ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮಣ್ಣಿನ ಮೇಲೆ ಕೇರಂ ಆಟ
Team Udayavani, Oct 13, 2019, 7:00 PM IST
ವೀಡಿಯೋ ಗೇಮ್, ಪಬ್-ಜೀ ಎಂಬ ಆಧುನಿಕ ತಂತ್ರಜ್ಞಾನದ ಆಟಗಳ ಮೊರೆ ಹೋಗುತ್ತಿರುವ ಮಕ್ಕಳ ಮಧ್ಯೆ ಇಂದು ಹಳ್ಳಿ ಮಕ್ಕಳ ಗುಂಪು ಒಂದು ತಮ್ಮ ಕ್ರಿಯಾಶೀಲತೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.
ಮಣ್ಣಿನ ಮೇಲೆ ಕೇರಂ ಚೌಕವನ್ನು ಬರೆದುಕೊಂಡಿರುವ ಮಕ್ಕಳ ತಂಡ, ನಾಲ್ಕು ಮೂಲೆಗಳಲ್ಲಿ ಕುಳಿ ತೋಡಿಕೊಂಡು, ಬಾಟಲಿ ಮುಚ್ಚಳಗಳನ್ನೇ ಪಾನ್ ಹಾಗೂ ಸ್ಟ್ರೈಕರ್ಗಳನ್ನಾಗಿ ಬಳಸಿಕೊಂಡಿ¨ªಾರೆ.
ಇನ್ನೂ ಸದಾ ಟ್ವಿಟರ್ ಖಾತೆ ಮೂಲಕ ಏನಾದರೊಂದು ಕ್ರಿಯಾತ್ಮಕ ಸಂದೇಶ ರವಾನೆ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಇಂದು ಬೆಳಿಗ್ಗೆ ಈ ಚಿತ್ರವನ್ನು ಶೇರ್ ಮಾಡಿದ್ದು, ಜೀವನಕ್ಕೆ ಸ್ಪೂರ್ತಿ ತುಂಬ ಬಲ್ಲ ಚಿತ್ರ ಎಂದು ಬರೆದುಕೊಂಡಿದ್ದಾರೆ.
ಭಾರತಕ್ಕೆ ಕಲ್ಪನೆಯ ವಿಚಾರದಲ್ಲಿ ಎಂದಿಗೂ ಬಡತನವಿಲ್ಲ, ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ ಎಂದು ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿ ಕೊಂಡಿದ್ದು, ಮಹೀಂದ್ರಾರ ಈ ಟ್ವೀಟ್ ಪೋಸ್ಟ್ ಆದ ಕೆಲವೇ ಗಂಟೆಗಳ ಒಳಗೆ 8,000 ಲೈಕ್ಗಳು ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್