ಪುಟ್ಟ ಮಳಿಗೆಯಲ್ಲೇ ವಾಚನಾಲಯ


Team Udayavani, Oct 29, 2019, 12:39 PM IST

gadaga-tdy-2

ರೋಣ: ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಸುಮಾರು ನಾಲ್ಕುವರೆ ಸಾವಿರ ಜನಸಂಖ್ಯೆ ಹೊಂದಿರುವ ಹಿರೇಹಾಳ ಗ್ರಾಮದಲ್ಲಿನ ವಾಚನಾಲಯಕ್ಕೆ ಸ್ವಂತ ಕಟ್ಟಡ, ಸೂಕ್ತ ಆಸನ, ಸಮರ್ಪಕ ವಾತಾವರಣ, ಗಾಳಿ ಬೆಳಕು ಸೇರಿದಂತೆ ಮೂಲ ಸೌಕರ್ಯಗಳಿಲ್ಲದೇ ಓದುಗರಿಗೆ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ.

1994ರಲ್ಲಿ ಈ ಗ್ರಂಥಾಲಯ ಸ್ಥಾಪನೆಯಾಗಿದೆ. ಅಲ್ಲಿಂದ ಇಲ್ಲಿಯವರೆ ಸ್ವಂತ ಕಟ್ಟಡ ನೀಡುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಈ ಗ್ರಾಮಕ್ಕೆ ರಾಜ್ಯಹೆದ್ದಾರಿ ಹಾದು ಹೋಗುವುದರಿಂದ ಏಳೇಂಟು ಗ್ರಾಮಗಳಿಗೆ ಕೇಂದ್ರವಾಗಿದೆ. ಆದರೆ ಇಲ್ಲಿ ಒಂದು ಸುವ್ಯವಸ್ಥಿತವಾದ ಗ್ರಂಥಾಲಯವಿಲ್ಲದೆ ಇರುವುದು ಇಲ್ಲಿನ ಓದುಗರಿಗೆ ತೀವ್ರ ಹಿನ್ನಡೆಯಾಗಿದೆ. ಗ್ರಾಪಂನ 8 ಅಡಿ ಉದ್ದ 8 ಅಗಲದ ಸಣ್ಣ ಮಳಿಗೆಯಲ್ಲಿ ಗ್ರಂಥಾಲಯವಿದೆ. ಅಲ್ಲದೆ ಅದಕ್ಕೆ ನಾಮಫಲಕವಿಲ್ಲದೆ ಇರುವುದರಿಂದ ವಾಚನಾಲಯ ಇರುವುದೇ ಗೊತ್ತಾಗುತ್ತಿಲ್ಲ.

ಮುಂದೆಯೇ ಮೂತ್ರಾಲಯ-ಚರಂಡಿ: ಗ್ರಂಥಾಲಯದಲ್ಲಿ ಜಾಗದ ಜೊತೆಗೆ ಆಸನಗಳ ಕೊರತೆ ತುಂಬಾ ಇದ್ದು, ಇಲ್ಲಿಗೆ ಬರುವ ಎರಡೋ ಮೂರು ದಿನಪ್ರತಿಕೆಗಳನ್ನು ಓದಲು ಇಲ್ಲಿನ ಯುವಕರು, ಹಿರಿಯರು ಹೊರಗಡೆ ಕುಳಿತುಕೊಳ್ಳುತ್ತಾರೆ. ಆದರೆ ವಾಚನಾಲಯದ ಮುಂದೆಯೇ ಮೂತ್ರಾಲಯವಿರುವುದರಿಂದ ಗಬ್ಬು ನಾರುವ ವಾಸನೆಯಲ್ಲಿ ಪತ್ರಿಕೆ ಓದಬೇಕಾದ ಸ್ಥಿತಿ ಇಲ್ಲಿನ ಓದುಗರಿಗಿದೆ. ಅಲ್ಲದೆ ಈ ವಟಾರದ ಜನರು ಇರೋ ಬರೋ ಕಸವನ್ನು ತಂದು ಗ್ರಂಥಾಲಯದ ಮುಂದೆ ರಾಶಿ ಹಾಕಿದ್ದಾರೆ. ಇದರ ಪಕ್ಕದಲ್ಲಿ ಹರಿಯುವ ಚರಂಡಿಗೆ ಕಸಕಡ್ಡಿಗಳು ಬಿದ್ದು ಗಬ್ಬೆದ್ದು ನಾರುತ್ತಿವೆ. ಇದು ಓದುಗರಿಗೆ ಕಿರಿಕಿರಿಯಾಗಿದೆ. ಗ್ರಂಥಾಲಯದ ಗ್ರಂಥಪಾಲಕರು ತಡವಾಗಿ ಬರುವುದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಪತ್ರಿಕೆ ಓದಲು ಬರುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಬೆಳಗ್ಗೆ 8ಕ್ಕೆ ಗ್ರಂಥಾಲಯ ಪ್ರಾರಂಭವಾಗಬೇಕು ಎನ್ನುವುದು ಇಲ್ಲಿನ ಓದುಗರ ಅಭಿಪ್ರಾಯವಾಗಿದೆ.

ಕಳೆದ 25 ವರ್ಷಗಳಿಂದ ಹಿರೇಹಾಳ ಗ್ರಂಥಾಲಯದ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಕಟ್ಟಡದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಲಿಖೀತ ಹಾಗೂ ಮೌಖೀಕ ಮನವಿ ಮಾಡಿಕೊಂಡಿದ್ದೇನೆ. ಇಲ್ಲಿಯವರೆಗೆ ಕಟ್ಟಡ ನೀಡಿಲ್ಲ. ಈಗಿರುವ ಜಾಗ ಚಿಕ್ಕದಾಗಿದೆ. ಇದರಲ್ಲಿ 2000 ಪುಸ್ತಕ ಇಟ್ಟುಕೊಳ್ಳಲು ಜಾಗ ಸಾಲುತ್ತಿಲ್ಲ. ಇದರಿದ ಸರ್ಕಾರ ಹಾಗೂ ಇಲಾಖೆ ಸ್ವಂತ ಅಥವಾ ವ್ಯವಸ್ಥಿತವಾದ ಖಾಸಗಿ ಜಾಗವನ್ನು ಬಾಡಿಗೆ ರೂಪದಲ್ಲಿ ನೀಡಿದರೆ ಓದುಗರಿಗೆ ಅನುಕೂಲಕರವಾದ ವಾತವರಣ ಕಲ್ಪಿಸಲು ಸಹಾಯವಾಗುತ್ತದೆ. ಜಿ.ವಿ. ಬಾಗೂರಮಠ, ಗ್ರಂಥಪಾಲಕ

 25 ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮೂರ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟದಲ್ಲಿ ಕಿಡಕಿ, ಗಾಳಿ ಬೆಳಕಿಲ್ಲ. ಜೊತೆಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಗಳು ಇಲ್ಲದೆ ಇರುವುದರಿಂದ ಓದುಗರಿಗೆ ಇದ್ದು ಇಲ್ಲದಂತಾಗಿದೆ.-ಅಭಿಗಾಣಿಗೇರ,ಗ್ರಾಮದ ಯುವಕ

 

-ಯಚ್ಚರಗೌಡ ಗೋವಿಂದಗೌಡ್ರ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.