ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದು ಅನ್ಫಿಟ್
Team Udayavani, Oct 31, 2019, 3:03 AM IST
ಶಿವಮೊಗ್ಗ/ದಾವಣಗೆರೆ: ವಿರೋಧ ಪಕ್ಷದ ನಾಯಕರಾಗಲು ಸಿದ್ದರಾಮಯ್ಯ ಅನ್ಫಿಟ್. ಅವರು ಈ ಸ್ಥಾನದಲ್ಲಿ ಶಾಶ್ವತವಾಗಿರಲು ಸಾಧ್ಯವೇ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಶಾಶ್ವತವಾಗಿ ವಿರೋಧ ಪಕ್ಷದ ನಾಯಕರಾಗಿರುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಆದರೆ, ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿದ್ದರೆ ತಾನೇ ವಿರೋಧ ಪಕ್ಷದ ನಾಯಕನಾಗಿ ರುವುದು? ಈಗಾಗಲೇ ಕಾಂಗ್ರೆಸ್ನಲ್ಲಿ ಗುಂಪುಗಳು ಆಗಿ ಹೋಗಿವೆ. ಈ ವಿಷಯ ಯಡಿಯೂರಪ್ಪ ನವರಿಗೆ ಗೊತ್ತಿಲ್ಲ. ಹಾಗಾಗಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ ಪರ್ಮನೆಂಟ್ ಆಗಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರಿಗೆ ಎಷ್ಟು ಪಾರ್ಟಿ ಆಯ್ತಿಗ. ಬಿಜೆಪಿ ಬಿಟ್ಟು ಎಲ್ಲಾ ಪಾರ್ಟಿ ಆಯ್ತು. ಇನ್ನೆಲ್ಲಿ ಹೋಗ್ತಾರೆ? ಅವರು ಅಧಿಕಾರ ಸಿಕ್ಕ ಪಾರ್ಟಿಯಲ್ಲಿ ಮಾತ್ರ ಇರುತ್ತಾರೆ. ಇಲ್ಲವೇ ಆ ಪಾರ್ಟಿ ಒದ್ದು ಬೇರೆ ಪಕ್ಷಕ್ಕೆ ಹೋಗ್ತಾರೆ ಎಂದು ಟೀಕಿಸಿದರು.
ನೋಬೆಲ್ ಪ್ರಶಸ್ತಿ ಕೊಡಲಿ: ಸಿದ್ದರಾಮಯ್ಯ ತಲೆ ಕೆಟ್ಟಾಗಲೆಲ್ಲಾ ಒಂದೊಂದು ಹೇಳಿಕೆ ನೀಡುತ್ತಾರೆ. ನನಗೆ ಅಚ್ಚರಿ ತಂದಿದ್ದೇನೆಂದರೆ ಸರ್ಕಾರ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಕೊಟ್ಟೇ ಇಲ್ಲ ಎಂದು ಹೇಳಿರುವುದು. ಇಂಥಾ ಸುಳ್ಳು!
ಯಪ್ಪಾ…ಯಪ್ಪಾ.. ಇದು ಗಿನ್ನಿಸ್ ದಾಖಲೆ. ಸುಳ್ಳುಗಾರ ಯಾರೆಂದರೆ ಸಿದ್ದರಾಮಯ್ಯ. ರಾಜ್ಯ ಸುತ್ತಿಕೊಂಡು ಬಂದಲ್ಲಿ ಸರಕಾರ ಯಾರ್ಯಾರಿಗೆ ಪರಿ ಹಾರದ ಹಣ ನೀಡಿದೆ ಎಂಬುದು ಅವರಿಗೆ ಗೊತ್ತಾಗ ಲಿದೆ. ಮೊದಲು ಇದನ್ನು ತಿಳಿದುಕೊಂಡು ನಂತರ ಮಾತನಾಡಲಿ ಎಂದು ತಾಕೀತು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ