ತಾಲೂಕು ಕೇಂದ್ರದ ಪಕ್ಕದಲ್ಲಿದ್ರೂ ಸಮರ್ಪಕ ರಸ್ತೆ ಇಲ್ಲ

ಕೆಸರುಗದ್ದೆಯಾದ್ರೂ ಕಾಡದೇನಹಳ್ಳಿ ರಸ್ತೆ ದುರಸ್ತಿಪಡಿಸಿಲ್ಲ

Team Udayavani, Sep 30, 2019, 3:56 PM IST

kolar-tdy-3

ಮಾಲೂರು: ದೀಪದ ಕೆಳಗೆ ಕತ್ತಲೆಯಂತಾದ ಕಾಡದೇನಹಳ್ಳಿ ಗ್ರಾಮಸ್ಥರ ಪಾಡು, ತಾಲೂಕು ಕೇಂದ್ರದಿಂದ ಕೂಗಳತೆ ದೂರಲ್ಲಿರುವ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದೇ, ಪರಿತಪಿಸುತ್ತಿರುವ ನಾಗರಿಕರು, ಪ್ರತಿನಿತ್ಯ ಇಲ್ಲಿನ ಜನರು ಅನುಭವಿಸುತ್ತಿರುವುದು ನರಕಯಾತನೆ ಕೇಳ್ಳೋರೇ ಇಲ್ಲದಂತಾಗಿದೆ? ಪಟ್ಟಣಕ್ಕೆ ಕೇವಲ ಮೂರು ಕಿ.ಮೀ. ಇರುವ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದೆ, ವಾಹನ ಸವಾರರು ನರಕಯಾತನೇ ಅನುಭವಿಸುತ್ತಿದ್ದಾರೆ.

ತಾಲೂಕಿನ ಇತರೆ ಗ್ರಾಮಗಳಂತೆ ಕಾಡದೇನಹಳ್ಳಿಯೂ ಹಣ್ಣು, ತರಕಾರಿ ಸೊಪ್ಪು ಬೆಳೆಯುವುದರಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆದರೂ ಇಲ್ಲಿನ ಜನರಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲ.

ಬಸ್ಸೌಕರ್ಯವಿಲ್ಲ: ಗ್ರಾಮದ ಜನತೆಗೆ 100 ರೂ. ಅಗತ್ಯವಾಗಿರುವ ವಸ್ತುಗಳು ಬೇಕಿದ್ದರೂ ಮಾಲೂರು ಪಟ್ಟಣಕ್ಕೆ ಬಾರದೆ, ವಿಧಿ ಇಲ್ಲದ ಪರಿಸ್ಥಿತಿ ಇದೆ. ಇಲ್ಲಿನ ಜನರು ಮನೆಗೊಂದು ಸೈಕಲ್‌, ಇಲ್ಲವೇ ದ್ವಿಚಕ್ರ ವಾಹನ ಹೊಂದುವುದು ಕಡ್ಡಾಯವಾಗಿದೆ. ಈ ಗ್ರಾಮವು ಸೇರಿದಂತೆ ಸುತ್ತಮುತ್ತಲಿನ ನಲ್ಲಪ್ಪನಹಳ್ಳಿ, ಬೊಪ್ಪನಹಳ್ಳಿ ಚಿಕ್ಕಾಪುರ, ಹುರಳಗೆರೆ, ಮಾದನಹಟ್ಟಿ ಗ್ರಾಮಗಳು ಇದೇ ರಸ್ತೆಯಲ್ಲಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವಿಲ್ಲ.

ಈ ಮಾರ್ಗದಲ್ಲಿ ರಸ್ತೆ ಸಾರಿಗೆ ಬಸ್‌ ಇರಲಿ, ಆಟೋ, ಆ್ಯಂಬುಲೆನ್ಸ್‌ ಸಹ ಬರುವುದಿಲ್ಲ. ಕಾರಣ ಇಲ್ಲಿನ ಸಂಪರ್ಕ ರಸ್ತೆ ಆ ಮಟ್ಟಕ್ಕೆ ಹದಗೆಟ್ಟಿದೆ. ಇಂತಹ ಸೋಚನಿಯ ಪರಿಸ್ಥಿತಿಯನ್ನು ಕಂಡ ಪ್ರತಿಯೊಬ್ಬರಿಗೂ ಈ ರಸ್ತೆಯಲ್ಲಿನ ಗ್ರಾಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರು ಉಳಿದಿವೆಯೇ ಎನ್ನುವ ಭಾವನೆ ಬಾರದಿರದು. ಹೀಗಾಗಿ ಇಲ್ಲಿನ ಜನರ ಬದುಕು ದೀಪದ ಕೆಳಗಿನ ಕತ್ತಲೆಯಂತಾಗಿದೆ.

ಸ್ವಂತ ವಾಹನ ಹೊಂದುವುದು ಕಡ್ಡಾಯ: 20 ವರ್ಷಗಳ ಹಿಂದೆ ಡಾಂಬರು ಕಂಡಿದ್ದ ಈ ರಸ್ತೆ ಇದುವರೆಗೂ ಒಂದು ಜಲ್ಲಿ ಕಂಡಿಲ್ಲ. ಮಳೆ ಬಂದ್ರೆ ಕೆಸರುಗದ್ದೆ, ಬೇಸಿಗೆ ಬಂದ್ರೆ ದೂಳು ಸೇವಿಸುವ ಪರಿಸ್ಥಿತಿ, ಈ ರಸ್ತೆಯಲ್ಲಿ ಸಂಚರಿಸುವ ಜನರದ್ದು. ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು, ಪ್ರೌಢಶಿಕ್ಷಣ, ಪಿಯುಸಿ, ಪದವಿ ಶಿಕ್ಷಣಕ್ಕಾಗಿ ಮಾಲೂರು ಪಟ್ಟಣಕ್ಕೆ ಬರಬೇಕಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಸೈಕಲ್‌ಗ‌ಳೇ ಆಧಾರವಾಗಿವೆ. ಗ್ರಾಮಸ್ಥರು ಕೂಡ ಸೈಕಲ್‌ ಇಲ್ಲವೆ, ದ್ವಿಚಕ್ರ ವಾಹನ ಹೊಂದುವುದು ಕಡ್ಡಾಯವಾಗಿದೆ.

ರಸ್ತೆ ಅಗೆದು ಹಾಗೆ ಬಿಟ್ರಾ: ಮಾಲೂರು ಪಟ್ಟಣದ ಒಳಚರಂಡಿ ನೀರನ್ನು ಸಂಸ್ಕರಿಸುವ ಉದ್ದೇಶದಿಂದ ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯು ಪಟ್ಟಣದ ದೊಡ್ಡಕೆರೆಯ ಕಟ್ಟೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಅದಕ್ಕೆ ಪೈಪ್‌ಲೈನ್‌ ಅಳವಡಿಸಲು ಪಟ್ಟಣದಿಂದ ಘಟಕದವರೆಗೆ ರಸ್ತೆಯಲ್ಲಿ ಕಾಲುವೆ ತೋಡಿತ್ತು. ಕಾಮಗಾರಿ ಪೂರ್ಣಗೊಳಿಸಿದ ನಂತರ ಅರೆಬರೆಯಾಗಿ ಕಾಲುವೆ ಮುಚ್ಚಿದ್ದರಿಂದ ಮೊಣಕಾಲುದ್ದದ ಗುಂಡಿಗಳು ಬಿದ್ದು ವಾಹನ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ರಸ್ತೆ ಹದಗೆಟ್ಟು ಎರಡು ಮೂರು ವರ್ಷ ಕಳೆದರೂ ಇದುವರೆಗೂ ರಸ್ತೆ ಸರಿಪಡಿಸಿಲ್ಲ. ಮೊದಲೇ ದುರ್ಗಮವಾಗಿದ್ದ ಈ ರಸ್ತೆಯು ಒಳಚರಂಡಿ ಮಂಡಳಿಯ ಕಾಮಗಾರಿಯಿಂದ ಮತ್ತಷ್ಟು ಹಾಳಾಗಿದೆ. ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಕೆಸರು ಮಯವಾಗಿದೆ.

ಮಾಲೂರು ಪಟ್ಟಣಕ್ಕೆ ಒಂದಲ್ಲ ಒಂದು ಕಾರಣಕ್ಕೆ ಬರಲೇಬೇಕಾಗಿರುವ ಈ ಭಾಗದ ಜನರು, ದೊಡ್ಡ ಕೆರೆಯ ಕಟ್ಟೆಯ ಮೇಲೆ ಸಂಚರಿಸಲು ಹೋಗಿ ಕೆಸರಿನಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಇನ್ನಾದರೂ ಶಾಸಕ ನಂಜೇಗೌಡ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಈಭಾಗದ ಜಿಪಂ ಸಿಇಒ, ಪುರಸಭೆ ಮುಖ್ಯಾಧಿಕಾರಿಗಳು, ಒಳಚರಂಡಿ ಮಂಡಳಿ ಅಧಿಕಾರಿಗಳು ಕಾಡದೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂಪರ್ಕ ರಸ್ತೆಗೆ ಮುಕ್ತಿ ನೀಡಬೇಕಿದೆ.

ಕಾಡದೇನಹಳ್ಳಿ ರಸ್ತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರಲಿದೆ. ಜಿಪಂ ಅನುದಾನದಲ್ಲಿ ದುರಸ್ತಿ ಪಡಿಸಬೇಕಾಗಿದೆ, ಒಳಚರಂಡಿ ಮಂಡಳಿ ಪೈಪ್‌ಲೈನ್‌ ಹಾಕಲು ರಸ್ತೆ ಅಗೆದಿದ್ದ ಕಾರಣ ಗುಂಡಿಗಳು ಬಿದ್ದಿವೆ. ಒಳಚರಂಡಿ ನೀರು ಸಂಗ್ರಹ ಘಟಕದವರೆಗೂ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಹೊಣೆ ಒಳಚರಂಡಿ ಮಂಡಳಿಯ ವ್ಯಾಪ್ತಿಗೆ ಬರಲಿದೆ.● ಎಂ.ರಾಜು, ಸಹಾಯಕ ಎಂಜಿನೀಯರ್‌, ಲೋಕೋಪಯೋಗಿ ಇಲಾಖೆ

 

-ಎಂ.ರವಿಕುಮಾರ್

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.