ಆರ್ಥಿಕ ಅಭಿವೃದ್ಧಿಗಾಗಿ ಬಿದಿರು ಮೆಳೆ ಬೆಳೆಯಿರಿ
Team Udayavani, Sep 23, 2019, 3:50 PM IST
ಮಾಗಡಿ: ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಬಿದಿರು ಮೆಳೆ ಬೆಳೆಯುವುದು ಅವಶ್ಯವಿದೆ ಎಂದು ಕೃಷಿಕ ಸಮಾಜದನವದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್ ಸಲಹೆ ನೀಡಿದರು.
ಬೆಂಗಳೂರಿನ ಲಾಲ್ಬಾಗ್ನಲ್ಲಿ ಭಾರತೀಯ ಗಂಧ ಮತ್ತು ಬಿದಿರು ಸೊಸೈಟಿ ಏರ್ಪಡಿಸಿದ್ದ ವಿಶ್ವ ಬಿದಿರು ದಿನಾಚರಣೆ ಪ್ರಯುಕ್ತ ಬಿದಿರು ಉತ್ಪನ್ನಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಿದಿರಿನಿಂದ ಕಲಾ ಕೌಶಲ್ಯಗಳನ್ನೇ ಧರೆಗಿಳಿಸುವಂತ ಶಕ್ತಿ ಹೊಂದಿದೆ. ಬಿದಿರಿನಿಂದ ಆಟೋಟ ವಸ್ತುಗಳನ್ನು ಪೂಜಾ ಸಾಮಗ್ರಿ, ಬುಟ್ಟಿ, ಬ್ಯಾಗ್, ಕುರ್ಚಿ, ಮನೆಯಲ್ಲಿಡುವ ಅಲಂಕಾರಿಕ ವಸ್ತುಗಳನ್ನು ತಯಾರಿಸ ಬಹುದು ಎಂದರು.
ಕೇಂದ್ರದಿಂದ ಸಾಲ ಸೌಲಭ್ಯ: ಬಿದಿರು ಮೆಳೆ ಬೆಳೆಯಲು, ಉತ್ಪನ್ನಗಳ ತಯಾರಿಕೆಗೆ ಕೇಂದ್ರ ಸರ್ಕಾರ ಸಹಾಯ ಧನದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಗ್ರಾಮೀಣ ಜನತೆ ಯೋಜನೆಯ ಸಹಾಯಧನವನ್ನು ಪಡೆದು ಅರಣ್ಯ ಇಲಾಖೆ ಉಚಿತವಾಗಿ ನೀಡುವ ಬಿದಿರು ಮೆಳೆ ಬೆಳಸಿ, ಆರ್ಥಿಕ ಅಭಿವೃದ್ಧಿಯಾಗಬೇಕು ಎಂದು ಹೇಳಿದರು. ಈ ವೇಳೆ ಬಿದಿರು ಸೊಸೈಟಿ ಅಧ್ಯಕ್ಷ ಸುಂದರ್ ನಾಯಕ್, ನರಸಿಂಹಯ್ಯ, ಶಾಂತಕುಮಾರ್, ಮರಿಮಲ್ಲಪ್ಪ ಮತ್ತು ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ