ರಮೇಶ, ಅಂಬಿರಾವ್ ಸೇರಿ ಗೋಕಾಕ ಲೂಟಿ: ಸತೀಶ
Team Udayavani, Sep 24, 2019, 3:03 AM IST
ಬೆಳಗಾವಿ: ನನ್ನ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುವ ಬದಲು ನನ್ನ ಹಗರಣಗಳ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಶಾಸಕ ಸತೀಶ ಜಾರಕಿಹೊಳಿ ತಮ್ಮ ಸಹೋದರ ರಮೇಶಗೆ ನೇರ ಸವಾಲು ಹಾಕಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ಮನೆತನಕ್ಕಿಂತ ಪಕ್ಷ ಮುಖ್ಯವಾಗಿದೆ. ರಮೇಶ ಜಾರಕಿಹೊಳಿ ಹಾಗೂ ಅವರ ಅಳಿಯ ಸೇರಿಕೊಂಡು ಗೋಕಾಕ ಲೂಟಿ ಮಾಡಿದ್ದಾರೆ.
ಇದಕ್ಕಿಂತ ದೊಡ್ಡ ಹಗರಣ ಬೇರೆ ಯಾವುದೂ ಇಲ್ಲ. ಏನೂ ಗೊತ್ತಿಲ್ಲದವರಂತೆ ನಟಿಸುವ ರಮೇಶ ಜಾರಕಿಹೊಳಿ ತಾವು ಯಾವ ವಸ್ತು ಕಳೆದುಕೊಂಡಿದ್ದೇನೆಂದು ಹೇಳಿದರೆ ಒಳ್ಳೆಯದು. ಇದರಿಂದ ನನ್ನ ಬಾಯಿ ಕೆಡಿಸಿಕೊಳ್ಳುವದು ತಪ್ಪುತ್ತದೆ. ಗೋಕಾಕದಲ್ಲಿ ನಾನು ಮಾಡುವ ಸಮಾವೇಶದಲ್ಲಿ ಬರೀ ವಸ್ತುವಿನ ಬಗ್ಗೆ ಹೇಳುವುದಲ್ಲ. ಬೇರೆ ಅಭಿವೃದ್ಧಿ ವಿಷಯಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ.
ಕಳೆದ 20 ವರ್ಷಗಳಲ್ಲಿ ಗೋಕಾಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತೇನೆ ಎಂದರು. ರಮೇಶ ಅವರ ಅಳಿಯ ಅಂಬಿರಾವ್ ಈಗ ನಿಯಂತ್ರಣಕ್ಕೆ ಸಿಗದ ವ್ಯಕ್ತಿಯಾಗಿದ್ದಾರೆ. ಅಂಬಿರಾವ್ ಈಗ ಅದಾನಿ ಮತ್ತು ಅಂಬಾನಿಯಾಗಿದ್ದಾರೆ. ರಮೇಶ ಒಂದು ರೀತಿ ಹಿಟ್ ಆ್ಯಂಡ್ ರನ್ ರಾಜಕಾರಣಿ. ಒಂದೊಂದು ಹೇಳಿಕೆಗೂ ತಾಳಮೇಳ ಇರುವುದಿಲ್ಲ. ಚುನಾವಣೆ ಮತ್ತು ಲಾಭಕ್ಕಾಗಿ ಏನೇನೋ ಹೇಳುತ್ತಾನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ