ಕನಕದಾಸರ ಸಂದೇಶ ದೇಶಕ್ಕೆ ತಲುಪಿಸಿ
Team Udayavani, Nov 16, 2019, 11:30 AM IST
ಧಾರವಾಡ: ಕನಕದಾಸರು ಸೇರಿದಂತೆ ಅನೇಕ ಕನ್ನಡದ ಮಹಾನ್ ಸಂತ ಕವಿಗಳ ತತ್ವ, ಸಾಮಾಜಿಕ ನಿಲುವುಗಳನ್ನು ಇಡಿ ದೇಶಕ್ಕೆ ಎಲ್ಲ ಭಾಷೆಗಳಿಂದ ತಲುಪಿಸಬೇಕಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ|ಶ್ರೀರಾಮ ಇಟ್ಟಣ್ಣವರ ಹೇಳಿದರು. ಕವಿವಿ ಕನಕ ಅಧ್ಯಯನ ಪೀಠವು ಕನಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರ ಕೀರ್ತನೆ, ಕಾವ್ಯ ಮತ್ತು ಸಾಹಿತ್ಯವು ವೈಚಾರಿಕ ಚಿಂತನೆ, ಸಾಮಾಜಿಕ ನಿಲುವುಗಳನ್ನು ಹೊಂದಿದೆ. ಕೆಳಸ್ತರದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತ. ಕನಕದಾಸರು ತಳವರ್ಗದ ಪ್ರತಿನಿಧಿಯಾಗಿ ಬಿಂಬಿತವಾಗಿದ್ದು, ಇಂದು ಅವರ ಕೀರ್ತನೆ, ಕಾವ್ಯ, ಸಾಹಿತ್ಯ ಎಲ್ಲವೂ ಪ್ರಸ್ತುತವಾಗಿದೆ ಎಂದರು.
ಕನಕ ಅಧ್ಯಯನ ಪೀಠದಿಂದ ಹೊರತಂದ ಡಾ| ಪಿ.ಆರ್. ಪಂಚಮುಖೀ ಬರೆದಿರುವ “ತತ್ವ ವೇದ ಬೇಸ್ಡ್ ಇನ್ ದಾಸ್ ಸಾಹಿತ್ಯ ವಿಥ್ ಅ ಫೋಕಸ್ ಆನ್ ದಿ ಕಾಂಟ್ರಾಬ್ಯುಶನ್ ಆಫ್ ಕನಕದಾಸ’, ಡಾ| ಚಂದ್ರಶೇಕರ ರೊಟ್ಟಿಗವಾಡ ರಚಿತ “ದಾಸ ಪರಂಪರೆ ಮತ್ತು ಕನಕದಾಸರು’, ಡಾ| ಕೆ.ಕೇಶವಶರ್ಮ ಬರೆದಿರುವ “ಕಾವ್ಯತತ್ವಗಳು ಮತ್ತು ಕನಕರ ಕಾವ್ಯ’ ಹಾಗೂ ಡಾ| ಬಸು ಬೇವಿನಗಿಡದ ರಚಿಸಿದ “ಕನಕದಾಸರು ಮತ್ತು ಮಧುರ ಚೆನ್ನರು’ ಪುಸ್ತಕಗಳನ್ನು ಕವಿವಿ ಪ್ರಭಾರ ಕುಲಪತಿ ಪ್ರೊ| ಎ.ಎಸ್. ಶಿರಾಳಶೆಟ್ಟಿ ಲೋಕಾರ್ಪಣೆಗೊಳಿಸಿದರು.
ಕನಕ ಅಧ್ಯಯನ ಪೀಠದ ಸಂಯೋಜಕ ಡಾ| ಬಿ.ವಿ. ಯಕ್ಕುಂಡಿಮಠ ಮಾತನಾಡಿದರು. ಕವಿವಿ ಪ್ರಭಾರ ಕುಲಪತಿ ಪ್ರೊ|ಎ.ಎಸ್. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಸಿ.ಬಿ. ಹೊನ್ನು ಸಿದ್ಧಾರ್ಥ, ಪ್ರೊ| ಎನ್. ಎಂ. ಸಾಲಿ, ಪ್ರೊ| ಮಲ್ಲಿಕಾರ್ಜುನ ಪಾಟೀಲ, ಪ್ರೊ| ಜಿ.ಎಂ. ಹೆಗಡೆ, ಡಾ| ಎಸ್.ಟಿ. ಬಾಗಲಕೋಟಿ, ಡಾ| ಬಿ.ವಿ. ಯಕ್ಕುಂಡಿಮಠ, ಡಾ| ಸುಭಾಶಚಂದ್ರ ನಾಟೀಕರ, ಡಾ| ಸಿ.ಎಂ. ಕುಂದಗೋಳ, ಡಾ| ಧನವಂತ ಹಾಜವಗೋಳ, ಡಾ| ರುದ್ರೇಶ ಮೇಟಿ, ಡಾ| ವಿಶ್ವನಾಥ ಚಿಂತಾಮಣಿ, ಪ್ರೊ| ವೇದಮೂರ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ