ನೆರೆ ಸಂತ್ರಸ್ತ ವ್ಯಾಪಾರಿಗಳಿಗೆ ಸಹಾಯಧನ
Team Udayavani, Sep 30, 2019, 11:46 AM IST
ಮಹಾಲಿಂಗಪುರ: ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮತ್ತು ಮುಧೋಳ ತಾಲೂಕಾ ಹಾಗೂ ಮಹಾಲಿಂಗಪುರ ಔಷಧ ವ್ಯಾಪಾರಿಗಳ ಸಹಯೋಗದಲ್ಲಿ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ರವಿವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಸಂಗಪ್ಪ ಗೌರೋಜಿ ಸಮ್ಮುಖದಲ್ಲಿ ನೆರೆಸಂತ್ರಸ್ತ ಢವಳೇಶ್ವರ, ಮಿರ್ಜಿ ಮತ್ತು ಮುಧೋಳ ಸೇರಿದಂತೆ ಎಂಟು ಜನ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ತಲಾ 7 ಸಾವಿರದಂತೆ 56 ಸಾವಿರ ರೂಗಳ ಸಹಾಯಧನ ಚೆಕ್ ವಿತರಿಸಲಾಯಿತು.
ಔಷಧ ವ್ಯಾಪಾರಿಗಳ ಸಂಘದ ಮುಧೋಳ ತಾಲೂಕಾ ಅಧ್ಯಕ್ಷ ರಾಜು ನಾಯಿಕ, ಮಹಾಲಿಂಗಪುರ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ಲೋಕಾಪುರ ಅಧ್ಯಕ್ಷ ವೆಂಕಣ್ಣ ಕಮಕೇರಿ, ಮಹಾಲಿಂಗಪುರ ಸಂಘದ ಗೌರವಾಧ್ಯಕ್ಷ ಶ್ರೀಪಾದ ಗುಂಡಾ, ಕಾರ್ಯದರ್ಶಿ ಆನಂದ ಬೆಳ್ಳಿಕಟ್ಟಿ, ಖಜಾಂಚಿ ರವಿ ಗೊಬ್ಟಾಣಿ, ಔಷಧ ವ್ಯಾಪಾರಸ್ಥರಾದ ಈರಪ್ಪ ಹುಂಡೇಕಾರ, ಬಸವರಾಜ ಕೊಣ್ಣೂರಮಠ, ರವಿ ಖೋತ, ಮನೋಹರ ಜಮಖಂಡಿ, ಸಂತೋಷ ಮುಳ್ಳೂರ, ರಮೇಶ ಯಡ್ರಾವಿ, ಸಂಗಯ್ನಾ ಪೂಜಾರಿ, ಶ್ರೀಶೈಲ ಜಕಾತಿಮಠ, ನಾಗು ಬೆಂಗಳೂರು, ಮಹಾಂತೇಶ ಮಠದ, ಶಿವಪುತ್ರ ಮುಗಳಖೋಡ ಇದ್ದರು.