ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿಲ್ಲ ಶವ ಶೈತ್ಯಾಗಾರ ವ್ಯವಸ್ಥೆ
ಅನಾಥ ಮೃತದೇಹಗಳ ವಿಲೇವಾರಿಗೆ ಸಮಸ್ಯೆ ;ದುಬಾರಿ ಸಾಗಾಟ ವೆಚ್ಚ-ಬಡವರಿಗೆ ಸಂಕಷ್ಟ
Team Udayavani, Oct 14, 2019, 5:31 AM IST
ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶವ ಶೈತ್ಯಾಗಾರ ಇಲ್ಲದೆ ಅನಾಥ ಮೃತದೇಹಗಳ ವಿಲೇವಾರಿ ಪೊಲೀಸರಿಗೆ ಸಮಸ್ಯೆಯಾಗಿದ್ದು, ಮೃತ ದೇಹದ ಸಂರಕ್ಷಣೆ ಸವಾಲಾಗಿದೆ.
ಬಂಟ್ವಾಳ ತಾ| ವ್ಯಾಪ್ತಿಯ ಬಹು ಭಾಗ ನೇತ್ರಾವತಿ ನದಿ ತಟದಲ್ಲಿ ಹರಡಿ ಕೊಂಡಿರುವುದರಿಂದ ಆಗಾಗ ನದಿ ಯಲ್ಲಿ ಅಪರಿಚಿತ ಮೃತದೇಹ ಪತ್ತೆ ಯಾಗುತ್ತಿರುತ್ತವೆ. ಇಂತಹ ಸಂದರ್ಭ ದೂರದ ಊರಿನಿಂದ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಶವವನ್ನು ಕೊಳೆಯದಂತೆ ಇಡಲು ಸರಕಾರಿ ಆಸ್ಪತ್ರೆ ಯಲ್ಲಿ ಶೈತ್ಯಾಗಾರದ ಅಗತ್ಯವಿದೆ.
ಇದರ ಜತೆಗೆ ಸಾರ್ವಜನಿಕ ಸ್ಥಳ, ಗುಡ್ಡಗಾಡು, ನಿರ್ಜನ ಪ್ರದೇಶಗಳಲ್ಲೂ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರು ತ್ತವೆ. ಹೀಗೆ ಸಿಗುವ ಅಪರಿಚಿತ ಮೃತದೇಹ ಗಳನ್ನು ವಿಲೇವಾರಿ ಮಾಡಬೇಕಾದರೆ ಅದರ ಗುರುತು ಪತ್ತೆಹಚ್ಚಿ, ಯಾವುದೋ ಊರಿನಲ್ಲಿರುವ ಮನೆಯವರನ್ನು ಹುಡುಕಿ ವಿಷಯ ತಿಳಿಸಿ, ಅವರು ಬಂದು ಮೃತದೇಹ ಕೊಂಡೊ ಯ್ಯುವಷ್ಟರಲ್ಲಿ ಅದು ಕೊಳೆತು ಹೋಗಿ ರುತ್ತದೆ. ಅದನ್ನು ಕೊಳೆಯದಂತೆ ಇಡಲು ಶೈತ್ಯಾಗಾರ ಇಲ್ಲದಿರುವುದರಿಂದ ಸಂರಕ್ಷಣೆ ಪೊಲೀಸ ರಿಗೆ ಇನ್ನೊಂದು ಕೆಲಸವಾಗಿದೆ.
ದುಬಾರಿ ಶುಲ್ಕ-ಸಾಗಾಟ ವೆಚ್ಚ
ಪ್ರಸ್ತುತ ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ಸಿಗುವ ಅಪರಿಚಿತ ಮೃತದೇಹಗಳನ್ನು ಮಂಗಳೂರಿಗೆ ಕೊಂಡೊಯ್ಯಬೇಕು. ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ವ್ಯಾಪ್ತಿ ಯಿಂದ ಸಾಕಷ್ಟು ಅಪರಿ ಚಿತ ಮೃತದೇಹಗಳು ಬರು ವುದರಿಂದ ಸ್ಥಳಾವಕಾಶ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸ ಬೇಕಾದ ಅನಿವಾರ್ಯ ಇದೆ. ಅಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಗಾಟ ವೆಚ್ಚ ಭರಿಸಬೇಕಾಗಿರುವುದರಿಂದ ಬಡವರಿಗೆ ತುಂಬ ಕಷ್ಟವಾಗುತ್ತಿದೆ. ಕೆಲವೊಮ್ಮೆ ಪೊಲೀಸರೇ ಈ ವೆಚ್ಚ ಭರಿಸಬೇಕಾಗುತ್ತದೆ.
ಸಂಚಾರಿ ಶವ ಶೈತ್ಯಾಗಾರ
ಕೆಲವು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಪ್ರಾಯೋಜಕತ್ವ ದಲ್ಲಿ ಸಂಚಾರಿ ಶವ ಶೈತ್ಯಾಗಾರಗಳು (ಆ್ಯಂಬುಲೆನ್ಸ್) ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅಪರಿಚಿತ ಮೃತದೇಹ ಮಾತ್ರ ವಲ್ಲದೆ ವಿದೇಶ, ದೂರದ ಊರುಗಳಿಂದ ಬಂಧುಗಳು ಬರುವವರೆಗೆ ಸಂರಕ್ಷಿಸಿಡಲು ಅನುಕೂಲವಾಗುತ್ತದೆ. ಬಡವರಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಲಭ್ಯವಿ ರುವು ದರಿಂದ ದುಬಾರಿ ಹಣ ಪಾವತಿ ಸುವ ಆವಶ್ಯಕತೆ ಇರುವುದಿಲ್ಲ. ಅಂತಹ ಸಂಚಾರಿ ಶೈತ್ಯಾಗಾರವನ್ನು ತಮ್ಮ ಮನೆ ಗಳಿಗೇ ತರಿಸಬಹುದಾಗಿದೆ.
ಆರೋಗ್ಯ ಕೇಂದ್ರಗಳಲ್ಲಿ ಸಿಬಂದಿ ಕೊರತೆ
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತರುವುದರಿಂದ ವೈದ್ಯರಿಗೆ ಹೊರೆಯಾಗುತ್ತದೆ. ಅದರ ಬದಲು ಪುಂಜಾಲಕಟ್ಟೆ ಅಥವಾ ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿದರೆ ಉತ್ತಮ ಎಂದು ತಾಲೂಕು ಆಸ್ಪತ್ರೆಯು ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಆದರೆ, ಅಲ್ಲಿ ಸಿಬಂದಿ ಕೊರತೆಯಿಂದ ತಾಲೂಕು ಆಸ್ಪತ್ರೆಗೇ ತರಲಾಗುತ್ತಿದೆ.
ಇಲಾಖೆಗೆ ಮನವಿ
ತಾ| ವ್ಯಾಪ್ತಿಯಲ್ಲಿ ಶವ ಶೈತ್ಯಾಗಾರ ಇಲ್ಲದಿರುವುದರಿಂದ ಅಪರಿಚಿತ ಮೃತದೇಹಗಳನ್ನು ಇಡಲು ಮಂಗಳೂರಿನ ವೆನಾÉಕ್ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗು ತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 800 ರೂ. ಶುಲ್ಕ ಹಾಗೂ 3 ಸಾವಿರ ರೂ. ಸಾಗಾಟ ವೆಚ್ಚ ನೀಡಬೇಕಾಗಿರುವು ದರಿಂದ ಬಡವರಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
- ಎಸ್. ಪ್ರಸನ್ನ ಕುಮಾರ್
ಎಸ್.ಐ.,ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ
ಒದಗಿಸುವ ಭರವಸೆ
ಎಂಆರ್ಪಿಎಲ್ ಸಂಸ್ಥೆಯ ಸಿಎಸ್ಆರ್ ಫಂಡ್ನಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ
ಶವ ಶೈತ್ಯಾಗಾರ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಶಾಸಕರಿಗೂ ತಿಳಿಸಲಾಗಿದೆ. ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಶವ ಶೈತ್ಯಾಗಾರ ಒದಗಿಸುವ ಭರವಸೆ ನೀಡಿದ್ದಾರೆ. ಶೀಘ್ರ ನೀಡುವುದಾಗಿ ಎಂಆರ್ಪಿಎಲ್ ತಿಳಿಸಿದೆ.
-ಡಾ| ದೀಪಾ ಪ್ರಭು
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ
- ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ