ತುಂಬಿದರೆ ತುಂಬಿದರೆ ಅಪಾಯ ಗ್ಯಾರಂಟಿ
Team Udayavani, Nov 4, 2019, 2:30 PM IST
ನರಗುಂದ: ಈ ಊರಲ್ಲಿ ಬಾವಿಯೊಂದಿದ್ದು,ಈ ಬಾವಿಯ ಮೇಲ್ಮಟ್ಟಕ್ಕೆ ನೀರು ಬಂದರೆ ಭೂ ಕುಸಿತ ಕಟ್ಟಿಟ್ಟ ಬುತ್ತಿ. ಇದೇನಪ್ಪಾ, ಬಾವಿಯ ನೀರು ಹೆಚ್ಚಳವಾಗುವುದಕ್ಕೂ, ಭೂ ಕುಸಿತಕ್ಕೂ ಏನು ಸಂಬಂಧ ಎಂದರೆ ಸಂಬಂಧ ಇದೆ. ಅಂತರ್ಜಲ ಹೆಚ್ಚಳವಾದ ನೀರು ಪಟ್ಟಣದ ದೇಸಾಯಿ ಬಾವಿಯಲ್ಲಿ ಸಂಗ್ರಹ ಆಗುತ್ತಿದೆ. ಈ ಬಾವಿ ನೀರು ನೆಲ ಮಟ್ಟದಿಂದ 5-6 ಅಡಿ ಕೆಳಗಿರಬೇಕು. ನೆಲಮಟ್ಟಕ್ಕೆ ನೀರು ಬರದಂತೆ ನೋಡಿಕೊಳ್ಳಬೇಕೆಂದು ಹೈದರಾಬಾದ್ ಮೂಲದ ವಿಜ್ಞಾನಿಗಳ ತಂಡ 2009ರಲ್ಲೇ ಅಧ್ಯಯನ ವರದಿ ಸಲ್ಲಿಸಿದೆ. ಹೀಗಾಗಿ ಈ ಬಾವಿ ತುಂಬದಂತೆ ದಿನದ 24 ಗಂಟೆಯೂ ಪಂಪ್ಸೆಟ್ನಿಂದ ನೀರು ಹೊರ ಹಾಕಲಾಗುತ್ತಿದೆ. ದಶಕದಿಂದ ನಡೆಯುತ್ತಿದೆ ಈ ಕಾರ್ಯ: ಈ ಊರಲ್ಲಿರುವ ಅಂತರ್ಜಲವೆಲ್ಲಾ ದೇಸಾಯಿ ಬಾವಿಯಲ್ಲಿಯೇ ಸೇರುತ್ತಿರುವುದರಿಂದ 2009ರಿಂದ ಇಲ್ಲಿಯವರೆಗೆ 2 ಪಂಪ್ಸೆಟ್ಗಳ ಮೂಲಕ ನೀರನ್ನು 24 ಗಂಟೆಯೂ ಹೊರ ಹಾಕಲಾಗುತ್ತಿದೆ. ಕೆಲವೊಂದಿಷ್ಟು ನೀರನ್ನು ಬಾವಿ ಪಕ್ಕದಲ್ಲೇ ನಿರ್ಮಿಸಿದ ಡೋಣಿಯಲ್ಲಿ ಸಂಗ್ರಹಿಸುತ್ತಿದ್ದರೆ, ಒಂದಷ್ಟು ನೀರು ಸಾರ್ವಜನಿಕರಿಗೆ ಬಳಕೆಯಾಗುತ್ತಿದೆ. ಉಳಿದ ನೀರು ಚರಂಡಿ ಸೇರುತ್ತಿದೆ.
ಅಂತರ್ಜಲ ಹೆಚ್ಚಳವೇ ಮಾರಕ: ಬಾವಿಯ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸಬೇಕೆಂಬ ಉದ್ದೇಶದಿಂದ ಪಕ್ಕದಲ್ಲೇ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ ಶೇ.10 ಮಾತ್ರ ನೀರು ಶುದ್ಧೀಕರಣ ವಾಗುವುದರಿಂದ ಘಟಕಕ್ಕೆ ಬೀಗ ಜಡಿಯಲಾಗಿದೆ. ಇತ್ತ ಕುಡಿಯಲೂ ಬಳಕೆಯಾಗದೇ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿ ಮಾರಕವಾಗಿ ಪರಿಣಮಿಸಿದೆ. ಅಂತರ್ಜಲ ಹೆಚ್ಚಳದಿಂದ ದೇಸಾಯಿ ಬಾವಿ ನೀರು ಹೊರ ಹಾಕುವಲ್ಲಿ ಮಾತ್ರ ಮುತುವರ್ಜಿ ವಹಿಸಿದ ಪುರಸಭೆ ಅಂತರ್ಜಲ ಹೆಚ್ಚಳ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಜೀವಂತವಾಗಿದೆ.
-ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ