ಶೂಲೇಸ್ ಕಟ್ಟಲಾಗದವರು ಧೋನಿ ಬಗ್ಗೆ ಮಾತನಾಡುತ್ತಾರೆ !
Team Udayavani, Oct 26, 2019, 2:28 PM IST
ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿ ಪಡೆಯುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೊಂದು ವಿಷಯದ ಬಗ್ಗೆ ಅನೇಕರು ಪದೇ ಪದೇ ಹೇಳಿಕೆ ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಕೋಚ್ ರವಿಶಾಸ್ತ್ರಿ, ಧೋನಿ ಬಗ್ಗೆ ಮಾತನಾಡುವ ಅರ್ಧದಷ್ಟು ಮಂದಿಗೆ ಸರಿಯಾಗಿ ಶೂ ಲೇಸ್ ಕಟ್ಟಲು ಬರುವುದಿಲ್ಲ ಎಂದಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಶಾಸ್ತ್ರಿ, ಮಹೇಂದ್ರ ಸಿಂಗ್ ಧೋನಿ ದೇಶಕ್ಕಾಗಿ ಏನು ಮಾಡಿದ್ದಾರ ಎಂದು ಎಲ್ಲರಿಗೂ ಗೊತ್ತು. ಆದರೂ ಜನರು ಧೋನಿಯನ್ನು ಮೈದಾನದಿಂದ ಹೊರಗೆ ಕಾಣಲು ಅವಸರ ಮಾಡುತ್ತಾರೆ. ಧೋನಿ ನಿವೃತ್ತಿಯಾಗುತ್ತಾರೆಂದು ಧೋನಿಗೂ ಗೊತ್ತು, ಜನರಿಗೂ ಗೊತ್ತು ಎಂದರು.
ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಮಯದಲ್ಲೂ ಧೋನಿಗೆ ಯಾರೂ ಹೇಳಿರಲಿಲ್ಲ. ಅವರಿಗೆ ಗೊತ್ತು ಯಾವಾಗ ನಿವೃತ್ತಿಯಾಗಬೇಕೆಂದು. ವೃದ್ಧಿಮಾನ್ ಸಾಹಾ ಯಾವಾಗ ತನ್ನ ಜಾಗ ತುಂಬಲು ಸಿದ್ದವಾಗಿದರೊ ಆಗ ಧೋನಿ ನಿವೃತ್ತಿ ಪಡೆದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!