ನೀವು (ಪಾಕ್) ಬದಲಾಗದೇ ಇದ್ದರೆ…ಉಗ್ರರ ಶಿಬಿರಗಳನ್ನು ನಾವೇ ನಾಶ ಮಾಡುತ್ತೇವೆ; ಸತ್ಯಪಾಲ್
Team Udayavani, Oct 21, 2019, 3:01 PM IST
ನವದೆಹಲಿ: ಒಂದು ವೇಳೆ ಪಾಕಿಸ್ತಾನ ತನ್ನ ನೀತಿಯನ್ನು ಬದಲಾಯಿಸಿಕೊಳ್ಳದಿದ್ದರೆ, ಉಗ್ರರನ್ನು ಹಾಗೂ ಉಗ್ರರ ಶಿಬಿರಗಳನ್ನು ಇದೇ ರೀತಿ ನಾಶ ಮಾಡಲಾಗುವುದು ಎಂದು ಜಮ್ಮು-ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಜಮ್ಮು-ಕಾಶ್ಮೀರದ ಜನರು ನವೆಂಬರ್ 1ರಿಂದ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶದ ಭಾಗವಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಯುದ್ಧ ಎಂಬುದು ಕೆಟ್ಟ ಆಲೋಚನೆಯಾಗಿದೆ. ನೆರೆಯ ದೇಶದ ಜತೆ ಹೇಗೆ ಇರಬೇಕು ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ. ಒಂದು ವೇಳೆ ಪಾಕಿಸ್ತಾನ ತನ್ನ ನೀತಿಯನ್ನು ಬದಲಾಯಿಸಿಕೊಳ್ಳದೇ ಇದ್ದರೆ. ಭಾನುವಾರ ಭಾರತೀಯ ಸೇನೆ ಏನು ಮಾಡಿದೆಯೋ ಅದನ್ನೇ ನಾವು ಮತ್ತೆ ಮಾಡಬೇಕಾಗುತ್ತದೆ. ನಾವು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸುತ್ತೇವೆ ಎಂದು ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ನಾಲ್ಕು ಉಗ್ರರ ಶಿಬಿರಗಳನ್ನು ಭಾರತೀಯ ಸೇನೆ ದಾಳಿ ಮೂಲಕ ಧ್ವಂಸಗೊಳಿಸಿದ್ದನ್ನು ಉಲ್ಲೇಖಿಸಿ ಮಲಿಕ್ ಈ ಹೇಳಿಕೆ ನೀಡಿದ್ದಾರೆ.