರಿದೆ. ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನನ್ನ ಮಗಳು ಹಾಗು ಅಣ್ಣನ ಮಕ್ಕಳು ನನ್ನ ಗೆಟಪ್ ನೋಡಿದ ಬಳಿಕ ಹತ್ತಿರ ಬರಲು ಭಯಪಡುತ್ತಿದ್ದಾರೆ. ಅಷ್ಟೊಂದು ಎಫೆಕ್ಟ್ ಆಗಿರುವಂತಹ ಪಾತ್ರವದು. ಅದನ್ನು ಸಿನಿಮಾದಲ್ಲೇ ನೋಡಿದರೆ, ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನುವುದು ಗೊತ್ತಾಗುತ್ತೆ. ನಾನಿಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನು, ಈ ಚಿತ್ರದಲ್ಲಿ “ಭಜರಂಗಿ’ ಲೋಕಿ ಮುಖ್ಯ ಪಾತ್ರ ಮಾಡಿದ್ದಾರೆ. ಸಿನಿಮಾ ರಿಲೀಸ್ ನಂತರ ಅವರಿಗೆ ನಿಜಕ್ಕೂ ಒಳ್ಳೆಯ ಬ್ರೇಕ್ ಸಿಗಲಿದೆ’ ಎಂಬುದು ಅವರ ಮಾತು.
ನವರಸನ್ ಈ ಚಿತ್ರದ ನಿರ್ದೇಶಕರು. ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರೀಕರಣ ಸಮಯದಲ್ಲಿದ್ದ ಅವರಿಗೆ ಈ ಚಿತ್ರದ ಒನ್ಲೈನ್ ಹುಟ್ಟುಕೊಂಡಿದೆ. ಆಗಲೇ ಅವರು ಶೀರ್ಷಿಕೆ ಪಕ್ಕಾ ಮಾಡಿ, ನೋಂದಣಿ ಮಾಡಿಸಿ, ರಾಧಿಕಾ ಅವರಿಗೆ ಕಥೆ ಹೇಳಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡ ರಾಧಿಕಾ ಅವರು ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಹೇಳುವ ನವರಸನ್, “ಕಥೆಯಲ್ಲಿ ರಾಧಿಮಾ ಮೇಡಮ್ ಕೊಂಚ ಬದಲಾವಣೆ ಬಯಸಿದ್ದರು. ಅದನ್ನು ಸರಿಪಡಿಸಿಕೊಂಡು ಚಿತ್ರ ಮಾಡಿದ್ದೇವೆ. ಒಂದು ಊರಲ್ಲಿ ದೇವತೆ ಇದ್ದಾಗ, ದುಷ್ಟ ಶಕ್ತಿಗಳೆಲ್ಲಾ ಹೇಗೆ ಓಡಿ ಹೋಗುತ್ತವೆ ಎಂಬ ಕಥೆ ಇಲ್ಲಿದೆ.
ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಇದಾಗಲಿದೆ ಕನ್ನಡ ಸೇರಿದಂತೆ ತೆಲುಗು, ತುಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತಯಾರಾಗಿದೆ’ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ತಬಲನಾಣಿ, ಕೆಂಪೇಗೌಡ ಅವರು ನಟಿಸಿದ್ದು, ಚಿತ್ರೀಕರಣದ ಅನುಭವ ಹಂಚಿಕೊಂಡರು. ಉಳಿದಂತೆ “ದಮಯಂತಿ’ ಚಿತ್ರದಲ್ಲಿ ಬಲ ರಾಜವಾಡಿ, ಅನುಷಾ ರೈ, ವೀಣಾಸುಂದರ್, ಬೇಬಿ ಮಿಲನ, ಶರಣ್ ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ಎಸ್.ಗಣೇಶ್ನಾರಾಯಣ್ ಸಂಗೀತವಿದೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣವಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ನವೆಂಬರ್ನಲಿ ಚಿತ್ರ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?
ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ;
ಹೊಸ ಸೇರ್ಪಡೆ
MLC Election; ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷೇತರ ಸ್ಪರ್ಧೆಗೆ ರಘುಪತಿ ಭಟ್ ನಿರ್ಧಾರ
ಗದಗ: ಶಿವಮೊಗ್ಗ ಸಂಗೀತ ಪಾಠಶಾಲೆಗೆ “ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ
Rahul Gandhi: ಶೀಘ್ರದಲ್ಲೇ ಮದುವೆಯಾಗಲಿದ್ದೇನೆ… ಅಭಿಮಾನಿಯ ಪ್ರಶ್ನೆಗೆ ರಾಹುಲ್ ಉತ್ತರ
ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್, ಫೀಚರ್ಸ್
ಕಣಬರ್ಗಿ ರಸ್ತೆ ಪೂರ್ಣ ಆಗೋದು ಯಾವಾಗ? ಸಾರ್ವಜನಿಕರ ಆಕ್ರೋಶ