ನಿಷೇಧಾಜ್ಞೆ ನಡುವೆಯೂ ಮುಂದುವರಿದ ಅಕ್ರಮ ಗಣಿಗಾರಿಕೆ
Team Udayavani, Nov 6, 2019, 3:28 PM IST
ಶ್ರೀರಂಗಪಟ್ಟಣ: ಜಿಲ್ಲಾಡಳಿತದ ನಿಷೇಧಾಜ್ಞೆ ನಡುವೆಯೂ ಅಕ್ರಮ ಗಣಿಗಾರಿಕೆ ಮುಂದುವರಿದಿದ್ದು, ಇದಕ್ಕೆ ಅಧಿಕಾರಿಗಳು ಗಣಿಗಾರಿಕೆ ಮಾಲೀಕರೊಂದಿಗೆ ಶಾಮೀಲಾಗಿರುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಎರಡು ತಿಂಗಳ ಹಿಂದೆ ತಾಲೂಕು ಆಡಳಿತದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಬೀಗಮುದ್ರೆ ಹಾಕಿದ್ದರೂ, ಕ್ರಷರ್ ಮಾಲೀಕರು ಇದನ್ನು ಲೆಕ್ಕಿಸದೆ ರಾತ್ರಿವೇಳೆ ಅಕ್ರಮವಾಗಿ ಜಲ್ಲಿಕ್ರಷರ್ಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳು ತಾಲೂಕಾದ್ಯಂತ ಕೇಳಿ ಬರುತ್ತಿವೆ. ಅರಣ್ಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಸಿಬ್ಬಂದಿ ಸೇರಿ ಅಕ್ರಮವಾಗಿ ನಡೆಯುತ್ತಿದ್ದ ಕ್ರಷರ್ಗಳ ಮೇಲೆ ದಾಳಿ ನಡೆಸಿ ಯಂತ್ರೋಪಕರಣಗಳು ವಶಪಡಿಸಿಕೊಂಡು, ಬೀಗಮುದ್ರೆ ಹಾಕಿದ್ದರೂ ಮತ್ತೇ ಚಾಲನೆಗೊಂಡಿರುವುದಕ್ಕೆ ಅಧಿಕಾರಿಗಳ ಮೇಲೆ ಸಂಶಯ ಮೂಡಿದೆ.
ತಾಲೂಕಿನ ಅರಕೆರೆ ವ್ಯಾಪ್ತಿಯ 602 ಎಕರೆ ಅರಣ್ಯ ಭೂಮಿಯಲ್ಲಿ ನಡೆಯುತ್ತಿದ್ದ ಬಹುತೇಕ ಅಕ್ರಮ ಸ್ಟೋನ್ ಕ್ರಷರ್ ಹಿಂದೆ ತಾಲೂಕು ಆಡಳಿತ, ಗಣಿ ಮತ್ತು ಭೂಜ್ಞಾನ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಮುಂಡುಗದೊರೆ ಕ್ರಷರ್ಗಳು ಹಾಗೂ ಹಂಗರಹಳ್ಳಿ ವ್ಯಾಪ್ತಿಯಸ್ಟೋನ್ ಕ್ರಷರ್ಗಳಿಗೆ ಬೀಗಮುದ್ರೆ ಒತ್ತಿದ್ದರು. ಈಗ ಅವೆಲ್ಲವೂ ತೆರೆದುಕೊಂಡು ಗಣಿ ಉದ್ಯಮದಲ್ಲಿ ಭಾಗಿಯಾಗಿವೆ. ಇಷ್ಟಾದರು ಇದನ್ನು ಲೆಕ್ಕಿಸದೆ ಹಂಗರಹಳ್ಳಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಕಾರ್ಯನಿರ್ವಸುತ್ತಿದೆ. ತಾಲೂಕಿನ ಟಿ.ಎಂ.ಹೊಸೂರು, ಹಂಗರಳ್ಳಿ, ಮುಂಡುಗದೊರೆ, ಕೋಡಿಶೆಟ್ಟಿಪುರ, ಗಣಂಗೂರು ಭಾಗದಿಂದ ಪ್ರತಿದಿನ ಸಾವಿರಾರು ಟಿಪ್ಪರ್ಗಳಲ್ಲಿ ಜೆಲ್ಲಿ, ಪೌಡರ್, ಜೆಲ್ಲಿ ಯಾವುದೇ ತಡೆಯಿಲ್ಲದೆ ಮೈಸೂರು ಸೇರುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ