ಎರಡೆರಡು ಬಾರಿ ಗೆಲ್ಲುವುದು ಸುಲಭವಲ್ಲ: ಪ್ರಧಾನಿ ಮೋದಿ
Team Udayavani, Oct 25, 2019, 6:06 AM IST
ಎರಡೆರಡು ಬಾರಿ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೂ, ಮಹಾರಾಷ್ಟ್ರ ಮತ್ತು ಹರ್ಯಾಣದ ಜನತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿಟ್ಟಿದ್ದಾರೆ. ಅದಕ್ಕಾಗಿ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡೂ ರಾಜ್ಯಗಳ ಫಲಿತಾಂಶ ಹೊರಬಿದ್ದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ಸಿಎಂ ಫಡ್ನವೀಸ್ ಮತ್ತು ಖಟ್ಟರ್ ಅವರೇ ನಮ್ಮ ನೇತೃತ್ವ ವಹಿಸಬೇಕು ಎಂದು ಜನರು ತೀರ್ಮಾನಿಸಿದಂತಿದೆ’ ಎಂದೂ ಹೇಳುವ ಮೂಲಕ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಗದ್ದುಗೆಯೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಜನತೆ ಮತ್ತೂಮ್ಮ ನಮ್ಮನ್ನು ಪ್ರೀತಿಯಿಂದ ಹರಸಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ನಾವು ಕೈಗೊಂಡಿರುವ ಯೋಜನೆಗಳನ್ನು ಮುಂದುವರಿಸುತ್ತೇವೆ. ಚುನಾವಣೆಗಾಗಿ ಶ್ರಮಿಸಿರುವ ಬಿಜೆಪಿ ಹಾಗೂ ಶಿವಸೇನೆಯ ಪ್ರತಿ ಕಾರ್ಯಕರ್ತ ಹಾಗೂ ಎನ್ಡಿಎ ಕುಟುಂಬಕ್ಕೆ ಪ್ರಣಾಮ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಹರ್ಯಾಣದಲ್ಲೂ ನಮಗೆ ಆಶೀರ್ವಾದ ಮಾಡಿರುವ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿಗಾಗಿ ಅದೇ ಹರುಪಿನಿಂದ ಕೆಲಸ ಮಾಡುತ್ತೇವೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿರುವ ಹರ್ಯಾಣದ ಬಿಜೆಪಿ ಕಾರ್ಯಕರ್ತರು ಬಹಳ ಪರಿಶ್ರಮ ಪಟ್ಟಿದ್ದಾರೆ ಎಂದು ಶ್ಲಾ ಸಿದ್ದಾರೆ.