ಮಕ್ಕಳ ಮೇಲೆ ಬೀಳುತ್ತಿತ್ತು ಕಲ್ಲು; ಇದು ಭಾನಾಮತಿ ಕಾಟವಲ್ಲ, ವಿದ್ಯಾರ್ಥಿನಿ ಕೈಚಳಕ!
Team Udayavani, Sep 26, 2019, 3:09 PM IST
ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜನವಾರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಕಲ್ಲು ಬೀಳುವ ಪ್ರಕರಣ ಭಾನಾಮತಿ ಕಾಟದಿಂದ ನಡೆದಿದ್ದಲ್ಲ ಬದಲಾಗಿ ಆ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಕೈಚಳದಿಂದ ನಡೆದಿರುವುದು ಎಂದು ಈಗ ಬಯಲಾಗಿದೆ.
ಇಂಜನವಾರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿ ಹೊಂದಿದ್ದು, ಐದು ಶಾಲಾ ಕೊಠಡಿಗಳಿವೆ. ಇಲ್ಲಿ ಒಟ್ಟು 24 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಓರ್ವ ಮುಖ್ಯೋಪದ್ಯಾಯಕ ಸೇರಿ ಇಬ್ಬರು ಶಿಕ್ಷಕರಿದ್ದಾರೆ.
ಕಳೆದ ಒಂದು ತಿಂಗಳಿಂದ ಇಲ್ಲಿನ ಎರಡು ಕೊಠಡಿಗಳ, ನಾಲ್ಕೈದು ವಿದ್ಯಾರ್ಥಿಗಳ ಮೇಲೆ ಕಲ್ಲು ಬೀಳುತ್ತಿದ್ದವು. ಈ ಕುರಿತು ಸ್ವತಃ ಗುಳೇದಗುಡ್ಡ ಪಿಎಸ್ಐ, ಡಿಡಿಪಿಐ ಸಹಿತ ಹಲವು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಡಿಡಿಪಿಐ ಮತ್ತು ಪಿಎಸ್ಐ ಹೋದಾಗಲೂ ಕಲ್ಲು ಬಿದ್ದಿದ್ದವು. ಹೀಗಾಗಿ ಇದೊಂದು ಭಾನಾಮತಿ ಕಾಟ ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಈ ಪ್ರಕರಣ ಡಿಸಿ ಮತ್ತು ಎಸ್ಪಿ ಗಮನಕ್ಕೆ ಬಂದ ಬಳಿಕ, ಗಂಭೀರತೆ ಪಡೆದಿತ್ತು. ಇಂದಿನ ವೈಜ್ಞಾನಿಕ ಯುಗದಲ್ಲಿ ಭಾನಾಮತಿ ಕಾಟವಿದೆ ಎಂದರೆ ಒಪ್ಪಿಕೊಳ್ಳಲಲು ಸಾಧ್ಯವಿಲ್ಲ. ಯಾರೋ ಕಿಡಿಗೇಡಿಗಳ ಕೃತ್ಯ ಇರಬಹುದು. ಇದನ್ನು ಪತ್ತೆಮಾಡಿ ಎಂದು ಸೂಚನೆ ನೀಡಲಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ, ಶಾಲೆಯ ಐದು ಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ, ಕಲ್ಲು ಬೀಳುವ ಘಟನೆ ನಿಂತಿತ್ತು. ಆದರೆ, ಇದನ್ನು ಯಾರು ಮಾಡುತ್ತಾರೆ ಎಂಬುದನ್ನು ಪತ್ತೆ ಮಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿತ್ತು.
ಕಳೆದ ಒಂದು ವಾರದಿಂದ ಶಾಲೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ನಿರಂತರ ಪರಿಶೀಲನೆ ಜತೆಗೆ ನಿಗಾ ವಹಿಸಿದ್ದು, ಶಾಲೆಯ ಓರ್ವ ಬಾಲಕಿಯೇ ಈ ರೀತಿ ಕಲ್ಲು ಎಸೆಯುತ್ತಿದ್ದದ್ದು ಖಚಿತಪಟ್ಟಿದೆ. ಆ ಬಾಲಕಿಯನ್ನು ವಿಚಾರಿಸಲಾಗಿದ್ದು, ಅವಳೂ ಒಪ್ಪಿಕೊಂಡಿದ್ದಾಳೆ. ಆದರೆ, ಆ ಬಾಲಕಿಯ ಭವಿಷ್ಯದ ಹಿತೃದೃಷ್ಟಿಯಿಂದ ಅವಳ ಹೆಸರು, ಗುರುತು ಪತ್ತೆಯಾಗದಂತೆ ಬಹಿರಂಗಪಡಿಸದೇ, ಎಚ್ಚರಿಕೆ ನೀಡಿ ಬಿಡಲಾಗಿದೆ.
ಇಂಜನವಾರಿ ಶಾಲೆಯ ಮಕ್ಕಳ ಮೇಲೆ ಕಲ್ಲು ಬೀಳುವ ಪ್ರಕರಣ ಪತ್ತೆಯಾಗಿದ್ದು, ಯಾವುದೇ ಭಾನಾಮತಿ ಕಾಟದಿಂದ ಅದು ನಡೆದಿದ್ದಲ್ಲ. ಆ ಶಾಲೆಯ ಓರ್ವ ವಿದ್ಯಾರ್ಥಿನಿಯೇ ನಿತ್ಯ ಶಾಲೆಗೆ ಕಲ್ಲು ತೆಗೆದುಕೊಂಡು ಬಂದು, ಇತರ ವಿದ್ಯಾರ್ಥಿಗಳ ಮೇಲೆ ಎಸೆಯುತ್ತಿದ್ದಳು. ಇದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಆದರೆ ಆ ಬಾಲಕಿ ಯಾಕೆ ಕಲ್ಲು ಎಸೆಯುತ್ತಿದ್ದಳು ಎಂಬುದು ತಿಳಿದು ಬಂದಿಲ್ಲ. ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು
Pen Drive Case ಪ್ರಜ್ವಲ್ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
MUST WATCH
ಹೊಸ ಸೇರ್ಪಡೆ
The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್ʼ ಸೀಸನ್ – 3 ಶೂಟ್ ಅರಂಭ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ