ತುಳುನಾಡ ತುಳುವೆರ್ ಕಲ್ಯಾಣ್ ಮಹಿಳಾ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ
Team Udayavani, Oct 22, 2019, 4:46 PM IST
ಮುಂಬಯಿ, ಅ. 21: ಪಾರನಾಕಾ ವಸಾಯಿಗಾಂವ್ ಶ್ರೀ ಸುಕೃತೀಂದ್ರ ಕಲಾ ಮಂದಿರ ಜಿಎಸ್ಬಿ ಸಮಾಜ ಸೇವಾ ಸಂಘ ಆಯೋಜಿಸಿದ ನಲ್ವತ್ತನೇ ವಾರ್ಷಿಕ ಶಾರದೋತ್ಸವದ ಸಂದರ್ಭದಲ್ಲಿ ಅ. 4ರಂದು ಸಂಜೆ ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಅಮೇಯ್ ಗಣೇಶ್ ಪೈ ಇವರಿಂದ ಭಕ್ತಿ ಸುಧಾ ಕಾರ್ಯಕ್ರಮವು ಭಕ್ತಾದಿಗಳನ್ನು ರಂಜಿಸಿತು. ಅವರು ಮರಾಠಿ, ಕನ್ನಡ, ಕೊಂಕಣಿ ಮತ್ತು ಹಿಂದಿ ಭಜನೆಗಳನ್ನು ಹಾಡಿದರು. ಹಾರ್ಮೋನಿಯಂನಲ್ಲಿ ನಿಡ್ಡೋಡಿ ಗುರುಪ್ರಸಾದ್ ಪ್ರಭು, ತಬಲಾದಲ್ಲಿ ಅಕ್ಷಯ್ ಅನಿಲ್ ಪೈ, ಪಖ್ವಾಜ್ನಲ್ಲಿ ಗಣೇಶ್ ಪೈ, ತಾಳದಲ್ಲಿ ಅಶೋಕ್ ಶಿಂಧೆ ಸಹಕರಿಸಿದರು. ಸ್ಮಿತಾ ಗಣೇಶ್ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಕಲಾವಿದರನ್ನು ಜಿಎಸ್ಬಿ ಸಮಾಜ ಪಾರನಾಕಾ ವಸಾಯಿಗಾಂವ್ ಸಮಿತಿಯವರು ಸಮ್ಮಾನಿಸಿ ಗೌರವಿಸಿದರು. ಪಾರನಾಕಾ ಜಿಎಸ್ಬಿ ಸೇವಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಸಾಯಿರೋಡ್ ಜಿಎಸ್ಬಿ ಸಮಾಜ ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ