ಕುಂದಾಪುರ: ಆಧಾರ್ಗೆ ಹೆಚ್ಚುವರಿ ಮೆಶಿನ್
Team Udayavani, Oct 24, 2019, 5:54 AM IST
ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಆಧಾರ್ ಪ್ರಕ್ರಿಯೆಗಾಗಿ ಮಂಗಳವಾರದಿಂದ ಹೆಚ್ಚುವರಿ ಉಪಕರಣಗಳನ್ನು ಅಳವಡಿಸಲಾಗಿದೆ. ಈಗ ಎರಡು ಕಂಪ್ಯೂಟರ್ಗಳಲ್ಲಿ ಆಧಾರ್ ಪ್ರಕ್ರಿಯೆ ನಡೆಸಬಹುದಾಗಿದೆ.
ಈವರೆಗೆ ಒಂದೇ ಕಂಪ್ಯೂಟರ್ನಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಸೇರ್ಪಡೆ, ತೆಗೆಯುವಿಕೆ ಇತ್ಯಾದಿ ಮಾಡಲಾಗುತ್ತಿತ್ತು. ನೂರಾರು ಜನರ ಸರದಿ ಸಾಲು ಇದ್ದರೂ ಕೇವಲ 50 ಮಂದಿಯ ಪ್ರಕ್ರಿಯೆ ಮಾತ್ರ ಸಾಧ್ಯವಾಗುತ್ತಿತ್ತು.
ಈಗ ಎರಡು ಘಟಕಗಳಲ್ಲಿ ಆಧಾರ್ ಪ್ರಕ್ರಿಯೆ ನಡೆಯುವ ಕಾರಣ ಹೆಚ್ಚುವರಿಯಾಗಿ 50-60ರಷ್ಟು ಮಂದಿ ಪ್ರಯೋಜನ ಪಡೆಯಬಹುದು.
ಮಿನಿ ವಿಧಾನಸೌಧದಲ್ಲಿ ಆಧಾರ್ಗಾಗಿ ಜನ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧೆಡೆಯಿಂದ ಆಗಮಿಸುತ್ತಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗದೇ ಮರಳಿ ಹೋಗುತ್ತಾರೆ. ಇಲ್ಲಿನ ಎಸ್ಬಿಐ, ಕೆನರಾ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಇದ್ದರೂ ಅವರು ದಿನವೊಂದಕ್ಕೆ 10 ಮಂದಿಯ ಪ್ರಕ್ರಿಯೆ ಮಾತ್ರ ನಡೆಸುವ ಕಾರಣ ತೀರಾ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಈಡೇರಿಕೆಯಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಆಧಾರ್ ಕೊಡುವ ಸಿಬಂದಿಯ ಹೆಬ್ಬೆರಳಿನ ಗುರುತು ನವೀಕರಣದ ತಾಂತ್ರಿಕ ದೋಷದಿಂದ ಒಂದು ವಾರ ಆಧಾರ್ ಸಂಬಂಧಿ ಕೆಲಸಗಳು ನಡೆಯುತ್ತಿರಲಿಲ್ಲ.
ಇದೇ ರವಿವಾರ ಅಂಚೆ ಇಲಾಖೆಯವರು ಆಧಾರ್ ಅದಾಲತ್ ನಡೆಸಿದ್ದರು. ಅಲ್ಲಿ ಕೂಡಾ ಸುಮಾರು 300 ಮಂದಿಯ ನಿರೀಕ್ಷೆ ಇಟ್ಟು ಅದಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದರು. ಆದರೆ ಬೆಳ್ಳಂಬೆಳಗ್ಗೆಯೇ ಸಾವಿರಾರು ಜನ ಸೇರಿದ್ದ ಕಾರಣ ಇನ್ನೆರಡು ಹೆಚ್ಚುವರಿ ಘಟಕಗಳ ವ್ಯವಸ್ಥೆ ಮಾಡಿದ್ದರು. ಹಾಗಿದ್ದರೂ ಸಾವಿರಾರು ಮಂದಿಗೆ ಆಧಾರ್ ಪ್ರಕ್ರಿಯೆ ಲಾಭ ದೊರೆಯದೇ ನಿರಾಶರಾಗಿದ್ದರು. ಇದನ್ನು ತಾಲೂಕು ಆಡಳಿತ ಕೂಡ ಮನಗಂಡಂತಿದೆ.
ಇದೀಗ ಹೆಚ್ಚುವರಿ ಕಂಪ್ಯೂಟರ್ ಅಳವಡಿಸಲಾಗಿದೆ. ಆದರೆ ಇದು ಮೂರು ತಿಂಗಳ ಅವಧಿಗೆ ಮಂಜೂರಾಗಿದ್ದು ಶಾಶ್ವತ ಮಂಜೂರಾತಿಗೆ ಜನಪ್ರತಿನಿಧಿಗಳ ಪ್ರಯತ್ನದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ