ಬೋಳ ಗ್ರಾಮಕ್ಕೆ ಹಾರಿಬಂದ ನಿಗೂಢ ಬಲೂನ್: ಬೆಚ್ಚಿಬಿದ್ದ ಜನ; ಅದೇನು ಗೊತ್ತಾ?


Team Udayavani, Nov 16, 2019, 10:34 AM IST

b

ಬೆಳ್ಮಣ್: ಬಿಳಿ ಬಣ್ಣದ ದೊಡ್ಡದೊಂದು ಬಲೂನ್, ಅದರಲ್ಲೊಂದು ಉಪಕರಣ, ಒಳಗಡೆ ಏನೊ ಚಿಪ್ ನಂತಹ ವಸ್ತು. ಬೆಳ್ಳಂಬೆಳಗ್ಗೆ ಮನೆಯ ಬಳಿಯ ತೋಟದಲ್ಲಿ ಇದನ್ನು ಕಂಡ ಆ ಮನೆ ಮಂದಿಗೆ ಆತಂಕ. ಏನೋ ಪ್ಯಾರಾಚೂಟ್ ಬಂದು ನಮ್ಮ ಮನೆಗೆ ಬಿದ್ದಿದೆ. ಬಿದ್ದಿದ್ದು ಎನು ಎನ್ನುವುದೂ ಗೊತ್ತಿಲ್ಲದೆ ಬಾಂಬ್ ನಂತಹ ಸಿಡಿಯುವ ವಸ್ತು ಇರಬಹುದಾ ಎಂಬ ಭಯ!

ಇದೆಲ್ಲಾ ಕಂಡು ಬಂದಿದ್ದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ. ಇಲ್ಲಿನ ನಿವಾಸಿ ಕಿಶೋರ್ ಅವರ ಮನೆಯ ತೋಟದಲ್ಲಿ ದೊಡ್ಡ  ಬಿಳಿ ಬಣ್ಣದ ಬಲೂನ್ ನೇತಾಡುತ್ತಿತ್ತು.

ಅದರ ರಿಸಿವರ್ ನಂತಹ ಉಪಕರಣ ಮಾತ್ರ ನೆಲದಲ್ಲಿ ನೆಲಕ್ಕೆ ಬಿದ್ದಿತ್ತು. ಇದೇನೋ ವಿಚಿತ್ರ ಎಂಬಂತೆ ನೋಡಲು ಜನರೂ ಬರುತ್ತಿದ್ದರು.

ನಿಜಕ್ಕೂ ಅಲ್ಲೇನಿತ್ತು?

ಬೋಳ ಗ್ರಾಮದ ಕಿಶೋರ್ ಅವರ ಮನೆಯ ಬಳಿ ಬಂದು ಬಿದ್ದಿದ್ದು ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ ಎಂಬ ಸಾಧನ. ಇದನ್ನು ಗಾಳಿಯ ಗುಣಮಟ್ಟ ಅಳೆಯಲು ಬಳಸಲಾಗುತ್ತದೆ.

ದೊಡ್ಡದಾದ ಗಾಳಿ ಬಲೂನಿಗೆ ಅನ್ವೇಷಕ ಉಪಕರಣವನ್ನು ಕಟ್ಟಿ ಗಾಳಿಯಲ್ಲಿ ತೇಲಿ ಬಿಡಲಾಗುತ್ತದೆ. ಇದು ನೆಲದಿಂದ ಮೇಲಕ್ಕೆ ಹಾರಾಡುತ್ತಾ ವಿವಿಧ ಸ್ಥರಗಳ ಹವಾಮಾನ, ಗಾಳಿಯ ವೇಗ, ಉಷ್ಣಾಂಶ, ಆದ್ರತೆ, ಗಾಳಿಯ ಒತ್ತಡವನ್ನು ಲೆಕ್ಕಾಚಾರ ಹಾಕಿ ತನ್ನ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ.

ಕರ್ನಾಟಕದ ಎರಡು ಕಡೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಉಪಕರಣ ಹಾರಿ ಬಿಟ್ಟು ಮಾಹಿತಿ ಸಂಗ್ರಹಿಸುವ ಹವಾಮಾನ ಇಲಾಖೆಗೆ ಸೇರಿದ ಕೇಂದ್ರವಿದೆ.

ದೇಶವ್ಯಾಪಿಯಾಗಿ ಒಟ್ಟು 36 ಹವಾಮಾನ ಕೇಂದ್ರಗಳಿದ್ದು, ಏಕಕಾಲದಲ್ಲಿ ಬೆಳಿಗ್ಗೆ 4.30ಕ್ಕೆ ಈ ಉಪಕರಣವನ್ನು ಹಾರಿಬಿಡಲಾಗುತ್ತದೆ. ಈ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.

ಜನವಸತಿ ಪ್ರದೇಶದಲ್ಲಿ ಯಾಕೆ ಬೀಳುತ್ತದೆ?

ಸಾಮಾನ್ಯವಾಗಿ ಈ ಉಪಕರಣಗಳು ಸಮುದ್ರ ಅಥವಾ ಜನವಸತಿ ರಹಿತ ಸ್ಥಳಗಳಲ್ಲಿ ಪತನಗೊಳ್ಳುತ್ತದೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೀಗೆ ಜನವಸತಿ ಕೇಂದ್ರಗಳಲ್ಲಿ ಬೀಳುತ್ತದೆ. ಈ ಹಿಂದೆ ಮಂಗಳೂರಿನ ನಂತೂರು, ಎಡ್ತೂರಿನಲ್ಲೂ ಇದೇ ರೀತಿ ಜನವಸತಿ ಕೇಂದ್ರದಲ್ಲಿ ಪತನವಾಗಿ ಆತಂಕ ಸೃಷ್ಟಿಯಾಗಿತ್ತು.

 

ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು, ಗ್ರಾಮ ಕಂದಾಯ ನಿರೀಕ್ಷಕರು ಭೇಟಿ ನೀಡಿದರು. ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.