ತಾಯಿ ಬನವ್ವ ನಾವೇನ್‌ ತಪ್ಪ ಮಾಡೇವಿ!


Team Udayavani, Oct 25, 2019, 1:08 PM IST

bk-tdy-1

ಖ್ಯಾಡ (ಬಾಗಲಕೋಟೆ): ತಾಯಿ ಬನವ್ವ, ನಾವೇನ್‌ ತಪ್ಪ ಮಾಡೀವಿ. ಒಂದ್‌ ವರ್ಷದಾಗ ಮೂರೂ ಮೂರು ಸಾರಿ ಯಾಕ್‌ ತ್ರಾಸ್‌ ಕೊಡಾಕತ್ತಿ… ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯ ಖ್ಯಾಡದ ಜನ ಉತ್ತರಕರ್ನಾಟಕದ ಆರಾಧ್ಯ ದೇವತೆ ಬಾದಾಮಿ-ಬನಶಂಕರಿ ದೇವಿಗೆ ಹೀಗೆ ಕೈಮುಗಿದು ಕೇಳುತ್ತಿದ್ದಾರೆ.

ಎರಡೇ ತಿಂಗಳಲ್ಲಿ ಬರೋಬ್ಬರು ಮೂರು ಬಾರಿ, ಎಲ್ಲಾ ಸಾಮಗ್ರಿ, ಮಕ್ಕಳು, ಆಡು-ಎಮ್ಮೆ ಹೊಡೆದುಕೊಂಡು ಪ್ಲಾಟ್‌ (ಆಸರೆ ಗ್ರಾಮ)ದಲ್ಲಿದ್ದು ಜೀವ ಉಳಿಸಿಕೊಂಡು, ಮರಳಿ ಊರಿಗೆ ಬರುತ್ತಿದ್ದಾರೆ.

ರಾಡಿ ನೋಡ್ರಿ: ಖ್ಯಾಡ ಗ್ರಾಮಕ್ಕೆ ಮಲಪ್ರಭಾ ನದಿ ಮೂರು ಬಾರಿ ನುಗ್ಗಿದೆ. ಹಳೆಯ ಊರಿಗೆ ನುಗ್ಗಿದಾಗೊಮ್ಮೆ, ರಾಶಿ ರಾಶಿ ರಾಡಿ ತಂದು ಬಿಟ್ಟಿದೆ. ಮನೆಗಳ ಒಳಗೆ, ಹೊಸ್ತಿಗಳು ರಾಡಿಯಿಂದ ತುಂಬಿಕೊಂಡಿದೆ. ಕಳೆದ ಆಗಸ್ಟನಲ್ಲಿ ಬಂದ ಪ್ರವಾಹದಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು.

ಮನೆಗಳಲ್ಲಿನ ಹಾಸಿಗೆ, ಹೊದಿಕೆ, ಧವಸ-ಧಾನ್ಯ ಎಲ್ಲವೂ ಹಾನಿಯಾಗಿತ್ತು. ಇದೀಗ ಪುನಃ ಕಟ್ಟಿಕೊಳ್ಳಲು ಹೈರಾಣಾಗುತ್ತಿರುವಾಗಲೇ ಮತ್ತೆ ನೀರು ಹೊಕ್ಕಿದೆ.ಇದರಿಂದ ಕಂಗಾಲಾಗಿರುವ ಜನರು, ತಾಯಿ ಬನವ್ವ ನಾವೇನ್‌ ತಪ್ಪ ಮಾಡೀವಿ ಎಂದು ಅಸಹಾಯಕರಂತೆ ಕೇಳುತ್ತಿದ್ದಾರೆ.

ಬದುಕಿನ ಬಂಡಿ ನೀರಲ್ಲ: 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ 2015 ಜನಸಂಖ್ಯೆ ಇದೆ. ಅದರಲ್ಲಿ 1012 ಪುರುಷರು, 1003 ಮಹಿಳೆಯರು ಒಳಗೊಂಡಿದ್ದು, ಸುಮಾರು 400 ಕುಟುಂಬಗಳಿವೆ. ಬಹುತೇಕ ರೈತ ಕುಟುಂಬಗಳೇ ಇಲ್ಲಿದ್ದು, ಕಲ್ಲು ಮಣ್ಣಿನ ಮೇಲುಮುದ್ದೆಯ ಮನೆಗಳಿವೆ. 327.84 ಹೆಕ್ಟೇರ್‌ ನೀರಾವರಿ, 285.76 ಹೆಕ್ಟೇರ್‌ ಮಳೆಯಾಶ್ರಿತ ಸೇರಿ ಒಟ್ಟು 613.60 ಹೆಕ್ಟೇರ್‌ ಸಾಗುವಳಿ ಭೂಮಿ ಇದೆ. ಬಾದಾಮಿ ಚಾಲುಕ್ಯರ ಅರಸರ ಕಾಲದಲ್ಲಿ ಆಯುಧಗಳನ್ನು ಇಡಲು ಈ ಗ್ರಾಮ ಬಳಕೆಯಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳು ಹೇಳುತ್ತವೆ. ಆಗ ಆಯುಧಗಳನ್ನು ಇಡುತ್ತಿದ್ದ ಗ್ರಾಮದಲ್ಲೀಗ, ರೈತನ ಆಯುಧಗಳು (ಎತ್ತಿನ ಬಂಡಿ, ಕೃಷಿ ಚಟುವಟಿಕೆಯ ಸಾಮಗ್ರಿ) ನೀರಿನಲ್ಲಿ ನಿಂತಿವೆ. ರೈತನ ಬದುಕಿಗೆ ಈ ಸಾಮಗ್ರಿಗಳೇ ಬದುಕಿನ ಬಂಡಿ ಸಾಗಲು ಆಯುಧಗಳು. ಅವು ನಿರಂತರ ನೀರಿನಲ್ಲಿ ನೆನೆದಿರುವುದರಿಂದ ಬಳಕೆ ಮಾಡಲಾಗದ ಸ್ಥಿತಿ ತಲುಪಿವೆ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.