ವೃಕ್ಷ ಲಕ್ಷ ಆಂದೋಲನದ ಹೋರಾಟಕ್ಕೆ ಸಿಕ್ತು ಫಲ

ಬೊಮ್ಮತ್ತಿ- ನಾಡಕಲಸಿ ಅರಣ್ಯ ದೇವರ ಕಾಡು ಎಂದು ಘೋಷಣೆ ಆಂದೋಲನ ಕಾರ್ಯಕರ್ತರ ಸಂತಸ

Team Udayavani, Oct 16, 2019, 1:08 PM IST

16-October-12

ಶಿವಮೊಗ್ಗ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ವ್ಯಾಪ್ತಿಯ 326 ಎಕರೆ ಪ್ರದೇಶವನ್ನು ಸಾಗರ ಅರಣ್ಯ ಇಲಾಖೆ ದೇವರ ಕಾಡು ಎಂದು ಘೋಷಣೆ ಮಾಡಿದೆ.

ಅಲ್ಲಿ ಟ್ರೆಂಚ್‌ ನಿರ್ಮಾಣ, ರಕ್ಷಣಾ ಕವಚ ತೊಡಿಸಲಾಗಿದೆ. ಇದರಿಂದ ಸುತ್ತಲಿನ 5 ಹಳ್ಳಿಗಳ 6 ಕೆರೆಗಳು ಜಲ ಸಮೃದ್ಧಿ ಕಾಣಲಿವೆ. ಅರೆಮಲೆನಾಡು ತ್ಯಾಗರ್ತಿಗೆ ಹೊಂದಿಕೊಂಡಿರುವ ಬೊಮ್ಮತ್ತಿ ಮಲೆನಾಡಾಗೇ ಉಳಿಯಲಿದೆ ಎಂದು ವೃಕ್ಷಲಕ್ಷ ಆಂದೋಲನ ಹರ್ಷ ವ್ಯಕ್ತಪಡಿಸಿದೆ.

ಕಳೆದ ಲೋಕಸಭಾ ಚುನಾವಣೆಯ ಭರಾಟೆಯ ಮಧ್ಯೆ ಸಾಗರ-ಹೊಸನಗರ- ಸೊರಬ ಭಾಗಗಳಲ್ಲಿ 10,000 ಎಕರೆ ಕಾನು ಅರಣ್ಯ ನಾಶವಾಗುತ್ತಿದೆ ಎಂಬ ಗಂಭೀರ ಪ್ರಕರಣವನ್ನು ವೃಕ್ಷಲಕ್ಷ ಆಂದೋಲನ ಬಯಲಿಗೆ ತಂದಿತ್ತು. ಎಲ್ಲರ ಗಮನ ಚುನಾವಣೆ ಮೇಲೆ ಇರುವಾಗ ಮಲೆನಾಡಿನ ಗ್ರಾಮ ಸಾಮೂಹಿಕ ಭೂಮಿ-ಕಾನು ಅರಣ್ಯಗಳನ್ನು ಬೇಕಾಬಿಟ್ಟಿ ನಾಶ ಮಾಡುವ ಕೃತ್ಯ, ಭೂಕಬಳಿಕೆ ಆಗುತ್ತಿದೆ ಎಂದು ಮಾರ್ಚ್‌ 2019 ರಲ್ಲಿ ವೃಕ್ಷಲಕ್ಷ ಕಾರ್ಯಕರ್ತರು ಸಾಗರ- ಶಿವಮೊಗ್ಗ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಏಪ್ರಿಲ್‌ನಲ್ಲಿ ರಾಜ್ಯದ ಅರಣ್ಯ ಮುಖ್ಯಸ್ಥರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಭಾರತ ಸರ್ಕಾರದ ಅರಣ್ಯ ಮಂತ್ರಾಲಯಕ್ಕೂ ಅಹವಾಲು ಸಲ್ಲಿಸಿದ್ದರು.

ಹೋರಾಟದ ಆರಂಭ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ಯುವಕರು ಬೊಮ್ಮತ್ತಿ ಸುತ್ತ ನಡೆಯುವ ಭೂಕಬಳಿಕೆ ಬಗ್ಗೆ ವೃಕ್ಷಲಕ್ಷ ಆಂದೋಲನದ ಗಮನ ಸೆಳೆದಿದ್ದರು.

ಮೇ- ಜೂನ್‌ನಲ್ಲಿ 2 ತಿಂಗಳ ಕಾಲ ಕಾರ್ಯಕರ್ತರು ಸರ್ಕಾರದ ಮೇಲೆ ಒತ್ತಡ, ಅರಣ್ಯ ಅಧಿಕಾರಿಗಳ ಜೊತೆ ಸ್ಥಳ ಸಮೀಕ್ಷೆ, ಜಾಗೃತಿ ನಡೆಸಿದ್ದರು.

ಜೀವ ವೈವಿಧ್ಯ ದಾಖಲಾತಿ: ಕಳೆದ ಜುಲೈ ತಿಂಗಳಲ್ಲಿ ಬೊಮ್ಮತ್ತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಶಿಬಿರ, ವೃಕ್ಷ ಜಾಗೃತಿ ಜಾಥಾ ಎಂಬ ವಿಶೇಷ ಕಾರ್ಯಕ್ರಮವನ್ನು ವೃಕ್ಷಲಕ್ಷ ಆಂದೋಲನ ರೂಪಿಸಿತು. ರಾಜ್ಯ ಜೀವ ವೈವಿಧ್ಯ ಮಂಡಳಿ, ಅರಣ್ಯ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಜಿಪಂ, ಸಾಮಾಜಿಕ ಅರಣ್ಯ, ಪರಿಸರ ವಿಜ್ಞಾನಿಗಳು ಸೇರಿ ಕಾನು ಅರಣ್ಯ ನಾಶವಾಗುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಡಾ| ಟಿ.ವಿ. ರಾಮಚಂದ್ರ, ಡಾ| ಕುಶಾಲಪ್ಪ, ಡಾ| ರಾಮಕೃಷ್ಣ, ಡಾ| ಜಡೆಗೌಡ, ಪ್ರೊ| ಬಿ.ಎಂ. ಕುಮಾರಸ್ವಾಮಿ, ಅನಂತರಾಂ, ಆನೆಗೊಳಿ ಸುಬ್ಬರಾವ್‌, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಇವರೆಲ್ಲ ಜೀವ ವೈವಿಧ್ಯ ಕಾನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ನೂರಾರು ಬಳ್ಳಿ, ಬೇರು, ಔಷಧ ಸಸ್ಯ, ಹಣ್ಣು ಬಿಡುವ, ವೃಕ್ಷಗಳು, ಚಾಪೆಹುಲ್ಲು, ಮೇವಿನ ವೃಕ್ಷ, ನಾಟಿನಮರ, ಪವಿತ್ರ ವೃಕ್ಷ, ಜೇನುಮರ, ತಂಬಳಿಗಿಡ, ಗಡ್ಡೆಗೆಣಸುಗಳನ್ನು ಗುರುತಿಸಿದರು. ಈ  ಅರಣ್ಯದ ಪಾರಿಸರಿಕ ಸೇವೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ್ದು ಎಂದು ಅಂದಾಜು ಮಾಡಿದರು.

ದೇವರಕಾಡು ಯೋಜನೆ ಜಾರಿ: ಇದೇ ಹೊತ್ತಿಗೆ ರಾಜ್ಯ ಅರಣ್ಯ ಇಲಾಖೆಯ ಯೋಜನೆ, ಔಷಧಿ ಸಸ್ಯ ವಿಭಾಗದ ಮುಖ್ಯ ಅಧಿಕಾರಿಗಳು ವಿಶೇಷ ದೇವರ ಕಾಡು ನಿರ್ಮಾಣ, ವಿನಾಶದ ಅಂಚಿನ ಔಷಧೀಯ ಸಸ್ಯ ಸಂರಕ್ಷಣಾ ಯೋಜನೆಯನ್ನೇ ಬೊಮ್ಮತ್ತಿ-ನಾರಗೋಡ ಕಾನು ಪ್ರದೇಶಕ್ಕೆ ನೀಡಿದೆ.

ಟಾಪ್ ನ್ಯೂಸ್

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.