ಐದು ದಶಕದ ಗ್ರಂಥಾಲಯಕ್ಕಿಲ್ಲ ಸ್ವಂತ ಸೂರು
ಪದೇ ಪದೇ ಕಟ್ಟಡ ಸ್ಥಳಾಂತರಗೊಳ್ಳುವ ಸಂಚಾರಿ ಗ್ರಂಥಾಲಯ ಓದುಗರಿಗೆ ಬೇಸರ
Team Udayavani, Nov 1, 2019, 5:52 PM IST
ಕಂಪ್ಲಿ: ಸ್ಥಳೀಯ ಪಟ್ಟಣದಲ್ಲಿ ಓದುಗರ ಮನ ತಣಿಸಲು ಸುಮಾರು 5 ದಶಕಗಳ ಹಿಂದೆ 1965ರಲ್ಲಿ ಆರಂಭಿಸಲಾದ ಸಾರ್ವಜನಿಕ ಶಾಖಾ ಗ್ರಂಥಾಲಯ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದ್ದು, ಒಂದು ರೀತಿಯಲ್ಲಿ ಸಂಚಾರಿ ಗ್ರಂಥಾಲಯವಾಗಿದೆ.
ಆರಂಭದಲ್ಲಿ ಪುರಸಭೆ ಕಟ್ಟಡದಲ್ಲಿ ಆರಂಭವಾದ ಈ ಗ್ರಂಥಾಲಯ, ಮುದ್ದಾಪುರ ರಸ್ತೆಯ ಪುರಸಭೆ ಮಾಜಿ ಅಧ್ಯಕ್ಷ ಎಂ. ಪಂಪಣ್ಣವರ ಕಟ್ಟಡಕ್ಕೆ ನಂತರ ಆರ್ಎಸ್ಎಸ್ಎನ್ ಸೊಸೈಟಿ ಕಟ್ಟಡಕ್ಕೆ, ಅಲ್ಲಿಂದ ಪಟ್ಟಣದ ಮುಖ್ಯಬೀದಿಯ ಕಲ್ಗುಡಿ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡಿತ್ತು.
ಇದೀಗ ವ್ಯವಸಾಯೋತ್ಪನ್ನ ಮಾರುಕಟ್ಟೆಯ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಮೇಲಿಂದ ಮೇಲೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಓದುಗರಿಗೆ ತೀವ್ರ ತೊಂದರೆಯಾಗಿದೆ.
ದೊಡ್ಡ ಪುರಸಭೆ ಎನ್ನುವ ಹೆಗ್ಗಳಿಗೆ ಗಳಿಸಿದ್ದರೂ ಸಹಿತ ಸಾರ್ವಜನಿಕ ಗ್ರಂಥಾಲಯಕ್ಕೆ ಒಂದು ನಿವೇಶನ ಒದಗಿಸಲು ಸಾಧ್ಯವಾಗಿಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಗ್ರಂಥಾಲಯದಲ್ಲಿ ಹೈದರಾಬಾದ್ ಕರ್ನಾಟಕದ 443 ಪುಸ್ತಕಗಳು ಸೇರಿದಂತೆ ಒಟ್ಟು 27,111 ಪುಸ್ತಕಗಳಿದ್ದು, ಎಲ್ಲ ಪುಸ್ತಕಗಳನ್ನು ಜೋಡಿಸಿಡಲು ಡಿಅಲ್ಮೇರಾಗಳಿಲ್ಲ. ಇರುವ 11 ರ್ಯಾಕ್ಗಳಲ್ಲಿ ಮಾತ್ರ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ಉಳಿದ ಪುಸ್ತಕಗಳನ್ನು ನೆಲದ ಮೇಲೆ, ಸೆಲ್ಪ್ಗಳ ಮೇಲೆ ಬಟ್ಟೆಗಂಟುಗಳನ್ನು ಕಟ್ಟಿ ಇಡಲಾಗಿದೆಯಲ್ಲದೆ ಎಲ್ಲೆಂದರಲ್ಲಿ ಗಂಟು ಕಟ್ಟಿ ಇಡಲಾಗಿದೆ. ಇನ್ನು ಕೆಲವನ್ನಂತೂ ಮೂಲೆ ಮೂಲೆಗೆ ಬಿಸಾಡಲಾಗಿದೆ.
ಗ್ರಂಥಾಲಯಕ್ಕೆ 10 ಕನ್ನಡ ದಿನಪತ್ರಿಕೆಗಳು, 2 ಆಂಗ್ಲ ಪತ್ರಿಕೆಗಳು, 4 ವಾರಪತ್ರಿಕೆಗಳು, 7 ಮಾಸಪತ್ರಿಕೆಗಳು ಬರುತ್ತಿವೆ. ಗ್ರಂಥಾಲಯದಲ್ಲಿ 1505 ಸದಸ್ಯರಿದ್ದು, ಪ್ರತಿದಿನ 100ಕ್ಕೂ ಅಧಿಕ ಓದುಗರು ಬರುತ್ತಾರೆ. ಗ್ರಂಥಾಲಯದಲ್ಲಿ ಎರಡು ಕೊಠಡಿಗಳಿದ್ದು, ರ್ಯಾಕ್ಗಳ ಜತೆಗೆ 24 ಚೇರ್ಗಳಿದ್ದು, 5 ಟೇಬಲ್ಗಳು ಮಾತ್ರ ಇವೆ. 24 ಜನಗಳು ಮಾತ್ರ ಕುಳಿತು ಓದಲು ಅವಕಾಶವಿದ್ದು, ಇತರೆ ಓದುಗರು ಹೊರಗೆ ನಿಂತು ಓದಬೇಕು. ಗ್ರಂಥಾಲಯಕ್ಕೆ ಬರುವವರಿಗೆ ಪೂರಕ ವಾತಾವರಣವೇ ಇಲ್ಲದಂತಾಗಿದೆ.
ದಾನಿಗಳ ಕೊಡುಗೆ ಮೂಲೆ ಸೇರಿವೆ: ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪಟ್ಟಣದ 5-6 ಜನ ದಾನಿಗಳು ಗಣಕ ಯಂತ್ರ ಹಾಗೂ ಇತರೆ ಸಾಮಾನು ಕೊಡಿಸಿದ್ದರು. ಆದರೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಲು ಆಗದೇ ಅವುಗಳು ಸಹಿತ ಮೂಲೆ ಸೇರಿವೆ.
ಸಿಬ್ಬಂದಿ ಕೊರತೆ: ಈ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆಯೂ ಕಾಡುತ್ತಿದ್ದು, ಇದ್ದ ಗ್ರಂಥಪಾಲಕರು 2018ರಲ್ಲಿ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 11 ತಿಂಗಳಿನಿಂದ ಕಾಯಂ ಗ್ರಂಥಾಲಯ ಸಾವರ್ತಿ ಮತ್ತು ಗುತ್ತಿಗೆ ಆಧಾರದ ಗ್ರಂಥಾಲಯ ಸಹಾಯಕ ಗ್ರಂಥಾಲಯ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನಾಲ್ಕು ಸಿಬ್ಬಂದಿ ಕೊರತೆ ಕಾಡುತ್ತಿದೆ.
ಪಿಯುಸಿ, ಪದವಿ ತರಗತಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಅವರೆಲ್ಲರೂ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೇಳುತ್ತಾರೆ. ಅವರಿಗೆ ಇತ್ತೀಚಿನ ಪುಸ್ತಕಗಳು ಬೇಕು. ಬಡ ವಿದ್ಯಾರ್ಥಿಗಳು ಸಿಇಟಿ ಪುಸ್ತಕಗಳನ್ನು ಕೇಳುತ್ತಿದ್ದಾರೆ, ಅವುಗಳನ್ನು ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಒದಗಿಸಬೇಕು ಎನ್ನುವುದು ಅನೇಕ ಓದುಗರ ಆಗ್ರಹ. ಸ್ವಂತ ಕಟ್ಟಡ, ಸಿಬ್ಬಂದಿ, ಕಂಪ್ಯೂಟರ್, ಟೇಬಲ್, ಕುರ್ಚಿ, ರ್ಯಾಕ್ ಕೊರತೆ ಸೇರಿದಂತೆ ಅನೇಕ ಕೊರತೆ ಅನುಭವಿಸುತ್ತಿರುವ ಈ ಗ್ರಂಥಾಲಯಕ್ಕೆ ಅನುದಾನ ನೇರವಾಗಿ ಬರುವುದಿಲ್ಲ.
ಏನಿದ್ದರೂ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಬರುತ್ತವೆ. ಅಲ್ಲಿಂದಲೇ ಎಲ್ಲ ಕೆಲಸಗಳು ನಡೆಯಬೇಕು ಎನ್ನುತ್ತಾರೆ ಕೇಂದ್ರದ ಅಟೆಂಡರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ