ಸೇತುವೆಯಿಂದ ಉರುಳಿ ಬಿದ್ದ ಟೆಂಪೋ : ಚಾಲಕ ಸಾವು
Team Udayavani, Oct 1, 2019, 9:42 AM IST
ಚಿತ್ರದುರ್ಗ: ಸರಕು ಸಾಗಣೆ ಮಾಡುವ ಟೆಂಪೋ ಒಂದು ಆಯತಪ್ಪಿ ವೇದಾವತಿ ನದಿಗೆ ಬಿದ್ದಿರುವ ಘಟನೆ ಕೆಲ್ಲೋಡು ಸೇತುವೆ ಬಳಿ ನಡೆದಿದೆ.
ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ಮೈಸೂರು ಮಹಾರಾಜರ ಅವಧಿಯಲ್ಲಿ ನಿರ್ಮಿಸಿರುವ ಸೇತುವೆಗೆ ಡಿಕ್ಕಿಯಾಗಿ ಟೆಂಪೋ ನದಿಗೆ ಬಿದ್ದಿದೆ.
ಬೆಳಗಿನ ಜಾವ ಘಟನೆ ನಡೆದಿದ್ದು, ಚಾಲಕನ ಶವ ಪತ್ತೆಯಾಗಿದೆ. ಟೆಂಪೊದಲ್ಲಿ ಏನಿದೆ, ಇನ್ನೂ ಯಾರಾದರೂ ಇದ್ದಾರಾ ಎನ್ನುವ ಮಾಹಿತಿ ಮೇಲೆ ತಂದ ನಂತರ ಗೊತ್ತಾಗಬೇಕಿದೆ.
ಕಳೆದೊಂದು ವಾರದಿಂದ ಮಳೆಯಾಗಿ ಜತೆಗೆ ಭದ್ರಾ ಕಾಲುವೆ ನೀರು ಬಂದು ಹರಿಯುತ್ತಿರುವುದರಿಂದ ಟೆಂಪೋ ಮುಳುಗಿದ್ದು ಮೇಲ್ಭಾಗ ಮಾತ್ರ ಕಾಣಿಸುತ್ತಿದೆ. ಕೆಲ್ಲೋಡು ಸೇತುವೆ ಬಳಿ ಸಾಕಷ್ಟು ಜನ ಜಮಾಯಿಸಿದ್ದಾರೆ.
ಸ್ಥಳಕ್ಕೆ ಹೊಸದುರ್ಗ ಸಿಪಿಐ ರುದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ