ಉಪಗ್ರಹ ಆಧಾರಿತ ತರಬೇತಿಗೆ ಅಧಿಕಾರಿಗಳು ಚಕ್ಕರ್‌


Team Udayavani, Sep 25, 2019, 3:00 AM IST

upagraha

ನೆಲಮಂಗಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಯೋಜನೆ ಹಾಗೂ ಜನಸ್ನೇಹಿ ಯೋಜನೆಗಳನ್ನು ರೂಪಿಸಲು ಕೇಂದ್ರ ಸರಕಾರದ ಸಬ್‌ ಕೀ ಯೋಜನಾ ಸಬ್‌ ಕೀ ವಿಕಾಸ್‌ ಎಂಬ ಉಪಗ್ರಹ ಆಧಾರಿತ ತರಬೇತಿ ಅಧಿಕಾರಿಗಳ ಬದಲು ಖಾಲಿ ಕುರ್ಚಿಗಳಿಗೆ ನೀಡಲಾಗಿದೆ.

ತಾಲೂಕಿನ 29 ಇಲಾಖೆ ಮುಖ್ಯಸ್ಥರು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಮಂತ್ರಾಲಯ ಮೈಸೂರಿನಿಂದ ನೇರವಾಗಿ ವೀಡಿಯೊ ಕಾನ್ಪರೆನ್ಸ್‌ ಮೂಲಕ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ತರಬೇತಿಯಲ್ಲಿ ಇಬ್ಬರು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದು, ಉಪಗ್ರಹ ಆಧಾರಿತ ತರಬೇತಿ ಖಾಲಿ ಕುರ್ಚಿಗಳಿಗೆ ಸೀಮಿತವಾಯಿತು.

ಅಧಿಕಾರಿಗಳ ಗೈರು: ಅಚ್ಚರಿ ಎಂಬಂತೆ ತರಬೇತಿಗೆ ಇಬ್ಬರು ಅಧಿಕಾರಿಗಳು ಪೂರ್ಣವಿದ್ದರೆ, 4 ಮಂದಿ ಅಧಿಕಾರಿಗಳು ಸಹಿ ಮಾಡಿ. ಅಧಿಕಾರಿಗಳಿಲ್ಲ ಎಂದು ವಾಪಸ್‌ ಹೋದರು. 25 ಇಲಾಖೆಯ ಮುಖ್ಯಸ್ಥರು ಹಾಗೂ ಅಧಿಕಾ‌ರಿಗಳು ತರಬೇತಿಗೆ ಗೈರಾಗಿದ್ದು, ಇದರಿಂದ ಖಾಲಿ ಕುರ್ಚಿಗಳು ಮಾತ್ರ ಪರದೆಯ ಮೂಲಕ ಉಪಗ್ರಹ ಆಧಾರಿತ ತರಬೇತಿಯನ್ನು ವೀಕ್ಷಣೆ ಮಾಡಿದಂತಿತ್ತು. ಲಕ್ಷಾಂತರ ಹಣ ಖರ್ಚುಮಾಡಿ ಅಧಿಕಾರಿಗಳಿಗೆ ತರಬೇತಿ ನೀಡುವ ಕೇಂದ್ರ ಸರಕಾರದ‌ ಪ್ರಯತ್ನಕ್ಕೆ ಅಧಿಕಾರಿಗಳು ಸ್ಪಂಧಿಸಲಿಲ್ಲ.

ಇಬ್ಬರ ಉಪಸ್ಥಿತಿ: ತರಬೇತಿಯಲ್ಲಿ ತಾಲೂಕಿನ ರೇಷ್ಮೆ ಇಲಾಖೆಯ ಶ್ರೀನಿವಾಸಮೂರ್ತಿ, ಪಶು ಸಂಗೋಪನೆ ಇಲಾಖೆಯ ಶಾರದಮ್ಮ ಪೂರ್ಣ ಭಾಗವಹಿಸಿದರೆ, ಮೀನುಗಾರಿಕೆ, ಬೆಸ್ಕಾಂ ಹಾಗೂ ಪುರಸಭೆ ಇಲಾಖೆಯ 4 ಸಿಬ್ಬಂದಿ ಸೇರಿ ಜನರು ಸಹಿ ಮಾಡಿ ಅರ್ಧಗಂಟೆ ಮಾತ್ರ ತರಬೇತಿಯಲ್ಲಿ ಭಾಗವಸಿದ್ದರು. 29 ಇಲಾಖೆಯ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಸಗಿಬೇಕಾದ ತರಬೇತಿಯಲ್ಲಿ ಕೇವಲ 6 ಮಂದಿ ಅಧಿಕಾರಿಗಳು ಭಾಗಹಿಸಿದ್ದು, ತರಬೇತಿಗೆ ಅರ್ಥವಿಲ್ಲದಂತಾಯಿತು.

ಕೇಳೋರಿಲ್ಲ: ತಾಪಂ ಇಒ ಅವರಿಂದ ಸಬ್‌ ಕೀ ಯೋಜನಾ ಸಬ್‌ ಕೀ ವಿಕಾಸ್‌ ಎಂಬ ಉಪಗ್ರಹ ಆಧಾರಿತ ತರಬೇತಿ ಬಗ್ಗೆ ಜ್ಞಾಪನ ಪತ್ರವನ್ನು ನೀಡಲಾಗಿದ್ದು, ಕಂದಾಯ, ವಲಯ ಅರಣ್ಯ, ಆರೋಗ್ಯ, ತಾಪಂ, ತೋಟಗಾರಿಕೆ, ಕೃಷಿ, ನೀರಾವರಿ, ಶಿಶು ಹಾಗೂ ಮಹಿಳಾ ಸಬಲೀಕರಣ, ಶಿಕ್ಷಣ ಸೇರಿದಂತೆ 24 ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ತರಬೇತಿಗೆ ಆಗಮಿಸದಿದ್ದರೂ ಯಾರು ಕೇಳೋರಿಲ್ಲದಂತಾಗಿದೆ.

ಸಿಇಓ ಸಭೆ ಕಾರಣವೇ?: ತಾಪಂಯಲ್ಲಿ ಜಿಪಂ ಸಿಇಒ ನಾಗರಾಜು ಅವರು, ಪಿಡಿಓ ಹಾಗೂ ನರೇಗಾ ಯೋಜನೆಯ 8 ಇಲಾಖೆಗಳ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಎಲ್ಲಾ ಪಂಚಾಯತಿ ಪಿಡಿಓ ಹಾಗೂ 8 ಇಲಾಖೆ ಮುಖ್ಯಸ್ಥರು ಹಾಜರಿದ್ದರು. ಆದರೆ ಕೆಲವು ಅಧಿಕಾರಿಗಳು ಸಿಇಓ ಸಭೆ ಎಂದು ಹೇಳಿ ತರಬೇತಿಗೆ ಗೈರಾಗಿದ್ದಾರೆ, ತರಬೇತಿಯಲ್ಲಿ ಭಾಗವಸಲು ಸಿಇಓ ಸಭೆ ಕಾರಣವಲ್ಲ ಎಂದು ಸಿಇಓ ತಿಳಿಸಿದ್ದಾರೆ.

ಇಂದಾದರೂ ಬನ್ನಿ : ಪಿಡಿಒ ಹಾಗೂ ಅಧಿಕಾರಿಗಳಿಗೆ ಸೆ.25 ರಿಂದ ಸೆ.27ರವರಗೆ ಉಪಗ್ರಹ ಆಧಾರಿತ ತರಬೇತಿ ನಡೆಯಲಿದ್ದು ಈಗಲಾದರೂ, ತರಬೇತಿ ಪಡೆದು ಸಾರ್ವಜನಿಕರ ಯೋಜನೆಗಳು ಕ್ರಮಬದ್ದವಾಗಿ ತಲುಪಲಿ ಎಂಬುದು ಸಾರ್ವಜನಿಕರ ಆಶಯ. ಸಾರ್ವಜನಿಕರ ಅನಕೂಲಕ್ಕಾಗಿ ಅಧಿಕಾರಿಗಳಿಗೆ ತರಬೇತಿ ಉಪಗ್ರಹ ಆಧಾರಿತ ತರಬೇತಿ ನೀಡಲು ಸರ್ಕಾರ ಮುಂದಾದರೆ, ಮೇಲಾಧಿಕಾರಿಗಳು ಯಾರು ನೋಡುವುದಿಲ್ಲ, ಕೇಳುವುದಿಲ್ಲ ಎಂದು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್ರಿಯಿಸಿ ಉಪಗ್ರಹ ಆಧಾರಿತ ತರಬೇತಿಯ ಬಗ್ಗೆ ನನಗೆ ಮಾತಿಯಿಲ್ಲ. ಇದ್ದಿದ್ದರೆ, ಸಭೆ ಮುಂದೂಡಬಹುದಿತ್ತು. ಅಧಿಕಾರಿಗಳು ತರಬೇತಿಗೆ ಬರದಿರಲು ನಮ್ಮ ಸಭೆ ಕಾರಣವಲ್ಲ. ತರಬೇತಿಯ ಸ್ಥಳ ಪರಿಶೀಲಿಸಿ ಗೈರಾದವರಿಗೆ ನೋಟಿಸ್‌ ನೀಡುವಂತೆ ತಿಳಿಸಿದ್ದೇನೆ.
-ನಾಗರಾಜು, ಜಿಪಂ ಸಿಇಒ

* ಕೊಟ್ರೇಶ್‌. ಆರ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.