ಬೈಕ್ ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಯುವಕರ ಸಾವು
Team Udayavani, Nov 9, 2019, 9:06 AM IST
ಲೋಕಾಪುರ (ಬಾಗಲಕೋಟೆ): ಯಾದವಾಡ ರಸ್ತೆಯಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಶುಕ್ರವಾರ ರಾತ್ರಿ 11 ಘಂಟೆ ಸುಮಾರು ಸಿಮೆಂಟ್ ಕಾರ್ಖಾನೆ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಸವರಾಜ ಮಾರುತಿ ಪಲ್ಲೆದ (23) ಮತ್ತು ಹಿಂಬದಿ ಸವಾರ ಮನೋಹರ ಬಸವರಾಜ ಶೀಲವಂತರ (23) ಇಬ್ಬರಿಗೂ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಟಿಪ್ಪರ್ ಚಾಲಕ ಮಂಜುನಾಥ ಕರಡಿಗುಡ್ಡ ಪರಾರಿಯಾಗಿದ್ದಾನೆ.