ನಾವು ನವೆಂಬರ್‌ ಕನ್ನಡಿಗರಲ್ಲ; ಕನ್ನಡದಲ್ಲೇ ದಾರಿ ತೋರಿಸುವ ವೇಝ್!


Team Udayavani, Oct 31, 2019, 12:59 PM IST

kannada-R

ಕನ್ನಡಿಗ ಸಾಗುತ್ತಿರುವ ಪ್ರತಿ ಹಾದಿಯಲ್ಲೂ ಇಂದು “ವೇಝ್’ ಅಪ್ಲಿಕೇಷನ್ನಿನ ಉಪಕಾರ ದೊಡ್ಡದು. ಯುರೋಪ್‌, ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೇಝ್ ಅನ್ನು ಭಾರತಕ್ಕೆ ಕನ್ನಡದ ಮೂಲಕ ಮೊದಲು ತಂದವರು ಸುಹ್ರುತಾ ಯಜಮಾನ್‌. ಸಾಮಾನ್ಯವಾಗಿ ನಾವು  ರಸ್ತೆಯಲ್ಲಿ ಸಾಗುವಾಗ ಮ್ಯಾಪ್‌ ಅಥವಾ ನೇವಿಗೇಶನ್‌ ಅನ್ನು ಅನುಸರಿಸುತ್ತೇವೆ.

ಭಾರತದಲ್ಲಿ ಇವು ಇಂಗ್ಲಿಷ್‌ ಬಿಟ್ಟು, ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಭಾರತದಿಂದ ಆಚೆಗೆ ಹೋದರೆ, ಐಸ್‌ಲ್ಯಾಂಡ್‌, ಸ್ವಿಜ್ಜರ್ಲೆಂಡ್‌ನ‌ಂಥ ಸಣ್ಣಪುಟ್ಟ ದೇಶದಲ್ಲೂ ಪ್ರಾದೇಶಿಕ ಭಾಷೆಯಲ್ಲಿ ಇವು ಸೇವೆ ಒದಗಿಸುವುದನ್ನು ಕಾಣಬಹುದು. ಕನ್ನಡಿಗರಿಗೆ ದಿಕ್ಸೂಚಿಯ ಈ ತಲೆನೋವನ್ನು ತಪ್ಪಿಸಿ,
ಕನ್ನಡ ಗ್ರಾಹಕರ ಕೂಟದ ಸುಹ್ರುತಾ ಯಜಮಾನ್‌ (ಬೆಂಗಳೂರು)  “ವೇಝ್’ ಅನ್ನು ಪರಿಚಯಿಸಿದ್ದಾರೆ.

ಪ್ರತಿ ಸಲ ಕಾರಿನಲ್ಲಿ ಹೋಗುವಾಗಲೂ ಇಂಗ್ಲಿಷ್‌ನಲ್ಲಿ ಮಾತಾಡುವ ನೇವಿಗೇಶನ್‌ ಬಗ್ಗೆ ಸುಹ್ರುತಾಗೆ ತಣ್ಣನೆ ಕೋಪ ಉಕ್ಕುತ್ತಿತ್ತಂತೆ. “ಇದು ಯಾಕೆ ಕನ್ನಡದಲ್ಲಿ ಮಾತಾಡಲ್ಲ?’ ಎಂಬ ಪ್ರಶ್ನೆ ಇವರಿಗೆ ಹುಟ್ಟುತ್ತಿತಂತೆ. ಜಗತ್ತಿನ ಬೇರೆಡೆ ಜನಪ್ರಿಯವಾಗಿದ್ದ, ಇಸ್ರೇಲ್‌ ಮೂಲದ ವೇಝ್
ಕಂಪನಿಯನ್ನು ಸುಹ್ರುತಾ ಸಂಪರ್ಕಿಸಿದರು.ಭಾರತದಲ್ಲಿ ಮೊದಲು ಹಿಂದಿಯಲ್ಲಿ ವೇಝ್ ಆ್ಯಪ್‌ ಬಿಡುವ ಉತ್ಸಾಹದಲ್ಲಿದ್ದ ಕಂಪನಿಯನ್ನು ಓಲೈಸಿ, ಕನ್ನಡಿಗರ ಮೊಬೈಲಿಗೆ ವೇಝ್
ಇಳಿಸುವಲ್ಲಿ ಸುಹ್ರುತಾ ಸಫ‌ಲರಾದರು. ಇದಕ್ಕಾಗಿ ಒಂದು ವರ್ಷ ಅನುವಾದ ಕೆಲಸ ನಡೆದಿತ್ತು.

ಗಾಯಕಿ ಸ್ಪರ್ಶ ಆರ್‌.ಕೆ. ಇದಕ್ಕೆ ದಿಕ್ಕುಗಳನ್ನು ಸೂಚಿಸಲು, ಮಧುರ ಕಂಠ ನೀಡಿದ್ದಾರೆ. ಕನ್ನಡಿಗರ
ಮಟ್ಟಿಗೆ ಜನಪ್ರಿಯ ದಿಕ್ಸೂಚಿ ಆ್ಯಪ್‌ ಇದು. ಸುಹ್ರುತಾ ಮೂಲತಃ ಬೆಂಗಳೂರಿನ ಬಸವನಗುಡಿ
ಯವರು. ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್‌ ಆಗಿ ಲಂಡನ್ನಿನಲ್ಲಿದ್ದಾರೆ. ಸುಹ್ರುತಾ ಅವರೊಂದಿಗೆ ಇತರೆ 11 ಮಂದಿ ಇದಕ್ಕೆ ಕೈಜೋಡಿಸಿದ್ದಾರೆ.

*ಕೀರ್ತಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-13

ಕನ್ನಡ ಶಾಲೆಯಲ್ಲಿ ತ.ನಾಡು ಮಕ್ಕಳ ವಿದ್ಯಾಭ್ಯಾಸ

0611MLE1A-SHAALE

ಮಕ್ಕಳು ಅಸೌಖ್ಯವಾದಾಗ ಶಾಲೆಗೆ ಸಿಹಿತಿಂಡಿ ಹಂಚುವ ಹರಕೆ

0711AJKE01

108 ವರ್ಷಗಳ ಇತಿಹಾಸದೊಂದಿಗೆ ಮುನ್ನಡೆಯುತ್ತಿರುವ ಸರಕಾರಿ ಕನ್ನಡ ಶಾಲೆ

0511KDPP7A-2

ಹತ್ತೂರಿನ ಮಕ್ಕಳಿಗೆ ಅಕ್ಷರ ಕಲಿಸಿದ ಜ್ಞಾನ ದೇಗುಲಕ್ಕೆ 130ರ ಸಂಭ್ರಮ

cc-46

ಆರು ದಶಕಗಳ ಬಳಿಕ ಕಿ.ಪ್ರಾ. ಹಂತದಿಂದ ಮೇಲೇರಿದ ಶಾಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.