ಕೆಸರಲ್ಲಿ ಹೂತು ಹೋದ ಸರ್ಕಾರಿ ಕಾರು
Team Udayavani, Oct 26, 2019, 1:08 PM IST
ಬೆಳ್ತಂಗಡಿ: ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗಾಗಿ ಚಾರ್ಮಾಡಿ ಗ್ರಾಮದ ಅರಣಪಾದೆ ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಚಿವರ ಜತೆ ಆಗಮಿಸಿದ ಸರಕಾರಿ ಕಾರು ಹೂತು ಹೋದ ಘಟನೆ ನಡೆದಿದೆ.
ಸಚಿವರ ಜತೆಗಿದ್ದ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಬಂದಿದ್ದ ಕಾರನ್ನು ಚಾಲಕ ತಿರುಗಿಸುವ ವೇಳೆಗೆ ಹೂತು ಹೋಯಿತು.
ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಸೇರಿದಂತೆ ಸ್ಥಳೀಯರು ದೂಡಿ ಮೇಲಕ್ಕೆತ್ತಿದ್ದರು.